Advertisement
MIRROR FOCUS

ಹವಾಮಾನ ಮತ್ತು ಆರೋಗ್ಯ ಕುರಿತಾದ COP28 ಘೋಷಣೆಗೆ ಸಹಿ ಹಾಕದ ಭಾರತ | ಇದರ ಹಿಂದಿನ ಭಾರತದ ಅಜೆಂಡಾ ಏನು..? |

Share

ಕೆಲವೊಮ್ಮೆ ದೇಶ ಜನರ ಹಿತಾಸಕ್ತಿಗಿಂತ ಹೆಚ್ಚಿನದನ್ನು ಯೋಚಿಸಲು ಕಷ್ಟವಾಗುತ್ತದೆ. ಇಲ್ಲಿ ಆಗಿರುವುದು ಅದೇ. COP28 ಪ್ರೆಸಿಡೆನ್ಸಿ, ವಿಶ್ವ ಆರೋಗ್ಯ ಸಂಸ್ಥೆ (World Health Organization), ಮತ್ತು ಯುಎಇ ಆರೋಗ್ಯ ಮತ್ತು ತಡೆಗಟ್ಟುವಿಕೆ ಸಚಿವಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತವು ಗೈರಾಗಿದ್ದು(India is absent), ಹವಾಮಾನ ಮತ್ತು ಆರೋಗ್ಯದ(Climate and Health) ಕುರಿತು COP28 ಘೋಷಣೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ. ಈ ಕಾರ್ಯಕ್ರಮದಲ್ಲಿ 124 ದೇಶಗಳು ಒಗ್ಗೂಡಿ ‘ಹವಾಮಾನ ಮತ್ತು ಆರೋಗ್ಯದ ಘೋಷಣೆ’ಗೆ ಸಹಿ ಹಾಕಿದವು. ಆದರೆ ಭಾರತ ಈ ಒಂದು ಒಪ್ಪಂದದಿಂದ ಹಿಂದೆ ಸರಿದಿದೆ.

ಘೋಷಣೆಯಲ್ಲಿ ಏನೇನಿದೆ?: ಇತ್ತೀಚೆಗೆ ಅಂಗೀಕರಿಸಲಾದ ಘೋಷಣೆಯು, ಆರೋಗ್ಯ ವಲಯದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಶೀಘ್ರವಾಗಿ, ಸಮರ್ಥನೀಯವಾಗಿ ಮತ್ತು ಗಣನೀಯವಾಗಿ ಕಡಿಮೆ ಮಾಡಲು ರಾಷ್ಟ್ರಗಳಿಗೆ ಕರೆ ನೀಡಿದೆ. ಹವಾಮಾನ ಬದಲಾವಣೆಯಿಂದಾಗುತ್ತಿರುವ ಆರೋಗ್ಯದ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ ಕಡಿತವು “ಪರಿವರ್ತನೆಗಳು, ಕಡಿಮೆ ವಾಯು ಮಾಲಿನ್ಯ, ಸಕ್ರಿಯ ಚಲನಶೀಲತೆ ಮತ್ತು ಸುಸ್ಥಿರ ಆರೋಗ್ಯಕರ ಆಹಾರಗಳಿಗೆ ವರ್ಗಾವಣೆ” ಜೊತೆಗೆ ಇರಬೇಕೆಂದು ಘೋಷಣೆ ಹೇಳುತ್ತದೆ. ಹಾಗೆಯೇ ಕಲ್ಲಿದ್ದಲು ಶಕ್ತಿಯನ್ನು ಅವಲಂಬಿಸಿರುವುದನ್ನು ತಪ್ಪಿಸುವುದು, ಆರೋಗ್ಯ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದು, ಪೂರೈಕೆ ಸರಪಳಿಗಳು ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಉತ್ತಮ ಸಂಗ್ರಹಣೆ ಮಾನದಂಡಗಳನ್ನು ಅಳವಡಿಸುವುದು ಸೇರಿದಂತೆ ಇನ್ನಿತರೆ ವಿಚಾರಗಳು ಸಹಿ ಹಾಕಿದ ಘೋಷಣೆಯಲ್ಲಿವೆ. ಇವೆಲ್ಲಾವಕ್ಕೂ ಬದ್ಧವಾಗಿರುವಂತೆ ಸಹಿ ಹಾಕಿದ ದೇಶಗಳಿಗೆ ಸೂಚಿಸಲಾಗಿದೆ.

ಭಾರತ ಈ ಘೋಷಣೆಗೆ ಏಕೆ ಸಹಿ ಮಾಡುತ್ತಿಲ್ಲ?: ಆರೋಗ್ಯ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವ ಒಂದು ಘೋಷಣೆ ಈ ಒಪ್ಪಂದದಲ್ಲಿದ್ದು, ಇದರ ಕುರಿತಂತೆ ಲಸಿಕೆಗಳು, ಔಷಧಗಳು ಇತ್ಯಾದಿಗಳಿಗೆ ಕೋಲ್ಡ್ ಸ್ಟೋರೇಜ್ ಕೊಠಡಿಗಳ ಅಗತ್ಯವಿರುವುದರಿಂದ, ಆರೋಗ್ಯ ವಲಯದಲ್ಲಿ ತಂಪಾಗಿಸಲು ಹಸಿರುಮನೆ ಅನಿಲಗಳನ್ನು ನಿಗ್ರಹಿಸುವುದು ದೇಶಕ್ಕೆ ಪ್ರಾಯೋಗಿಕವಾಗಿಲ್ಲ ಎಂದು ಭಾರತ ಹೇಳಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಘೋಷಣೆಯ ಪ್ರಕಾರ ಸೂಚಿಸಲಾದ ಎಲ್ಲ ಬದ್ಧತೆಗಳನ್ನು ಅತಿ ಕಡಿಮೆ ಸಮಯದಲ್ಲೇ ಅನುಷ್ಠಾನಗೊಳಿಸಬೇಕಾಗಿದ್ದು ಇಂತಹ ಸಂದರ್ಭದಲ್ಲಿ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶಕ್ಕೆ ಇಷ್ಟೊಂದು ಕಡಿಮೆ ಸಮಯದಲ್ಲಿ ಘೋಷಣೆಯ ನಿಯಮಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಘೋಷಣೆಗೆ ಸಹಿ ಹಾಕುವುದರಿಂದ ದೂರವಿರುವುದಾಗಿ ಭಾರತ ಹೇಳಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್ ಮಾತನಾಡಿ, “ಲಸಿಕೆಗಳು ಮತ್ತು ಔಷಧಿಗಳನ್ನು ಸಂಗ್ರಹಿಸಲು ನಮಗೆ ಕೋಲ್ಡ್ ಸ್ಟೋರೇಜ್‌ಗಳ ಅಗತ್ಯವಿದೆ ಮತ್ತು ಇವುಗಳು ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಸ್ಥಿತಿಸ್ಥಾಪಕವಾಗಿಸಲು ಸಂಬಂಧಿಸಿವೆ. ಆದಾಗ್ಯೂ, ಇವುಗಳನ್ನು ಬಳಸುವುದು ಹವಾಮಾನದ ಹೊರಸೂಸುವಿಕೆಗೆ ಕೊಡುಗೆ ನೀಡುತ್ತಿದೆ ಮತ್ತು ನಾವು ಕೆಲವು ಇಂಧನಗಳನ್ನು ಇನ್ನೊಂದರ ಮೇಲೆ ಆರಿಸಬೇಕು ಎಂಬ ಸಲಹೆಗಳು ಸ್ವೀಕಾರಾರ್ಹವಲ್ಲ. ಭಾರತವು ಐತಿಹಾಸಿಕವಾಗಿ ಇಂಗಾಲ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಶೇಕಡಾ ನಾಲ್ಕಕ್ಕಿಂತ ಕಡಿಮೆ ಕೊಡುಗೆಯನ್ನು ನೀಡಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರವಾಗಿ, ಅದರ ಜನಸಂಖ್ಯೆಗೆ ಒದಗಿಸಲು ಕಲ್ಲಿದ್ದಲಿನಂತಹ ಸಂಪನ್ಮೂಲಗಳನ್ನು ಬಳಸುವಾಗ ನೈತಿಕ ಉನ್ನತ ಸ್ಥಾನವನ್ನು ಹೊಂದಿದೆ” ಎಂದು ಅವರು ಹೇಳಿದರು. ಘೋಷಣೆಯು ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ಡಿ-ಕಾರ್ಬೊನೈಸೇಶನ್ ಗೆ ಕರೆ ನೀಡಿದ್ದರೂ, ಅದು ಪಳೆಯುಳಿಕೆ ಇಂಧನಗಳ ಬಗ್ಗೆ ಏನನ್ನೂ ಉಲ್ಲೇಖಿಸದಿರುವುದು ಹವಾಮಾನ ಮತ್ತು ಆರೋಗ್ಯ ತಜ್ಞರಲ್ಲಿ ಕೆಲ ಕಾಳಜಿಯನ್ನು ಹೊರಹಾಕಿದೆ.

ಘೋಷಣೆಯಲ್ಲಿ ಭಾಗಿಯಾಗದ ಅಮೆರಿಕಾ ಈ ಘೋಷಣೆಗೆ ಸಹಿ ಹಾಕುವುದರಿಂದ ಭಾರತ ಮಾತ್ರ ದೂರ ಉಳಿದಿಲ್ಲ. ಬದಲಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಕೂಡ ಹಿಂದೆ ಸರಿದಿದೆ. ಆದರೆ ಭಾರತವನ್ನು ಈ ಘೋಷಣೆಗೆ ಸಹಿ ಹಾಕಿಸಲು ಇನ್ನೂ ಕಾರ್ಯತಂತ್ರ ಪ್ರಗತಿಯಲ್ಲಿದೆ ಎಂದು ಹಲವು ವರದಿಗಳು ಹೇಳುತ್ತಿವೆ. WHO ನ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ವಿಭಾಗದ ನಿರ್ದೇಶಕಿ ಮಾರಿಯಾ ನೀರಾ, “ಭಾರತವು ಒಂದು ಪ್ರಮುಖ ಪಾಲುದಾರ, ಬೃಹತ್ ಜನಸಂಖ್ಯೆಯನ್ನು ಹೊಂದಿರುವ ವಿಶಾಲ ದೇಶ; ಅಲ್ಲದೆ, ದೊಡ್ಡ ತಂತ್ರಜ್ಞಾನಗಳನ್ನು ಹೊಂದಿರುವ ದೇಶ. ಹೀಗಾಗಿ ನಾವು ದೇಶದ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಹೇಳಿದರು.

ಕೃಪೆ : ನ್ಯೂಸ್‌ 18

India is absent in the program organized by COP28 Presidency, World Health Organization, and UAE Ministry of Health and Prevention, India refused to sign the COP28 Declaration on Climate and Health. 124 countries have come together in this program. Signed the ‘Declaration on Climate and Health’ but India withdrew from this one agreement.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

4 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

4 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

8 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

8 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

9 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

1 day ago