MIRROR FOCUS

ಮಧುಮೇಹಕ್ಕೆ ಗೋವಿನ ಔಷಧಿ | ದಿವ್ಯ ಔಷಧಿ ತಯಾರಿಸಿದ ಗೋಪ್ರೇಮಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಧುಮೇಹ ಇಂದು ಹೆಚ್ಚಾಗಿ ಕಂಡುಬರುವ ಸಮಸ್ಯೆ. ಈ ಸಮಸ್ಯೆಗೆ ಗೋವಿನ ಔಷಧಿಯನ್ನು ತಯಾರಿಸಿದ ಗೋಪ್ರೇಮಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಹತ್ತಾರು ಮಂದಿ ಈಗ ಗೋವಿನ ಔಷಧಿಯತ್ತ ಮುಖ ಮಾಡಿದ್ದಾರೆ. ಮಧುಮೇಹ, ಕಿಡ್ನಿ ಸ್ಟೋನ್‌ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗೋ ಆಧಾರಿತ ಪರಿಹಾರವನ್ನು ಕಂಡಿದ್ದಾರೆ. ಈಗ ಸುಮಾರು 8 ಬಗೆಯ ಔಷಧಿಯನ್ನು ಗೋವಿನ ಮೂಲದಿಂದ ತಯಾರು ಮಾಡಿದ್ದಾರೆ.

Advertisement
Advertisement

ದೇಸೀ ಗೋವು ಎಂದರೆ ಅತ್ಯಂತ ಔಷಧೀಯ ಗುಣವುಳ್ಳ ತಳಿ ಎಂದು ಅನೇಕ ಸಮಯಗಳಿಂದ ಕೇಳಿ ಬರುತ್ತಿದೆ. ಹಲವಾರು ಮಂದಿ ಗೋ ಅರ್ಕ ತಯಾರು ಮಾಡುತ್ತಾರೆ. ದೇಸೀ ತಳಿಯ ಹಾಲು, ಮೊಸರು, ಮಜ್ಜಿಗೆ, ತುಪ್ಪವು ಅತ್ಯಂತ ಔಷಧಿ ಗುಣವುಳ್ಳದ್ದು ಎಂದು ಹೇಳುತ್ತಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಸುಬ್ರಹ್ಮಣ್ಯ ಪ್ರಸಾದ್‌ ನೆಕ್ಕರಕಳೆಯ ಅವರು ಸುಮಾರು 16 ವರ್ಷಗಳಿಂದ ಗೋ ಆಧಾರಿತವಾದ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದಾರೆ. ಗೋಪ್ರೇಮಿಯೂ ಆಗಿರುವ ಅವರು ಸುಮಾರು 20 ಕ್ಕೂ ಅಧಿಕ ಗೋವುಗಳನ್ನು ಸಾಕುತ್ತಿದ್ದಾರೆ. ಅದರ ಸೆಗಣಿಯಿಂದ ಗೊಬ್ಬರ ತಯಾರಿ, ಗೋಮೂತ್ರದಿಂದ ಕ್ರಿಮಿನಾಶಕ ತಯಾರು ಮಾಡುತ್ತಿದ್ದರು. ಇದೀಗ ಕೆಲವು ವರ್ಷಗಳಿಂದ ವಿವಿಧ ಆಯುರ್ವೇದ ಔಷಧಿಯನ್ನು ಸಣ್ಣ ಪ್ರಮಾಣದಲ್ಲಿ ತಾವೇ ತಯಾರು ಮಾಡುತ್ತಿದ್ದಾರೆ. ಗೋವಿನ ಸೆಗಣಿ, ಮೂತ್ರ, ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನು ಮೌಲ್ಯವರ್ಧನೆ ಮಾಡುವುದರ ಜೊತೆಗೆ ಆಯುರ್ವೇದ ಸಸ್ಯಗಳನ್ನು ಬಳಕೆ ಮಾಡಿ ಔಷಧಿಯನ್ನೂ ತಯಾರು ಮಾಡುತ್ತಿದ್ದಾರೆ.

ಸುಬ್ರಹ್ಮಣ್ಯ ಪ್ರಸಾದ್‌, ನೆಕ್ಕರಕಳೆಯ

ವಿಶೇಷವಾಗಿ ಕ್ಷೀರಬಲ ತೈಲ  ಸೇರಿದಂತೆ ವಿವಿಧ ತೈಲಗಳ ತಯಾರಿಕೆ ಮಾಡುತ್ತಾರೆ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಅದೇ ಮಾದರಿಯಲ್ಲಿ ಔಷಧಿಗಳನ್ನು ತಯಾರು ಮಾಡುತ್ತಿದ್ದಾರೆ. ಸುಮಾರು 800 ಬಗೆಯ ಔಷಧೀಯ ಸಸ್ಯಗಳನ್ನು ಗೋ ಉತ್ಪನಗಳೊಂದಿಗೆ ಸೇರಿಸಿ ಔಷಧಿ ತಯಾರಿಸಬಹುದಾಗಿದೆ ಎಂದು ಸುಬ್ರಹ್ಮಣ್ಯ ಪ್ರಸಾದ್‌ ಹೇಳುತ್ತಾರೆ. ಸದ್ಯ 8-10 ಬಗೆಯ ಆಯುರ್ವೇದ ಔಷಧಿಗಳನ್ನು ತಯಾರು ಮಾಡುವ ಸುಬ್ರಹ್ಮಣ್ಯ ಪ್ರಸಾದ್‌ ಅವರು, ವಿಶೇಷವಾಗಿ ಮಧುಮೇಹಕ್ಕೆ, ಕಡ್ನಿಸ್ಟೋನ್‌ಗೆ, ಬೆನ್ನು ನೋವು ಸೇರಿದಂತೆ ದೀರ್ಘಕಾಲದ ನೋವುಗಳಿಗೆ ತೈಲ ಹಾಗೂ ಔಷಧಿಯನ್ನು ನೀಡುತ್ತಿದ್ದಾರೆ.ಈಗಾಗಲೇ ಹಲವಾರು ಮಂದಿ ಈ ಔಷಧಿ ಪಡೆದಿದ್ದಾರೆ. ಮಧುಮೇಹದಲ್ಲಿ ಸ್ಥಿರತೆಯನ್ನು ಕಂಡಿದ್ದಾರೆ. ಇದೆಲ್ಲವೂ ಗೋವಿನ ಉತ್ಪನ್ನವನ್ನು ಬಳಸಿಯೇ ತಯಾರು ಮಾಡುತ್ತಿದ್ದಾರೆ.ಇದೆಲ್ಲವೂ ಗೋವಿನ ಶಕ್ತಿ ಎನ್ನುತ್ತಾರೆ ಸುಬ್ರಹ್ಮಣ್ಯ ಪ್ರಸಾದ್.

ಅಡಿಕೆ ಕೃಷಿಯ ಆಸಕ್ತಿ ಕೈಬಿಟ್ಟ ಸುಬ್ರಹ್ಮಣ್ಯ ಪ್ರಸಾದರು ತೋಟದಲ್ಲಿ ಹುಲ್ಲು, ಹಲಸಿನ ಗಿಡಗಳನ್ನು ನೆಟ್ಟಿದ್ದಾರೆ. ಒಂದು ಅಡಿಕೆ ಮರ ತನ್ನ ಜೀವಿತಾವಧಿಯಲ್ಲಿ 32 ಸಾವಿರ ರೂಪಾಯಿ ಆದಾಯ ಬರುತ್ತದೆಯಾದರೆ ಅಡಿಕೆ ಮರವನ್ನೇ ನೋಡಬೇಕಾ ಎನ್ನುವುದು ಅವರ ಪ್ರಶ್ನೆ. ಗೋವು ಹಾಗೂ ಗೋ ಉತ್ಪನಗಳ ತಯಾರು ಮಾಡುವುದು ಹೆಚ್ಚು ಸಮಾಧಾನ, ಖುಷಿ ತರುತ್ತದೆ ಎನ್ನುತ್ತಾರೆ ಸುಬ್ರಹ್ಮಣ್ಯ ಪ್ರಸಾದರು. ಗೋವು ಕೂಡಾ ಆದಾಯವೂ ನೀಡಬಲ್ಲಿದು, ನೆಮ್ಮದಿಯೂ ನೀಡಬಲ್ಲದು, ನಾವು ಈಗ ಅದರ ಆದಾಯದಿಂದಲೇ ಬದುಕುತ್ತಿದ್ದೇವೆ ಎನ್ನುತ್ತಾರೆ ಅವರು. (ಸಂಪರ್ಕ: ಸುಬ್ರಹ್ಮಣ್ಯ ಪ್ರಸಾದ್‌ : 9446282951 ) (ಸಂದರ್ಶನದ ವಿಡಿಯೋ ಇದೆ )

Subrahmanya Prasad Nekkarakaleya near Badiyadka in Kasaragod district has been manufacturing cow-based products for about 16 years. He is also a cow lover and keeps more than 20 cows. They have been preparing various Ayurvedic medicines themselves in small quantities for a few years now. Apart from adding value to cow dung, urine, milk, curd, buttermilk, ghee, Ayurvedic plants are also being used to prepare medicines.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವಾರಣಾಸಿ ಎಂಬ ದ್ವಂದ್ವಗಳ ನಗರ

ವಾರಣಾಸಿಯ ಸೆಳೆತ ಅಸಾಧ್ಯವಾದದ್ದು ಅಂತ ಅಲ್ಲೇ ನೆಲೆನಿಂತ ವಿದೇಶಿಗರೂ ಇದ್ದಾರಂತೆ.ತಮ್ಮ ಉಳಿದ ಜೀವಿತಾವಧಿ…

1 hour ago

ಮನ ಗೆಲ್ಲುವ ಕೈರುಚಿ, ಸುಲಭದಲ್ಲಿ ಕೈಸೆರೆಯಾಗದೇಕೆ..?

ನಮ್ಮ ಯೋಚನೆಗಳು, ಯೋಜನೆಗಳು , ನಿರ್ಧಾರಗಳೆಲ್ಲವೂ ಆಹಾರ, ನಮ್ಮ ಪರಿಸರದ ಪ್ರಭಾವದಿಂದ ತಪ್ಪಿಸಿ…

1 hour ago

ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ

ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ?

1 hour ago

ಸಂತೆಯಲ್ಲಿ ಸಾಗುತ್ತಿರುವ ನಾವು

ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…

4 hours ago

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…

7 hours ago

ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |

ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…

7 hours ago