ಜುಲೈ ಮೊದಲ ವಾರದಲ್ಲಿ ಉತ್ತಮ ಮಳೆಯಿಂದ ದೇಶದ ಮಳೆ ಕೊರತೆ (Rainfall Deficit) ಗಣನೀಯವಾಗಿ ಕಡಿಮೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮುಂಗಾರು ಮತ್ತೆ ದುರ್ಬಲಗೊಂಡ ಪರಿಣಾಮ, ದೇಶದ ಒಟ್ಟಾರೆ ಮಳೆ ಕೊರತೆ ಮತ್ತೆ ಏರಿಕೆಯಾಗಿದೆ. ಮುಂಗಾರು ಚಟುವಟಿಕೆ ಕುಂಠಿತವಾಗಿರುವುದರಿಂದ ಕೃಷಿ ಹಾಗೂ ಖರೀಫ್ ಬೆಳೆಗಳ ಬಗ್ಗೆ ಮತ್ತೆ ಆತಂಕ ವ್ಯಕ್ತವಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ಜುಲೈ ಮೊದಲ ವಾರದಲ್ಲಿ ಸುರಿದ ಉತ್ತಮ ಮಳೆಯಿಂದ ದೇಶದ ಮಳೆ ಕೊರತೆ ಸುಮಾರು 14-15%ಕ್ಕೆ ಇಳಿದಿತ್ತು. ಆದರೆ ನಂತರ ಹಲವು ರಾಜ್ಯಗಳಲ್ಲಿ ಮಳೆ ಚಟುವಟಿಕೆ ಕುಂಠಿತಗೊಂಡ ಪರಿಣಾಮ ಕೊರತೆ ಮತ್ತೆ ಹೆಚ್ಚಿದೆ. ಮುಂದಿನ ಒಂದು ವಾರ ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಮತ್ತೆ ಬಲಗೊಳ್ಳುವ ಸಾಧ್ಯತೆ ಕಡಿಮೆ ಎಂದು IMD ತಿಳಿಸಿದೆ.
ಹವಾಮಾನ ತಜ್ಞರ ಪ್ರಕಾರ, ಮ್ಯಾಡನ್-ಜೂಲಿಯನ್ ಆಸಿಲೇಷನ್ (MJO) ಅನುಕೂಲಕರ ಸ್ಥಿತಿಯಲ್ಲಿ ಇಲ್ಲದಿರುವುದು ಹಾಗೂ ಮುಂಗಾರು ವ್ಯವಸ್ಥೆ ದುರ್ಬಲವಾಗಿರುವುದರಿಂದ ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಕಡಿಮೆಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಮುಂದಿನ ಕೆಲವು ದಿನಗಳು ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಮೇಲಿನ ಪರಿಣಾಮ : ಕರ್ನಾಟಕದಲ್ಲಿಯೂ ಇದೇ ಸ್ಥಿತಿ ಕಂಡುಬರುತ್ತಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು-ಮೋಡದ ವಾತಾವರಣ ಮುಂದುವರಿದಿದೆ. ಈ ಪರಿಸ್ಥಿತಿ ಮುಂದುವರಿದರೆ, ಅಡಿಕೆ, ಕಾಫಿ, ಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳ ತೇವಾಂಶದ ಮೇಲೆ ಪರಿಣಾಮ ಬೀಳಬಹುದು. ಖಾರೀಫ್ ಬೆಳೆಗಳ ಬೆಳವಣಿಗೆ ನಿಧಾನವಾಗಬಹುದು. ನೀರಾವರಿ ಅವಲಂಬಿತ ಪ್ರದೇಶಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಜಲಾಶಯಗಳಿಗೆ ನೀರಿನ ಹರಿವು ಕುಂಠಿತವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ರೈತರಿಗೆ ಸಲಹೆ : ಮುಂಗಾರು ವಿರಾಮದ ಈ ಅವಧಿಯಲ್ಲಿ ರೈತರು ಮಣ್ಣಿನ ತೇವಾಂಶ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಅಗತ್ಯವಿದ್ದಲ್ಲಿ ರಕ್ಷಕ ನೀರಾವರಿ ಒದಗಿಸಬೇಕು. ಗೊಬ್ಬರ ಹಾಗೂ ಕಳೆ ನಿರ್ವಹಣೆ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಮುಂದಿನ ಮಳೆಯ ಮುನ್ಸೂಚನೆಗಳನ್ನು ಗಮನದಲ್ಲಿಟ್ಟು ಕೃಷಿ ಕಾರ್ಯಗಳನ್ನು ಯೋಜಿಸಬೇಕು.
India’s southwest monsoon has weakened again after an early July revival, causing the national rainfall deficit to widen once more. The IMD expects below-normal rainfall over much of western and southern India during the coming week, raising concerns for Kharif crops and farm operations.

