Advertisement
MIRROR FOCUS

WHO ಅಡಿಕೆ ನೀತಿ ಚರ್ಚೆ | ಆರೋಗ್ಯ ರಕ್ಷಣೆಯೋ, ರೈತರಿಗೆ ಹೊಸ ಸವಾಲೋ?

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO)  ವೆಬಿನಾರ್‌ ಆಯೋಜಿಸಿತ್ತು. ವೆಬಿನಾರ್‌ನಲ್ಲಿ ಭಾರತ ಸೇರಿದಂತೆ ಇತರ ದೇಶಗಳು ಪ್ರತಿನಿಧಿಗಳ ಮಂಡಿಸಿರುವ ಅಂಶಗಳ ಸಂಕ್ಷಿಪ್ತ ಸಾರಾಂಶವನ್ನು ನೀಡಲಾಗಿದೆ.  ವೆಬಿನಾರ್‌ನಲ್ಲಿ WHO ಪ್ರದೇಶದಲ್ಲಿ 2025–2030 ಅಡಿಕೆ ಬಳಕೆ ನಿಯಂತ್ರಣದ ಕಾರ್ಯತಂತ್ರ ಚೌಕಟ್ಟು ಕುರಿತು ವಿಶೇಷ ಮಾಹಿತಿ ನೀಡಲಾಗಿದೆ. ಹೀಗಾಗಿ  ಮುಂದೆಯೂ ಈ ಚರ್ಚೆ ನಡೆಯಲಿದೆ. ಈ ಚರ್ಚೆ ಆರೋಗ್ಯದ ರಕ್ಷಣೆಯೋ…? ಅಡಿಕೆ ಬೆಳೆಗಾರರಿಗೆ ಸವಾಲೋ..? ಎಂಬುದು ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿದೆ.

ಆದರೆ, ಅಡಿಕೆ ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಬೆಳೆ. ಲಕ್ಷಾಂತರ ಸಣ್ಣ–ಮಧ್ಯಮ ರೈತರ ಬದುಕು ಈ ತೋಟಗಾರಿಕೆ ಬೆಳೆ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬಳಕೆಯಿಂದ ಉಂಟಾಗುವ ಆರೋಗ್ಯ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳು, ಕೃಷಿ ವಲಯಕ್ಕೂ ಹೊಸ ಆತಂಕದ ಸೂಚನೆ ನೀಡುತ್ತಿವೆ.  ಆರೋಗ್ಯ ನೀತಿಗಳು ನೇರವಾಗಿ ಕೃಷಿ ನೀತಿಗಳಾಗಿಲ್ಲದಿದ್ದರೂ, ಅವುಗಳ ಪರಿಣಾಮ ಮಾರುಕಟ್ಟೆ, ಬಳಕೆ ಮತ್ತು ಬೇಡಿಕೆಗೆ ತಟ್ಟದೇ ಇರುವುದಿಲ್ಲ ಎನ್ನುವುದು ನಿಶ್ಚಿತ.  ಆದ್ದರಿಂದ ರೈತರು, ವ್ಯಾಪಾರಿಗಳು ಹಾಗೂ ನೀತಿ ರೂಪಿಸುವವರು ಈ ಚರ್ಚೆಗಳನ್ನು ಮುಂದೆಯೂ ಎಚ್ಚರಿಕೆಯಿಂದ ಗಮನಿಸುವುದು ಅವಶ್ಯಕವಾಗಿದೆ. WHO ಯಾವುದೇ ನಿಯಮಗಳನ್ನು ಜಾರಿಗೆ ಮಾಡುವುದಿಲ್ಲ, ಆಯಾ ಸರ್ಕಾರಗಳೇ ನಿಯಮಗಳನ್ನು ಜಾರಿ ಮಾಡುತ್ತವೆ. ಯಾವುದೇ ಸರ್ಕಾರಗಳು WHO ನಿಯಮ ಒಮ್ಮೆಲೇ ಜಾರಿಗೆ ಮಾಡುವುದಿಲ್ಲ, ಆದರೆ ಈ ನಿಯಮವನ್ನು ತಳ್ಳ ಹಾಕುವುದೂ ಇಲ್ಲ. ಹೀಗಾಗಿ ಅಡಕತ್ತರಿಯಲ್ಲೇ ಕೃಷಿಕರ ಬದುಕು ಇರುವುದು ನಿಶ್ಚಿತ.

Advertisement

2025–2030 ಕಾರ್ಯತಂತ್ರ ಚೌಕಟ್ಟು ಇದು  :ವೆಬಿನಾರ್‌ನಲ್ಲಿ ಉಲ್ಲೇಖವಾದಂತೆ WHO ದಕ್ಷಿಣ–ಪೂರ್ವ ಏಷ್ಯಾ ಪ್ರದೇಶದ 2025–2030 ಕಾರ್ಯತಂತ್ರ ಚೌಕಟ್ಟು ಕುರಿತು ವಿಶೇಷ ಪರಿಚಯ ನೀಡಲಾಗುತ್ತದೆ. ಈ ಚೌಕಟ್ಟಿನಲ್ಲಿ Smokeless tobacco ನಿಯಂತ್ರಣ,  nicotine products ವಿರುದ್ಧ ಕ್ರಮ, ಅಡಿಕೆ ಬಳಕೆಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು ಇವುಗಳೆಲ್ಲವೂ ಸೇರಿವೆ. ಹೀಗಾಗಿ   ಇಲ್ಲಿ ಆರೋಗ್ಯದ ಚೌಕಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅಡಿಕೆ ಕೃಷಿ ಮತ್ತು ಮಾರುಕಟ್ಟೆಯ ಮೇಲೆ ಪರೋಕ್ಷ ಒತ್ತಡ ತರುವುದಿಲ್ಲವೇ? ಎಂಬುದು ಮಾತ್ರಾ.

