Advertisement
MIRROR FOCUS

ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 4 ತಡೆಗಟ್ಟಬಹುದು | WHO–IARC ಅಧ್ಯಯನ ವರದಿ

Share

ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 4 ತಡೆಗಟ್ಟಬಹುದು ಎಂದು WHO–IARC ಅಧ್ಯಯನದಿಂದ ಮಾಹಿತಿ ನೀಡಿದೆ. ತಂಬಾಕು, ಸೋಂಕುಗಳು, ಮದ್ಯಪಾನ ಮತ್ತು ಜೀವನಶೈಲಿ ಕಾರಣಗಳಿಂದ ಲಕ್ಷಾಂತರ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ.  ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವ ನಡುವೆಯೇ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅದರ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಬಿಡುಗಡೆ ಮಾಡಿದ ಹೊಸ ಅಧ್ಯಯನವು ಮಹತ್ವದ ಮಾಹಿತಿಯನ್ನು ನೀಡಿದೆ.

ಅಧ್ಯಯನ ಪ್ರಕಾರ,  ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 4 (37.1%) ಪ್ರಕರಣಗಳು ತಡೆಗಟ್ಟಬಹುದಾಗಿದೆ. ಇದು ಸರಿಸುಮಾರು 5.2 ಲಕ್ಷ ಪ್ರಕರಣಗಳಿಗೆ ಸಮಾನವಾಗಿದೆ. WHO–IARC ವಿಶ್ಲೇಷಣೆಯು 185 ದೇಶಗಳ ದತ್ತಾಂಶ ಮತ್ತು 36 ಬಗೆಯ ಕ್ಯಾನ್ಸರ್ ಪ್ರಕರಣಗಳನ್ನು ಪರಿಶೀಲಿಸಿದ್ದು, 2022ರಲ್ಲಿ ವಿಶ್ವಾದ್ಯಂತ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ 37% (7.1 ಮಿಲಿಯನ್ ಪ್ರಕರಣಗಳು) ತಡೆಗಟ್ಟಬಹುದಾದ ಕಾರಣಗಳಿಗೆ ಸಂಬಂಧಿಸಿದ್ದವು ಎಂದು ಅಂದಾಜಿಸಿದೆ.

Advertisement

ಅಧ್ಯಯನವು ಕ್ಯಾನ್ಸರ್‌ಗೆ ಪ್ರಮುಖ ತಡೆಗಟ್ಟಬಹುದಾದ ಕಾರಣಗಳಾಗಿ ಗುರುತಿಸಿದೆ. ಅದರಲ್ಲಿ ತಂಬಾಕು ಬಳಕೆ – 15%, ಸೋಂಕುಗಳು – 10%, ಮದ್ಯಪಾನ – 3% ಆಗಿರುತ್ತದೆ.  WHO ಪ್ರಕಾರ, ತಂಬಾಕು ಜಾಗತಿಕವಾಗಿ ಕ್ಯಾನ್ಸರ್‌ಗೆ ನಂಬರ್-1 ತಡೆಯಬಹುದಾದ ಕಾರಣವಾಗಿದೆ. ಭಾರತದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿಸುವ ಪ್ರಮುಖ ಅಂಶಗಳು ಸೋಂಕುಗಳು – 13.4%,  ತಂಬಾಕು ಧೂಮಪಾನ – 10.5%,  ಹೊಗೆರಹಿತ ತಂಬಾಕು  5% ಇವು ಭಾರತಕ್ಕೆ  ಗಂಭೀರ ಸವಾಲಾಗಿ ಪರಿಣಮಿಸುತ್ತಿವೆ.

ಅಧ್ಯಯನ ಪ್ರಕಾರ, ಪುರುಷರಲ್ಲಿ 44.7% ಕ್ಯಾನ್ಸರ್ ಪ್ರಕರಣಗಳು ಕಂಡುಬಂದರೆ. ಪುರುಷರಲ್ಲಿ ಪ್ರಮುಖ ತಡೆಗಟ್ಟಬಹುದಾದ ಕ್ಯಾನ್ಸರ್‌ಗಳ ಪೈಕಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್.  ತುಟಿ ಮತ್ತು ಬಾಯಿಯ ಕ್ಯಾನ್ಸರ್‌ನಲ್ಲಿ 85,000ಕ್ಕೂ ಹೆಚ್ಚು ಪ್ರಕರಣಗಳು ತಡೆಯಬಹುದಾಗಿದೆ ಎಂದು ವರದಿ ಹೇಳಿದೆ.

Advertisement

ಮಹಿಳೆಯರಲ್ಲಿ 30.5% ಕ್ಯಾನ್ಸರ್ ಪ್ರಕರಣಗಳು ತಡೆಯಲು ಸಾಧ್ಯ ಇದೆ ಎಂದು ವರದಿ ಹೇಳಿದೆ. ಅಂದರೆ ಮಹಿಳೆಯರಲ್ಲಿ 30.5% ಪ್ರಕರಣಗಳು ತಡೆಗಟ್ಟಬಹುದಾಗಿವೆ. ಅದರಲ್ಲಿ ಪ್ರಮುಖ ತಡೆಗಟ್ಟಬಹುದಾದ ಕ್ಯಾನ್ಸರ್‌ಗಳು, ಗರ್ಭಕಂಠ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್. ಗರ್ಭಕಂಠ ಕ್ಯಾನ್ಸರ್‌ನ 1.27 ಲಕ್ಷ ಪ್ರಕರಣಗಳು HPV ಸೋಂಕಿನಿಂದ ತಡೆಯಬಹುದಾಗಿವೆ ಎಂದು ಅಧ್ಯಯನ ಹೇಳಿದೆ. HPV ಲಸಿಕೆ ವಿಳಂಬದಿಂದ ಸಾವಿರಾರು ಯುವತಿಯರಿಗೆ ಅಪಾಯವಿದೆ ಎಂದು ಹೇಳಿದೆ.  IARC ವಿಜ್ಞಾನಿಗಳ ಪ್ರಕಾರ, ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಅತ್ಯಂತ ಪರಿಣಾಮಕಾರಿ ಮಾರ್ಗ.

ತಂಬಾಕು ನಿಯಂತ್ರಣದಲ್ಲಿ ಇನ್ನೂ ದೊಡ್ಡ ಸವಾಲು ಇದೆ.  ಭಾರತ ಸರ್ಕಾರ ತೆರಿಗೆ ಹೆಚ್ಚಿಸಿದ್ದರೂ ಅನಿಯಂತ್ರಿತ ತಂಬಾಕು ಉತ್ಪನ್ನಗಳ ಲಭ್ಯತೆ  ದೊಡ್ಡ ಸಮಸ್ಯೆಗಳಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. WHO ತಂಡದ ಡಾ. ಆಂಡ್ರೆ ಇಲ್ಬಾವಿ ಹೇಳುವಂತೆ, ಕ್ಯಾನ್ಸರ್ ಆರಂಭವಾಗುವ ಮೊದಲು ತಡೆಗಟ್ಟಲು ಸರ್ಕಾರಗಳಿಗೆ ಈ ಅಧ್ಯಯನ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ ಎನ್ನುತ್ತಾರೆ.  ಕ್ಯಾನ್ಸರ್ ಸಂಪೂರ್ಣವಾಗಿ ತಪ್ಪಿಸಲಾಗದಿದ್ದರೂ, ತಂಬಾಕು ನಿಯಂತ್ರಣ, ಲಸಿಕೆ, ಆರೋಗ್ಯ ಜಾಗೃತಿ ಮತ್ತು ಆರಂಭಿಕ ತಪಾಸಣೆ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎನ್ನುವುದು ವರದಿಯ ಒಟ್ಟಾರೆ ಸಾರಾಂಶ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement

ಇದನ್ನೂ ಓದಿ….

ಬದಲಾದ ಬಜೆಟ್ ತಂತ್ರ : ಕರಾವಳಿಯ ‘ಹೈ ವ್ಯಾಲ್ಯೂ’ ಬೆಳೆಗಳು ಅಡಿಕೆಗೆ ಪರ್ಯಾಯವೋ? ಅಥವಾ ಭದ್ರತೆಯ ಪೂರಕವೋ?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶಾದ್ಯಂತ ಚುರುಕುಗೊಂಡ ನೈಋತ್ಯ ಮುಂಗಾರು – ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಕೆ

ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…

3 hours ago

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಜುಲೈ 2 ರಂದು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 2ರಂದು ಅಂಗನವಾಡಿ, ಶಾಲೆ…

4 hours ago

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ತಡೆ – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರ್ತಕರ ಮನವಿ

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ಹಿನ್ನೆಲೆಯಲ್ಲಿ ಶಿರಸಿಯ ವರ್ತಕರು ಸಂಸದ ವಿಶ್ವೇಶ್ವರ ಹೆಗಡೆ…

7 hours ago

ಹವಾಮಾನ ವರದಿ | 01-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಸ್ವಲ್ಪ ಇಳಿಕೆ – ಜುಲೈ 4ರಿಂದ ಮತ್ತೆ ಚುರುಕು!

ಜುಲೈ 2 ಮತ್ತು 3ರಂದು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗುವ…

11 hours ago

ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ

ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಉಂಟಾಗುತ್ತಿರುವ ಟ್ರಾಫಿಕ್‌ ಜಾಮ್‌ಗೆ ವಿಶೇಷ ಸಂಚಾರ ನಿರ್ವಹಣಾ…

15 hours ago

ಜುಲೈನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸಾಧ್ಯತೆ : ಐಎಂಡಿ ಎಚ್ಚರಿಕೆ

ಜುಲೈ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ…

15 hours ago