Advertisement
MIRROR FOCUS

WHO ಅಡಿಕೆ ನೀತಿ ಚರ್ಚೆ | ಆರೋಗ್ಯ ರಕ್ಷಣೆಯೋ, ರೈತರಿಗೆ ಹೊಸ ಸವಾಲೋ?

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO)  ವೆಬಿನಾರ್‌ ಆಯೋಜಿಸಿತ್ತು. ವೆಬಿನಾರ್‌ನಲ್ಲಿ ಭಾರತ ಸೇರಿದಂತೆ ಇತರ ದೇಶಗಳು ಪ್ರತಿನಿಧಿಗಳ ಮಂಡಿಸಿರುವ ಅಂಶಗಳ ಸಂಕ್ಷಿಪ್ತ ಸಾರಾಂಶವನ್ನು ನೀಡಲಾಗಿದೆ.  ವೆಬಿನಾರ್‌ನಲ್ಲಿ WHO ಪ್ರದೇಶದಲ್ಲಿ 2025–2030 ಅಡಿಕೆ ಬಳಕೆ ನಿಯಂತ್ರಣದ ಕಾರ್ಯತಂತ್ರ ಚೌಕಟ್ಟು ಕುರಿತು ವಿಶೇಷ ಮಾಹಿತಿ ನೀಡಲಾಗಿದೆ. ಹೀಗಾಗಿ  ಮುಂದೆಯೂ ಈ ಚರ್ಚೆ ನಡೆಯಲಿದೆ. ಈ ಚರ್ಚೆ ಆರೋಗ್ಯದ ರಕ್ಷಣೆಯೋ…? ಅಡಿಕೆ ಬೆಳೆಗಾರರಿಗೆ ಸವಾಲೋ..? ಎಂಬುದು ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿದೆ.

ಆದರೆ, ಅಡಿಕೆ ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಬೆಳೆ. ಲಕ್ಷಾಂತರ ಸಣ್ಣ–ಮಧ್ಯಮ ರೈತರ ಬದುಕು ಈ ತೋಟಗಾರಿಕೆ ಬೆಳೆ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬಳಕೆಯಿಂದ ಉಂಟಾಗುವ ಆರೋಗ್ಯ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳು, ಕೃಷಿ ವಲಯಕ್ಕೂ ಹೊಸ ಆತಂಕದ ಸೂಚನೆ ನೀಡುತ್ತಿವೆ.  ಆರೋಗ್ಯ ನೀತಿಗಳು ನೇರವಾಗಿ ಕೃಷಿ ನೀತಿಗಳಾಗಿಲ್ಲದಿದ್ದರೂ, ಅವುಗಳ ಪರಿಣಾಮ ಮಾರುಕಟ್ಟೆ, ಬಳಕೆ ಮತ್ತು ಬೇಡಿಕೆಗೆ ತಟ್ಟದೇ ಇರುವುದಿಲ್ಲ ಎನ್ನುವುದು ನಿಶ್ಚಿತ.  ಆದ್ದರಿಂದ ರೈತರು, ವ್ಯಾಪಾರಿಗಳು ಹಾಗೂ ನೀತಿ ರೂಪಿಸುವವರು ಈ ಚರ್ಚೆಗಳನ್ನು ಮುಂದೆಯೂ ಎಚ್ಚರಿಕೆಯಿಂದ ಗಮನಿಸುವುದು ಅವಶ್ಯಕವಾಗಿದೆ. WHO ಯಾವುದೇ ನಿಯಮಗಳನ್ನು ಜಾರಿಗೆ ಮಾಡುವುದಿಲ್ಲ, ಆಯಾ ಸರ್ಕಾರಗಳೇ ನಿಯಮಗಳನ್ನು ಜಾರಿ ಮಾಡುತ್ತವೆ. ಯಾವುದೇ ಸರ್ಕಾರಗಳು WHO ನಿಯಮ ಒಮ್ಮೆಲೇ ಜಾರಿಗೆ ಮಾಡುವುದಿಲ್ಲ, ಆದರೆ ಈ ನಿಯಮವನ್ನು ತಳ್ಳ ಹಾಕುವುದೂ ಇಲ್ಲ. ಹೀಗಾಗಿ ಅಡಕತ್ತರಿಯಲ್ಲೇ ಕೃಷಿಕರ ಬದುಕು ಇರುವುದು ನಿಶ್ಚಿತ.

2025–2030 ಕಾರ್ಯತಂತ್ರ ಚೌಕಟ್ಟು ಇದು  :ವೆಬಿನಾರ್‌ನಲ್ಲಿ ಉಲ್ಲೇಖವಾದಂತೆ WHO ದಕ್ಷಿಣ–ಪೂರ್ವ ಏಷ್ಯಾ ಪ್ರದೇಶದ 2025–2030 ಕಾರ್ಯತಂತ್ರ ಚೌಕಟ್ಟು ಕುರಿತು ವಿಶೇಷ ಪರಿಚಯ ನೀಡಲಾಗುತ್ತದೆ. ಈ ಚೌಕಟ್ಟಿನಲ್ಲಿ Smokeless tobacco ನಿಯಂತ್ರಣ,  nicotine products ವಿರುದ್ಧ ಕ್ರಮ, ಅಡಿಕೆ ಬಳಕೆಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು ಇವುಗಳೆಲ್ಲವೂ ಸೇರಿವೆ. ಹೀಗಾಗಿ   ಇಲ್ಲಿ ಆರೋಗ್ಯದ ಚೌಕಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅಡಿಕೆ ಕೃಷಿ ಮತ್ತು ಮಾರುಕಟ್ಟೆಯ ಮೇಲೆ ಪರೋಕ್ಷ ಒತ್ತಡ ತರುವುದಿಲ್ಲವೇ? ಎಂಬುದು ಮಾತ್ರಾ.