ಅಡಿಕೆ ಬಳಕೆಯ ಆರೋಗ್ಯ ಅಪಾಯಗಳ ಕುರಿತು ವೈಜ್ಞಾನಿಕ ಚರ್ಚೆ ಅಗತ್ಯವಿದೆ. ಆದರೆ ಅದೇ ವೇಳೆ, ಅಡಿಕೆ ಕೃಷಿ ಮೇಲೆ ಅವಲಂಬಿತ ರೈತರ ಬದುಕು, ಗ್ರಾಮೀಣ ಆರ್ಥಿಕತೆ ಮತ್ತು ಪರ್ಯಾಯ ವ್ಯವಸ್ಥೆಗಳ ಪ್ರಶ್ನೆಯೂ ಅಷ್ಟೇ ಮಹತ್ವದದು.  ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ರೈತ ಪ್ರತಿನಿಧಿಗಳ ಧ್ವನಿ, ಪರ್ಯಾಯ ಬೆಳೆಗಳ ಚರ್ಚೆ, ಹಾಗೂ ಕ್ರಮೇಣ ರೂಪಾಂತರ ಎಂಬ ಅಂಶಗಳು ಇಲ್ಲದಿದ್ದರೆ, ಆರೋಗ್ಯ ನೀತಿ ಅನಿರೀಕ್ಷಿತ ಕೃಷಿ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ, ಇದಿಷ್ಟೇ ಇರುವ ಆತಂಕಗಳು. ಈ ಆತಂಕ ಅಡಿಕೆ ಬೆಳೆಗಾರರ ಗಮನದಲ್ಲೂ ಇರಬೇಕು. ಸಂದರ್ಭ ಬಂದಾಗಲೆಲ್ಲಾ ಅಡಿಕೆ ಬೆಳೆಗಾರರು, ಈ ಸಂಕಷ್ಟದಿಂದ ದೂರವಾಗಲು ಆಡಳಿತವನ್ನು ಒತ್ತಾಯಿಸುತ್ತಲೇ ಇರಬೇಕಾದ ಅಗತ್ಯ ಇದೆ. ಏಕೆಂದರೆ ಕೃಷಿಕ ಯಾವತ್ತೂ ಕೃಷಿಕನಾಗಿಯೇ ಇರುತ್ತಾನೆ. ಪ್ರತಿನಿಧಿ ಅಥವಾ ಸರ್ಕಾರದ ಅವಧಿ ಕೇವಲ 5 ವರ್ಷಗಳು ಮಾತ್ರಾ ಎಂಬುದೂ ಅಡಿಕೆ ಬೆಳೆಗಾರರ ಗಮನದಲ್ಲಿರಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement

ಈಗ ಅಡಿಕೆ ಅಮೇರಿಕಾ ಕಡೆಗೂ ಸಾಗುವ ಸೂಚನೆಗಳು ಇವೆ. ಒಂದು ವೇಳೆ ಅಮೇರಿಕಾಕ್ಕೂ ಅಡಿಕೆ ಸಾಗುವ ಸಂದರ್ಭ ಬಂದರೆ ಅಡಿಕೆಯಲ್ಲಿರುವ ಔಷಧಿಯ ಅಂಶಗಳು ಮಾತ್ರೆಯ ರೂಪದಲ್ಲೋ, ಔಷಧಿಯ ರೂಪದಲ್ಲೋ ಬರುವ ಸಾಧ್ಯತೆ ಇದೆ. ಏಕೆಂದರೆ ಈ ಹಿಂದೆ ತೆಂಗಿನೆಣ್ಣೆಯೂ ಅದೇ ಮಾದರಿಯಲ್ಲಿ ಬದಲಾದ್ದು ಕೂಡಾ ಗಮನಿಸಬೇಕಾದ ಅಂಶ. ಅಡಿಕೆಯ ಔಷಧಿ, ಆಹಾರ ಪದಾರ್ಥಗಳು ಕೂಡಾ ಮಹತ್ವ ಪಡೆಯುವ ಸಾಧ್ಯತೆ ಹಾಗೂ ನಿರೀಕ್ಷೆಯೊಂದಿಗೆ ಕಳೆದ ತಿಂಗಳು ನಡೆದ ವೆಬಿನಾರ್‌ ಚರ್ಚೆಗಳು ಇಲ್ಲಿಗೆ ಮುಕ್ತಾಯವಾಗುತ್ತಿದೆ.

ಇದನ್ನೂ ಓದಿ…

Advertisement
Advertisement

ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ….

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಲೆನಾಡು ಸೇರಿದಂತೆ ಹಲವೆಡೆ ಮುಂಗಾರು ಮಳೆ ಚುರುಕು-ಕೃಷಿಗೆ ಹೊಸ ಚೈತನ್ಯ, ರೈತರಲ್ಲಿ ಖುಷಿ

ಒಂದು ತಿಂಗಳ ತಡದ ಬಳಿಕ ಮಲೆನಾಡು ಮತ್ತು ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರಲ್ಲಿ…

2 hours ago

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ

ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್‌ ಬಳಸಿ ವಿಜ್ಞಾನಿಗಳು ವಸಡು…

2 days ago

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ

ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…

2 days ago

ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ

ರಂಬುಟಾನ್‌ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್‌ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…

2 days ago

ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ

ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

3 days ago

ಕಾಪುವಿನಲ್ಲಿ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ಗೆ ಚಾಲನೆ – 400ಕ್ಕೂ ಅಧಿಕ ಪ್ರತಿಭೆಗಳು ಭಾಗಿ, 24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ

ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

3 days ago