ಶೀತ ಪ್ರದೇಶಗಳಲ್ಲಿ ಮಾತ್ರ ಸ್ಟ್ರಾಬೆರಿ ಬೆಳೆಯಲು ಸಾಧ್ಯ ಎಂಬ ಸಾಮಾನ್ಯ ನಂಬಿಕೆ ಇದೆ. ಇದಕ್ಕೆ ಅಪವಾದವಾಗಿ ಬಿಸಿಲನಾಡು ಉತ್ತರ ಕರ್ನಾಟಕದಲ್ಲೂ ಸ್ಟ್ರಾಬೆರಿ ಕೃಷಿ ಯಶಸ್ವಿಯಾಗಬಹುದು ಎಂಬುದನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮದ ರೈತ ವೈಜಿನಾಥ್ ನಿಡೋದಾ ಅವರು ಪ್ರಾಯೋಗಿಕವಾಗಿ ಸಾಬೀತುಪಡಿಸಿದ್ದಾರೆ.
2024ರಲ್ಲಿ ಅರ್ಧ ಎಕರೆ ಭೂಮಿಯಲ್ಲಿ 10 ಸಾವಿರ ಸ್ಟ್ರಾಬೆರಿ ಸಸಿಗಳನ್ನು ಪ್ಲಾಂಟೇಷನ್ ಮಾಡಿದ ಅವರು, ಮೊದಲ ಪ್ರಯತ್ನದಲ್ಲಿ ನಿರ್ವಹಣಾ ತಪ್ಪುಗಳಿಂದ ಸುಮಾರು 30 ಶೇಕಡಾ ಸಸಿಗಳು ನಾಶವಾಗಿದ್ದವು. ಆದರೆ, ಕಳೆದ ವರ್ಷದ ಅನುಭವದಿಂದ ಪಾಠ ಕಲಿತು ಈ ಬಾರಿ ತಂತ್ರಜ್ಞಾನ ಹಾಗೂ ಕಾಳಜಿಯಲ್ಲಿ ಸುಧಾರಣೆ ಮಾಡಿಕೊಂಡ ಪರಿಣಾಮ, ಈ ವರ್ಷ ಕೇವಲ ಶೇ.5 ರಷ್ಟು ಮಾತ್ರ ಸಸಿಗಳ ಡೆತ್ ರೇಟ್ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇದನ್ನೂ ಸಂಪೂರ್ಣವಾಗಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಬೀದರ್ ಜಿಲ್ಲೆಯ ವಾತಾವರಣ, ಮಣ್ಣು ಮತ್ತು ನೀರು ಸ್ಟ್ರಾಬೆರಿ ಬೆಳೆಗೆ ಅತ್ಯಂತ ಸೂಕ್ತವಾಗಿದೆ. 15 ರಿಂದ 30 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಇರಬೇಕು. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರವರೆಗೆ ಪ್ಲಾಂಟೇಷನ್ ಮಾಡಲು ಸೂಕ್ತ ಸಮಯವಾಗಿದ್ದು, ಚಳಿಗಾಲ ಆರಂಭಕ್ಕೂ ಮುನ್ನ ಸಸಿಗಳನ್ನು ನೆಟ್ಟರೆ ಉತ್ತಮ ಫಲ ದೊರೆಯುತ್ತದೆ ಎಂದು ವೈಜಿನಾಥ್ ನಿಡೋದಾ ವಿವರಿಸುತ್ತಾರೆ. ಚಳಿಗಾಲದಲ್ಲಿ ಹೂ ಹಾಗೂ ಹಣ್ಣು ಬಿಡುವ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಮಾರ್ಚ್ ತಿಂಗಳಲ್ಲಿ ಬೇಸಿಗೆ ಆರಂಭವಾದಂತೆ ಇಳುವರಿ ಕಡಿಮೆಯಾಗುತ್ತದೆ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಈ ಯಶಸ್ಸಿನಿಂದ ಉತ್ತೇಜನಗೊಂಡ ಅವರು 2025ರಲ್ಲಿ 2 ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಿದ್ದಾರೆ. ಈಗಾಗಲೇ ಫಸಲು ಬರಲು ಆರಂಭವಾಗಿದ್ದು, ಪ್ರತಿದಿನ ಸುಮಾರು ₹15,000 ರಿಂದ ₹16,000 ಆದಾಯ ಗಳಿಸುತ್ತಿದ್ದಾರೆ. ಉತ್ತರ ಕರ್ನಾಟಕದ ರೈತರಿಗೆ ಸ್ಟ್ರಾಬೆರಿ ಕೃಷಿ ಹೊಸ ಆರ್ಥಿಕ ಪರ್ಯಾಯವಾಗಿ ಮೂಡಿಬರುತ್ತಿದೆ.
(ಡಿಜಿಟಲ್ ಸೋರ್ಸ್)
ಇದನ್ನೂ ಓದಿ…
ಓದುಗರ ಅಭಿಪ್ರಾಯಕ್ಕೆ
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…