ಅಡಿಕೆ ಬಳಕೆಯ ಆರೋಗ್ಯ ಅಪಾಯಗಳ ಕುರಿತು ವೈಜ್ಞಾನಿಕ ಚರ್ಚೆ ಅಗತ್ಯವಿದೆ. ಆದರೆ ಅದೇ ವೇಳೆ, ಅಡಿಕೆ ಕೃಷಿ ಮೇಲೆ ಅವಲಂಬಿತ ರೈತರ ಬದುಕು, ಗ್ರಾಮೀಣ ಆರ್ಥಿಕತೆ ಮತ್ತು ಪರ್ಯಾಯ ವ್ಯವಸ್ಥೆಗಳ ಪ್ರಶ್ನೆಯೂ ಅಷ್ಟೇ ಮಹತ್ವದದು.  ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ರೈತ ಪ್ರತಿನಿಧಿಗಳ ಧ್ವನಿ, ಪರ್ಯಾಯ ಬೆಳೆಗಳ ಚರ್ಚೆ, ಹಾಗೂ ಕ್ರಮೇಣ ರೂಪಾಂತರ ಎಂಬ ಅಂಶಗಳು ಇಲ್ಲದಿದ್ದರೆ, ಆರೋಗ್ಯ ನೀತಿ ಅನಿರೀಕ್ಷಿತ ಕೃಷಿ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ, ಇದಿಷ್ಟೇ ಇರುವ ಆತಂಕಗಳು. ಈ ಆತಂಕ ಅಡಿಕೆ ಬೆಳೆಗಾರರ ಗಮನದಲ್ಲೂ ಇರಬೇಕು. ಸಂದರ್ಭ ಬಂದಾಗಲೆಲ್ಲಾ ಅಡಿಕೆ ಬೆಳೆಗಾರರು, ಈ ಸಂಕಷ್ಟದಿಂದ ದೂರವಾಗಲು ಆಡಳಿತವನ್ನು ಒತ್ತಾಯಿಸುತ್ತಲೇ ಇರಬೇಕಾದ ಅಗತ್ಯ ಇದೆ. ಏಕೆಂದರೆ ಕೃಷಿಕ ಯಾವತ್ತೂ ಕೃಷಿಕನಾಗಿಯೇ ಇರುತ್ತಾನೆ. ಪ್ರತಿನಿಧಿ ಅಥವಾ ಸರ್ಕಾರದ ಅವಧಿ ಕೇವಲ 5 ವರ್ಷಗಳು ಮಾತ್ರಾ ಎಂಬುದೂ ಅಡಿಕೆ ಬೆಳೆಗಾರರ ಗಮನದಲ್ಲಿರಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಅಡಿಕೆ ಅಮೇರಿಕಾ ಕಡೆಗೂ ಸಾಗುವ ಸೂಚನೆಗಳು ಇವೆ. ಒಂದು ವೇಳೆ ಅಮೇರಿಕಾಕ್ಕೂ ಅಡಿಕೆ ಸಾಗುವ ಸಂದರ್ಭ ಬಂದರೆ ಅಡಿಕೆಯಲ್ಲಿರುವ ಔಷಧಿಯ ಅಂಶಗಳು ಮಾತ್ರೆಯ ರೂಪದಲ್ಲೋ, ಔಷಧಿಯ ರೂಪದಲ್ಲೋ ಬರುವ ಸಾಧ್ಯತೆ ಇದೆ. ಏಕೆಂದರೆ ಈ ಹಿಂದೆ ತೆಂಗಿನೆಣ್ಣೆಯೂ ಅದೇ ಮಾದರಿಯಲ್ಲಿ ಬದಲಾದ್ದು ಕೂಡಾ ಗಮನಿಸಬೇಕಾದ ಅಂಶ. ಅಡಿಕೆಯ ಔಷಧಿ, ಆಹಾರ ಪದಾರ್ಥಗಳು ಕೂಡಾ ಮಹತ್ವ ಪಡೆಯುವ ಸಾಧ್ಯತೆ ಹಾಗೂ ನಿರೀಕ್ಷೆಯೊಂದಿಗೆ ಕಳೆದ ತಿಂಗಳು ನಡೆದ ವೆಬಿನಾರ್‌ ಚರ್ಚೆಗಳು ಇಲ್ಲಿಗೆ ಮುಕ್ತಾಯವಾಗುತ್ತಿದೆ.

ಇದನ್ನೂ ಓದಿ…

ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ….

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

17 minutes ago

ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…

17 hours ago

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

1 day ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

1 day ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

1 day ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

2 days ago