ಸಾಮಾನ್ಯ ಜ್ಞಾನಕ್ಕಾಗಿ ಹುಬ್ಬಳ್ಳಿ ನಗರದ ಶೆಟ್ಟರ ಕಾಲೊನಿಯ ಒಂದು ವರ್ಷದ 11 ತಿಂಗಳ ಬಾಲಕಿ ಆರ್ನಾ ಪಾಟೀಲ, ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುರಡಕಟ್ಟಿ ಗ್ರಾಮದ ಶಿದ್ರಾಮಗೌಡ ಪಾಟೀಲ ಮತ್ತು ವಿದ್ಯಾಶ್ರೀ ಪಾಟೀಲ ಇವರ ಪುತ್ರಿ.
ನಾನು ಮತ್ತು ಪತ್ನಿ ಬಿಡುವಿದ್ದಾಗ ಹೇಳಿಕೊಟ್ಟ ಸಾಮಾನ್ಯ ಜ್ಞಾನವೇ ಆರ್ನಾ ಸಾಮಾನ್ಯ ಜ್ಞಾನದಲ್ಲಿ ಸಾಧನೆ ಮಾಡಲು ಪ್ರೇರಣೆ. ಒಂದು ವರ್ಷ 8 ತಿಂಗಳಿದ್ದಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಮಗಳು ಭಾಗವಹಿಸಿದ್ದಳು. 10 ಬಗೆಯ ತರಕಾರಿ, 11 ವಿವಿಧ ಹಣ್ಣು, 22 ಪ್ರಾಣಿಗಳ ಹೆಸರನ್ನು ಸರಾಗವಾಗಿ ಹೇಳುತ್ತಾಳೆ’ ಎಂದು ತಂದೆ ಶಿದ್ರಾಮಗೌಡ ಪಾಟೀಲ ತಿಳಿಸಿದರು. ‘ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆಗಳನ್ನು ಪಟಪಟನೆ ಹೇಳುತ್ತಾಳೆ. ರಾಷ್ಟ್ರೀಯ ಚಿಹ್ನೆ, ದೇಹದ 15 ಭಾಗಗಳನ್ನು ಗುರುತಿಸುತ್ತಾಳೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವು ಮಾಹಿತಿಗಳನ್ನು ಬಲ್ಲವಳಾಗಿದ್ದಾಳೆ’ ಎಂದರು.
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…
ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…