Advertisement
MIRROR FOCUS

ಗಣಿಗಾರಿಕೆ ಭಾರತಕ್ಕೆ ಲಾಭವೇ ಜಾಸ್ತಿ

Share

ಭಾರತ ದೇಶವು ಹೇರಳ ಸಂಪತ್ತುಗಳ ದೇಶ. ಈ ಹಿಂದೆ ಅನೇಕ ರಾಜಗಳು ದಂಡೆತ್ತಿ ಬಂದದ್ದೂ ಅದೇ ಕಾರಣದಿಂದ. ಇದೀಗ ಭಾರತವು ತನ್ನ ನೆಲದಲ್ಲೇ ಲಭ್ಯ ಇರುವ ಹೇರಳ ಖನಿಜ ಸಂಪನ್ಮೂಲವನ್ನು ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್​​ಇಪಿ) ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ಇಲ್ಲಿಯವರೆಗೆ ಶೇ.30ರಷ್ಟು ಮಾತ್ರ ಖನಿಜ ಸಂಪನ್ಮೂಲಗಳನ್ನು ಪತ್ತೆ ಹಚ್ಚಲಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಗಣಿಗಾರಿಕೆ ನಡೆಸಿಲ್ಲ. ತನ್ನ ನೆಲದಲ್ಲೇ ಲಭ್ಯ ವಿರುವ ಹೇರಳ ಖನಿಜ ಸಂಪನ್ಮೂಲವನ್ನು ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ವರದಿ ತಿಳಿಸಿದೆ. ಖನಿಜ ಸಂಪನ್ಮೂಲಗಳನ್ನು ಹೆಚ್ಚುವರಿ ಮೈನಿಂಗ್ ಮೂಲಕ ಪಡೆದರೆ ಪ್ರತಿ ವರ್ಷ 100 ಬಿಲಿಯನ್ ಡಾಲರ್ ಅಂದರೆ 9 ಲಕ್ಷ ಕೋಟಿ ರೂ ಆಮದು ವೆಚ್ಚವನ್ನು ತಪ್ಪಿಸಬಹುದು ಎಂದು ಹೇಳಿದೆ.

ಆದರೆ, ಸಾಕಷ್ಟು ವೆಚ್ಚ ಮಾಡಿ ಸಂಪನ್ಮೂಲವನ್ನು ಪತ್ತೆ ಮಾಡಿದರೂ, ಆ ನಿಕ್ಷೇಪಗಳ ಮೇಲೆ ಕಂಪನಿಗೆ ಹಕ್ಕು ಇರುವುದಿಲ್ಲ. ಸರ್ಕಾರವು ಹರಾಜುಗಳ ಮೂಲಕ ಮೈನಿಂಗ್ ಲೀಸ್​ಗಳನ್ನು ಹಂಚಿಕೆ ಮಾಡುತ್ತದೆ. ಇದರಿಂದಾಗಿ, ಸಂಪನ್ಮೂಲ ಅನ್ವೇಷಣೆಗೆ ಕಂಪನಿಗಳು ಹಿಂದೇಟು ಹಾಕುತ್ತವೆ ಎಂಬುದನ್ನು ಈ ವರದಿ ಹೇಳಿದೆ.

ಭಾರತಕ್ಕೆ ಸಾಕಷ್ಟು ಖನಿಜ ಮತ್ತು ಲೋಹಗಳ ಅವಶ್ಯಕತೆ ಇದೆ. 2022ರಲ್ಲಿ ಭಾರತವು ಈ ಖನಿಜ ಮತ್ತು ಲೋಹಗಳನ್ನು 157 ಬಿಲಿಯನ್ ಡಾಲರ್ ಮೌಲ್ಯದಷ್ಟು ಆಮದು ಮಾಡಿಕೊಂಡಿತ್ತು. ಆ ವರ್ಷ ಭಾರತದ ಒಟ್ಟು ಆಮದಿನಲ್ಲಿ ಇವುಗಳ ಪಾಲು ಶೇ. 20ಕ್ಕಿಂತಲೂ ಹೆಚ್ಚಿತ್ತು. ಅದರಲ್ಲೂ ಕ್ರಿಟಿಕಲ್ ಮಿನರಲ್ ಎನ್ನಲಾದ ಕಾಪರ್, ನಿಕಲ್, ಲಿಥಿಯಂ, ಕೊಬಾಲ್ಟ್ ಅನ್ನು ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

13 minutes ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

24 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago