Advertisement
ಗ್ರಾಮೀಣ

ಜೇನುಸಾಕಣೆಗೆ ಉತ್ತೇಜನ – ಸರ್ಕಾರದಿಂದ NBHM ಮೂಲಕ ನೆರವು

Share

ಜೇನುಸಾಕಣೆ ಕೇವಲ ಒಂದು ಉಪಕಸುಬು ಮಾತ್ರವಲ್ಲ, ಹಲವಾರು ಕುಟುಂಬಗಳಿಗೆ ಜೇನುಸಾಕಣೆಯೇ ಮುಖ್ಯ ಉದ್ಯೋಗವಾಗಿದೆ. ಜೇನುತುಪ್ಪ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಈ ನಿಟ್ಟಿನಲ್ಲಿ ವೈಜ್ಞಾನಕ ವಿಧಾನದಲ್ಲಿ ಜೇನುಸಾಕಣೆಗೆ ಉತ್ತೇಜಿಸಲು ನ್ಯಾಷನಲ್ ಬೀಕೀಪಿಂಗ್ ಅಂಡ್ ಹನಿ ಮಿಷನ್ ಅನ್ನು ನಡೆಸುತ್ತಿದೆ.

ರಾಷ್ಟ್ರೀಯ ಜೇನು ಮಂಡಳಿ ಮೂಲಕ 2020-21ರಲ್ಲಿ ರಾಷ್ಟ್ರೀಯ ಜೇನುಸಾಕಣೆ ಮಿಷನ್ ಅನ್ನು 500 ಕೋಟಿ ರೂ ಬಜೆಟ್ ನಲ್ಲಿ ಮೂರು ವರ್ಷಗಳಿಗೆ ಆರಂಭಿಸಲಾಗಿತ್ತು. ನಂತರ ಇನ್ನೂ ಮೂರು ವರ್ಷ ವಿಸ್ತರಿಸಲಾಗಿದೆ. ಈ ಸ್ಕೀಮ್ 2025-26ವರೆಗೂ ಇರುತ್ತದೆ. ಅಂದರೆ 2026ರ ಮಾರ್ಚ್ 31 ರವರೆಗೂ ಜೇನುಸಾಕಣೆ ಯೋಜನೆ ಚಾಲನೆಯಲ್ಲಿ ಇರಲಿದೆ.

ಭಾರತದಲ್ಲಿ ಜೇನುಸಾಕಣೆಗೆ ಅನುಕೂಲವಾಗಿರುವಂತಹ ವೈವಿಧ್ಯಮಯ ಕೃಷಿ ವಾತಾವರಣ ಇದೆ. ಇದು ಗ್ರಾಮೀಣ ಭಾಗದ ಜನರ ಬದುಕಿಗೆ ಆಧಾರವಾಗುವುದರ ಜೊತೆ ಜೇನು ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಲು ಬೇಕಾದ ಸಾಮರ್ಥ್ಯ ಇರುವುದನ್ನು ಸರ್ಕಾರ ಕಂಡುಕೊಂಡಿದೆ. ಈ ಕಾರಣಕ್ಕೆ ರಾಷ್ಟ್ರೀಯ ಜೇನುಸಾಕಾಣೆ ಯೋಜನೆ(ಎನ್ ಬಿಎಚ್ಎಂ) ಅನ್ನು ಸರ್ಕಾರ ಹಮ್ಮಿಕೊಂಡಿದೆ.

ಜೇನುಸಾಕಣೆ ಯೋಜನೆಯನ್ನು ಮೂರು ಮುಖ್ಯ ಉಪಮಿಷನ್ ಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಮಿಷನ್ ನಲ್ಲಿ ವೈಜ್ಞಾನಿಕವಾಗಿ ಜೇನುಸಾಕಣೆ ಮೂಲಕ ಬೆಳೆಗಳ ಉತ್ಪಾದನೆಗೆ ಪುಷ್ಟ ಕೊಡಲಾಗುತ್ತದೆ. ಎರಡನೇ ಮಿಷನ್ ನಲ್ಲಿ ಜೇನು ಉತ್ಪನ್ನಗಳ ಸಂಗ್ರಹ ಸಂಸ್ಕರಣೆ, ಮಾರಾಟ, ಮೌಲ್ಯ ವರ್ಧನೆ ಇತ್ಯಾದಿ ಕಾರ್ಯಗಳತ್ತ ಗಮನ ನೀಡಲಾಗುತ್ತದೆ. ಮೂರನೇ ಮಿನಿ ಮಿಷನ್ ನಲ್ಲಿ ವಿವಿಧ ಪ್ರದೇಶಗಳ ವಾತಾವರಣ ಮತ್ತು ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸೂಕ್ತ ವಿಧಾನದ ಜೇನುಸಾಕಣೆಗೆ ಬೇಕಾದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸಲು ಒತ್ತುಕೊಡಲಾಗುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

23 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

2 days ago