ಭಾರತ, ನೇಪಾಳ ಮತ್ತು ಮಾಲ್ಡೀವ್ಸ್ ನಡುವಿನ ಕೃಷಿ ಸಹಕಾರಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಸಂಶೋಧನೆ, ಸುಧಾರಿತ ಬೀಜ ತಂತ್ರಜ್ಞಾನ, ಪಶುಸಂಗೋಪನೆ ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವ ಕೃಷಿ ಕ್ರಮಗಳ ಕುರಿತು ಮೂರು ದೇಶಗಳು ಸಹಕಾರ ವಿಸ್ತರಿಸುವ ಬಗ್ಗೆ ಒಪ್ಪಂದಕ್ಕೆ ಬಂದಿವೆ.
ನವದೆಹಲಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ನೇಪಾಳದ ಕೃಷಿ ಸಚಿವ ಡಾ. ಮದನ್ ಪ್ರಸಾದ್ ಪರಿಾಯರ್ ಹಾಗೂ ಮಾಲ್ಡೀವ್ಸ್ನ ಕೃಷಿ ಮತ್ತು ಪಶು ಕಲ್ಯಾಣ ರಾಜ್ಯ ಸಚಿವ ಅಹ್ಮದ್ ಹಸನ್ ದಿದಿ ಅವರೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಕೃಷಿ ಸಂಶೋಧನೆಗೆ ಸಂಬಂಧಿಸಿದ ಹಳೆಯ ಒಪ್ಪಂದಗಳನ್ನು ಇನ್ನಷ್ಟು ಬಲಪಡಿಸುವುದು, ಹೊಸ ಸಂಯುಕ್ತ ಯೋಜನೆಗಳನ್ನು ರೂಪಿಸುವುದು ಹಾಗೂ ರೈತರಿಗೆ ನೇರ ಲಾಭ ತಲುಪಿಸುವ ಬಗ್ಗೆ ಗಮನ ಹರಿಸಲಾಯಿತು. ಸುಧಾರಿತ ಹಾಗೂ ಹವಾಮಾನ ಪ್ರತಿರೋಧಕ ಬೀಜಗಳನ್ನು ನೇಪಾಳಕ್ಕೆ ಪೂರೈಸಲು ಭಾರತ ಸಮ್ಮತಿಸಿದ್ದು, ಬೆಳೆ ಉತ್ಪಾದಕತೆ ಹೆಚ್ಚಿಸಲು ಇದು ಸಹಕಾರಿಯಾಗಲಿದೆ.
ಮಾಲ್ಡೀವ್ಸ್ನಂತಹ ದ್ವೀಪ ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಮಣ್ಣು ಆರೋಗ್ಯ, ಲವಣದ ಸಮಸ್ಯೆ ಹಾಗೂ ಕಡಿಮೆ ಭೂಪ್ರದೇಶಕ್ಕೆ ಹೊಂದುವ ಕೃಷಿ ಮಾದರಿಗಳ ಬಗ್ಗೆ ಚರ್ಚೆ ನಡೆಯಿತು. ಪಶುಸಂಗೋಪನೆ ಕ್ಷೇತ್ರದಲ್ಲಿ ತಳಿಗಳ ಸುಧಾರಣೆ, ರೋಗ ನಿಯಂತ್ರಣ ಮತ್ತು ಸುಸ್ಥಿರ ಪಶುಪಾಲನಾ ಕ್ರಮಗಳಿಗೆ ಸಹಕಾರ ನೀಡುವ ಭರವಸೆಯನ್ನೂ ಭಾರತ ನೀಡಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮೂಲಕ ಸಂಶೋಧನಾ ಫಲಿತಾಂಶಗಳು, ತಾಂತ್ರಿಕ ಜ್ಞಾನ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೇಪಾಳ ಹಾಗೂ ಮಾಲ್ಡೀವ್ಸ್ಗೆ ಹಂಚಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.
ಈ ಮೂರು ದೇಶಗಳ ನಡುವಿನ ಕೃಷಿ ಸಹಕಾರ ದಕ್ಷಿಣ ಏಷ್ಯಾ ಹಾಗೂ ಭಾರತೀಯ ಮಹಾಸಾಗರ ಪ್ರದೇಶದಲ್ಲಿ ಆಹಾರ ಭದ್ರತೆ, ಹವಾಮಾನ ಪ್ರತಿರೋಧಕ ಕೃಷಿ ಮತ್ತು ರೈತರ ಆದಾಯ ಹೆಚ್ಚಳಕ್ಕೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ…
ಓದುಗರ ಅಭಿಪ್ರಾಯಕ್ಕೆ :
2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…
ಮೈಸೂರು ವಿಭಾಗದ ತಂಬಾಕು ರೈತರು ಖರೀದಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ…
ಅಡಿಕೆಯ ಹಳದಿ ಎಲೆ ರೋಗವು(YLD) ಕೇವಲ ಎಲೆಯ ಸಮಸ್ಯೆಯಲ್ಲ, ಮಣ್ಣಿನೊಳಗಿನ ಸೂಕ್ಷ್ಮಜೀವಿಗಳ ಸಮತೋಲನ…
ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಾರ್ಚ್ 3 ರವರೆಗೆ ಮಳೆಯ ಸಾಧ್ಯತೆ…
ವಾಣಿ ವಿಲಾಸ ಸಾಗರ ಜಲಾಶಯದ ಸಮೀಪದಲ್ಲೇ ಹಿರಿಯೂರಿನ ಅಡಿಕೆ ರೈತರು ನೀರಿನ ಕೊರತೆಯಿಂದ…