ರಬ್ಬರ್ ಆಮದು ಸುಂಕ ಏರಿಕೆ ಮಾಡಿದ ಬಳಿಕವೂ ರಬ್ಬರ್ ಧಾರಣೆಯಲ್ಲಿ ಯಾವುದೇ ಏರಿಕೆ ಕಾಣುವುದಿಲ್ಲ, ಇದರಿಂದ ರಬ್ಬರ್ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗದು ಎಂದು ರಬ್ಬರ್ ಬೆಳೆಗಾರರ ಸಂಘವು ಹೇಳಿದೆ. ಆದರೆ ರಬ್ಬರ್ ಆಮದು ಸುಂಕ ಏರಿಕೆಯು ರಬ್ಬರ್ ಧಾರಣೆಯ ಮೇಲೆ ಪ್ರಯೋಜನವಾಗುತ್ತದೆ ಎಂದು ರಬ್ಬರ್ ಮಂಡಳಿಯ ಆಮದು ಸುಂಕ ಕ್ರಮವನ್ನು ಸಮರ್ಥಿಸಿಕೊಂಡಿದೆ.
ರಬ್ಬರ್ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಭಾರತ ಸರ್ಕಾರದ ಇತ್ತೀಚಿನ ಕ್ರಮವು ರಬ್ಬರ್ ಬೆಳೆಗಾರರಿಗೆ ಪ್ರಯೋಜನವಾಗುವುದಿಲ್ಲ ಎನ್ನುವ ಚರ್ಚೆ ಈಗ ಆರಂಭವಾಗಿದೆ. ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಯಲ್ಲಿ ಭಾಗಿಯಾಗಿರುವ ಆಸಿಯಾನ್ ದೇಶಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಬೆಳೆಗಾರರ ಸಂಘವು ಹೈಲೈಟ್ ಮಾಡಿದೆ.
ಭಾರತದ ಕೇಂದ್ರ ಸರ್ಕಾರವು ನೈಸರ್ಗಿಕ ರಬ್ಬರ್ ಆಮದು ಸುಂಕವನ್ನು 25% ಅಥವಾ ಪ್ರತಿ ಕೆಜಿಗೆ ರೂ 30 ಕ್ಕೆ ನಿಗದಿಪಡಿಸಿದೆ. ಯಾವುದು ಕಡಿಮೆಯೋ ಅದು. ನೈಸರ್ಗಿಕ ರಬ್ಬರ್ ಧಾರಣೆ ಸಮಾನಾಗಿರಲು ಸಂಯುಕ್ತ ರಬ್ಬರ್ ಮೇಲಿನ ಆಮದು ಸುಂಕವನ್ನು 10% ರಿಂದ ಹೆಚ್ಚಿಸಲಾಗಿದೆ. ಆದರೆ ಈಚೆಗೆ ಸಂಯುಕ್ತ ರಬ್ಬರ್ ಆಮದುಗಳ ತೀವ್ರ ಹೆಚ್ಚಳಕ್ಕೆ ಕಾರಣವಾಗುತ್ತಿದೆ.- 2017 ರಲ್ಲಿ18 ರಲ್ಲಿ 57,000 ಟನ್ ಆಮದಾಗಿದ್ದರೆ 2021-22 ರಲ್ಲಿ 114,000 ಟನ್ಗಳಿಗೆ ತಲಪಿದೆ.
ಇದೀಗ ಈ ಸುಂಕವನ್ನು ತಪ್ಪಿಸಲು ಸಂಯುಕ್ತ ರಬ್ಬರ್ನ ಹೆಸರಿನಲ್ಲಿ ಸಂಯುಕ್ತ ರಬ್ಬರ್ ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಅನುಮಾನವನ್ನು ವ್ಯಕ್ತವಾಗಿದೆ. ವ್ಯಾಪಾರ ಒಪ್ಪಂದಗಳ ಮೂಲಕ ಇತರ ರಾಷ್ಟ್ರಗಳಿಗೆ ಒದಗಿಸಲಾದ ರಿಯಾಯಿತಿಗಳ ಬಳಕೆ ಈ ರೀತಿ ಆಗುತ್ತಿದೆಯೇ ಎನ್ನುವುದು ಅನುಮಾನಗಳಲ್ಲಿ ಒಂದು. ಹೀಗಾಗಿ ಆಮದು ಸುಂಕ ಏರಿಕೆಯ ನಂತರವೂ ಭಾರತದಲ್ಲಿ ರಬ್ಬರ್ ಧಾರಣೆ ಏರಿಕೆ ಕಾಣುತ್ತಿಲ್ಲ. ಪ್ರಸ್ತುತ, ಸಂಯುಕ್ತ ರಬ್ಬರ್ನ ಆಮದುಗಳಲ್ಲಿ ಸುಮಾರು 55% ಆಸಿಯಾನ್ ದೇಶಗಳಿಂದ ಆಗಿದ್ದರೆ, ಉಳಿದ 45% ಯುಎಸ್, ಜರ್ಮನಿ, ದಕ್ಷಿಣ ಕೊರಿಯಾ, ಇಟಲಿ, ಫ್ರಾನ್ಸ್ ಮತ್ತು ಯುಕೆ ದೇಶಗಳಿಂದ ಆಗಿದೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣರಾಯ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…
ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್ಫೋನ್(Ear Phone)…