ರಬ್ಬರ್ ಆಮದು ಸುಂಕ | ರಬ್ಬರ್‌ ಬೆಳೆಗಾರರಿಗೆ ಪ್ರಯೋಜನವಿಲ್ಲ ಎಂದು ಬೆಳೆಗಾರರ ಸಂಘ |

March 6, 2023
11:18 AM

ರಬ್ಬರ್‌ ಆಮದು ಸುಂಕ ಏರಿಕೆ ಮಾಡಿದ ಬಳಿಕವೂ ರಬ್ಬರ್‌ ಧಾರಣೆಯಲ್ಲಿ ಯಾವುದೇ ಏರಿಕೆ ಕಾಣುವುದಿಲ್ಲ, ಇದರಿಂದ ರಬ್ಬರ್‌ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗದು ಎಂದು ರಬ್ಬರ್‌ ಬೆಳೆಗಾರರ ಸಂಘವು ಹೇಳಿದೆ. ಆದರೆ ರಬ್ಬರ್‌ ಆಮದು ಸುಂಕ ಏರಿಕೆಯು ರಬ್ಬರ್‌ ಧಾರಣೆಯ ಮೇಲೆ ಪ್ರಯೋಜನವಾಗುತ್ತದೆ ಎಂದು ರಬ್ಬರ್ ಮಂಡಳಿಯ  ಆಮದು ಸುಂಕ ಕ್ರಮವನ್ನು ಸಮರ್ಥಿಸಿಕೊಂಡಿದೆ.

ರಬ್ಬರ್ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಭಾರತ ಸರ್ಕಾರದ ಇತ್ತೀಚಿನ ಕ್ರಮವು ರಬ್ಬರ್ ಬೆಳೆಗಾರರಿಗೆ ಪ್ರಯೋಜನವಾಗುವುದಿಲ್ಲ ಎನ್ನುವ ಚರ್ಚೆ ಈಗ ಆರಂಭವಾಗಿದೆ. ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಯಲ್ಲಿ ಭಾಗಿಯಾಗಿರುವ ಆಸಿಯಾನ್ ದೇಶಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಬೆಳೆಗಾರರ ​​ಸಂಘವು ಹೈಲೈಟ್ ಮಾಡಿದೆ.

ಭಾರತದ ಕೇಂದ್ರ ಸರ್ಕಾರವು ನೈಸರ್ಗಿಕ ರಬ್ಬರ್  ಆಮದು ಸುಂಕವನ್ನು 25% ಅಥವಾ ಪ್ರತಿ ಕೆಜಿಗೆ ರೂ 30 ಕ್ಕೆ ನಿಗದಿಪಡಿಸಿದೆ. ಯಾವುದು ಕಡಿಮೆಯೋ ಅದು. ನೈಸರ್ಗಿಕ ರಬ್ಬರ್‌ ಧಾರಣೆ ಸಮಾನಾಗಿರಲು ಸಂಯುಕ್ತ ರಬ್ಬರ್ ಮೇಲಿನ ಆಮದು ಸುಂಕವನ್ನು 10% ರಿಂದ ಹೆಚ್ಚಿಸಲಾಗಿದೆ. ಆದರೆ ಈಚೆಗೆ  ಸಂಯುಕ್ತ ರಬ್ಬರ್ ಆಮದುಗಳ ತೀವ್ರ ಹೆಚ್ಚಳಕ್ಕೆ ಕಾರಣವಾಗುತ್ತಿದೆ.- 2017 ರಲ್ಲಿ18 ರಲ್ಲಿ 57,000 ಟನ್‌ ಆಮದಾಗಿದ್ದರೆ 2021-22 ರಲ್ಲಿ 114,000 ಟನ್‌ಗಳಿಗೆ ತಲಪಿದೆ.

ಇದೀಗ ಈ ಸುಂಕವನ್ನು ತಪ್ಪಿಸಲು ಸಂಯುಕ್ತ ರಬ್ಬರ್‌ನ ಹೆಸರಿನಲ್ಲಿ ಸಂಯುಕ್ತ ರಬ್ಬರ್ ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಅನುಮಾನವನ್ನು ವ್ಯಕ್ತವಾಗಿದೆ.  ವ್ಯಾಪಾರ ಒಪ್ಪಂದಗಳ ಮೂಲಕ ಇತರ ರಾಷ್ಟ್ರಗಳಿಗೆ ಒದಗಿಸಲಾದ ರಿಯಾಯಿತಿಗಳ ಬಳಕೆ ಈ ರೀತಿ ಆಗುತ್ತಿದೆಯೇ ಎನ್ನುವುದು  ಅನುಮಾನಗಳಲ್ಲಿ ಒಂದು. ಹೀಗಾಗಿ ಆಮದು ಸುಂಕ ಏರಿಕೆಯ ನಂತರವೂ ಭಾರತದಲ್ಲಿ ರಬ್ಬರ್‌ ಧಾರಣೆ ಏರಿಕೆ ಕಾಣುತ್ತಿಲ್ಲ. ಪ್ರಸ್ತುತ, ಸಂಯುಕ್ತ ರಬ್ಬರ್‌ನ ಆಮದುಗಳಲ್ಲಿ ಸುಮಾರು 55% ಆಸಿಯಾನ್ ದೇಶಗಳಿಂದ ಆಗಿದ್ದರೆ, ಉಳಿದ 45% ಯುಎಸ್, ಜರ್ಮನಿ, ದಕ್ಷಿಣ ಕೊರಿಯಾ, ಇಟಲಿ, ಫ್ರಾನ್ಸ್ ಮತ್ತು ಯುಕೆ ದೇಶಗಳಿಂದ ಆಗಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ
September 15, 2026
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror