ಭಾರತದ ಕೃಷಿ ಮುಂಗಾರು ಜೊತೆಗೆ ಹೋರಾಟ..!| ಲಾಭ-ನಷ್ಟ ಸಮಾನವಾಗಿ ಸ್ವೀಕರಿಸಲು ಸಾಧ್ಯವೇ..?

October 8, 2024
11:23 AM
ಭಾರತದ ಕೃಷಿ ಮುಂಗಾರು ಜೊತೆಗೆ ಹೋರಾಟ ಎಂಬುದು ಬಾಲ್ಯದಲ್ಲಿ ಕಲಿತ ಪಾಠ. ಹೌದು, ಎಷ್ಟು ನಿಜ ಅಲ್ಲವೇ? ಆ ಕಾಲ ಅನ್ನಕ್ಕಾಗಿ ಹೋರಾಟದ ಕಾಲ. ಎಷ್ಟೇ ನಾಶವಾದರೂ ಇದೆಲ್ಲವೂ ಮಾಮೂಲು, ದೇವರು ಕೊಟ್ಟಲ್ಲಿಗೆ ತೃಪ್ತಿ ಪಡಬೇಕೆಂದು ತೃಪ್ತಿಯ ಮುದ್ರೆಯೊತ್ತಿ ಕಷ್ಟಗಳನ್ನು ಮರೆಯುತ್ತಿದ್ದ ದಿನಗಳು ಇದ್ದವು.

ನಿನ್ನೆಯ ದಿನ ಅಪರೂಪದಲ್ಲೇ ಅಪರೂಪ ಎಂಬಂತ ಮಳೆ. ಒಂದೂವರೆ ಗಂಟೆಯ ಬಿರುಸಿನ ಮಳೆಗೆ ಜಲ ಪ್ರವಾಹವೇ ಬಂದಿತ್ತು. ಹರಿಯಲು ಜಾಗವಿಲ್ಲದೆ ತಾನು ನುಗ್ಗಿದ್ದೇ ಕಣಿಯಾಯ್ತು, ತೋಡಾಯಿತು. ಸದ್ಯದಲ್ಲಿ ಇಷ್ಟು ಭಯಂಕರವಾದ ಮಳೆಯನ್ನು ನಾ ಕಂಡಿಲ್ಲ. ಸಂಜೆ ನಾಲ್ಕು ಗಂಟೆಗೇ ಮುಸ್ಸಂಜೆಯ ಏಳು ಗಂಟೆಯ ಕತ್ತಲು ಕೂಡ ಆವರಿಸಿತ್ತು. ಮಳೆಯ ಬಿರುಸು ಮತ್ತು ಸಿಡಿಲಿನ ಅಬ್ಬರ ಮನೆಯಿಂದ ಹೊರ ಇಣುಕದಂತೆ ತಡೆಹಿಡಿದಿತ್ತು.…..ಮುಂದೆ ಓದಿ….

ಇಂದು ಮಳೆ ಹಾನಿಯನ್ನು ವೀಕ್ಷಿಸುವ ಸಲುವಾಗಿ ತೋಟ, ಗದ್ದೆಗಳಿಗೆ ಸುತ್ತು ಒಂದು ಹೊಡೆದಾಯಿತು. ಅಲ್ಲಲ್ಲಿ ನುಗ್ಗಿದ ನೀರಿಗೆ ಎಷ್ಟೇ ಹುಲ್ಲಿದ್ದರೂ ಬೇರು ಸಹಿತ ಹುಲ್ಲನ್ನು ಕೊಚ್ಚಿ ಕೊಂಡು ಹೋದ ಕುರುಹು ಬಿಟ್ಟರೆ ಬೇರೆ ದೊಡ್ಡ ಅಪಾಯ ನಡೆದಿಲ್ಲ.

ತೆನೆ ಬಂದು ಹಸಿರಿನ ಚೆಲುವೇ ತಾನೆಂದು ಬೀಗುತ್ತಿದ್ದ ಬತ್ತದ ಪೈರು ಹೆಚ್ಚು ಕಮ್ಮಿ ಧರಾಷಾಹಿಯಾಗಿದೆ. ಕೆಲವೊಂದಷ್ಟು ನೆಲಕ್ಕೆ ಅಂಟಿಯು ಹೋಗಿದೆ. ಮಲಗಿದ ಪೈರಿನ ಮೇಲೆ ಮೂರಡಿಯ ಕೆಸರು ನೀರು ನಿಂತು ತನ್ನ ಅಟ್ಟಹಾಸವನ್ನು ಮೆರೆದು ಖಾಲಿಯಾಗಿತ್ತು. ಪೈರು ಸಂಪೂರ್ಣ ಕೆಂಬಣ್ಣಕ್ಕೆ ತಿರುಗಿತ್ತು. ಜಾನುವಾರಿನ ಮೇವಿಗೆ ಕಷ್ಟವೋ ಎನ್ನುವಂತಿದೆ.

ಭಾರತದ ಕೃಷಿ ಮುಂಗಾರು ಜೊತೆಗೆ ಹೋರಾಟ ಎಂಬುದು ಬಾಲ್ಯದಲ್ಲಿ ಕಲಿತ ಪಾಠ. ಹೌದು, ಎಷ್ಟು ನಿಜ ಅಲ್ಲವೇ? ಆ ಕಾಲ ಅನ್ನಕ್ಕಾಗಿ ಹೋರಾಟದ ಕಾಲ. ಯಾವುದೇ ಆರ್ಥಿಕ ಅನುಕೂಲಗಳು ಇಲ್ಲದಿದ್ದ ಕಾಲ. ಕನಿಷ್ಠ ಮೂಲ ಸೌಲಭ್ಯಗಳು ಇದ್ದ ಕಾಲ.ಮೇಲ್ಕರ್ಚಿಗೆ ಮಾತ್ರ ಅಡಿಕೆ ತೋಟ ಎಂಬ ಕಲ್ಪನೆಯ ಕಾಲ. ಆ ಕಾಲದಲ್ಲಿಯೂ ಇಂತ ಭಯಂಕರ ಮಳೆ ಬಂದು ನೆರೆ ನಿಂತು ಹಾಳು ಮಾಡಿದ್ದು ಎಷ್ಟೋ ಗದ್ದೆಗಳನ್ನು, ಕಟಾವು ಮಾಡಿ ಮನೆಯಂಗಳಕ್ಕೆ ತಂದು ಪೇರಿಸಿಟ್ಟ ಭತ್ತದ ಪೈರನ್ನು ಕೊಚ್ಚಿಕೊಂಡು ಹೋದದ್ದು ಅದೆಷ್ಟೋ, ಮಟ್ಟ ಮಾಡಿದ ಅಂಗಳವನ್ನು ಕುರುಹೇ ಇಲ್ಲದಂತೆ ಮಾಡಿದ್ದು ಅದೆಷ್ಟೋ!

ಇಷ್ಟೆಲ್ಲಾ ನಾಶ ಮಾಡಿದ್ದರೂ ಇದೆಲ್ಲವೂ ಮಾಮೂಲು, ದೇವರು ಕೊಟ್ಟಲ್ಲಿಗೆ ತೃಪ್ತಿ ಪಡಬೇಕೆಂದು ತೃಪ್ತಿಯ ಮುದ್ರೆಯೊತ್ತಿ ಕಷ್ಟಗಳನ್ನು ಮರೆಯುತ್ತಿದುದನ್ನು ನೆನೆಸುವಾಗ ನಮಗಿಂದು ಎಲ್ಲಾ ಅನುಕೂಲ ಇದ್ದು, ಆಧುನಿಕ ಸೌಲಭ್ಯಗಳಿದ್ದು, ಕೃಷಿ ಕಷ್ಟ ಮತ್ತು ಲಾಭ ರಹಿತ ಎಂದು ಕೃಷಿಯಿಂದ ವಿಮುಖ ರಾಗುವ ಮನಸ್ಥಿತಿಗೆ ಏನೆನ್ನಬೇಕು? ಕೇವಲ ಆರ್ಥಿಕ ಬೆಳೆಯನ್ನು ಮಾತ್ರ ಬೆಳೆದು ಸಮಸ್ಯೆ ಮತ್ತು ಪರಿಹಾರಗಳ ಜವಾಬ್ದಾರಿ ಮತ್ತೊಬ್ಬರದು ಎಂಬ ಮನಸ್ಥಿತಿಗೆ ಏನೆನ್ನಬೇಕು?

ಅಷ್ಟೊಂದು ಹೋರಾಟದ ಬದುಕಿನೊಂದಿಗೆ,ಶ್ರಮ ಜೀವನವನ್ನು ಹೇಳಿಕೊಟ್ಟ ಆ ಮಹಾ ಪೀಳಿಗೆಗೆ, ನಷ್ಟವನ್ನು ಲಾಭವನ್ನು ಒಂದೇರೀತಿ ಸ್ವೀಕರಿಸುತ್ತಿದ್ದ ಆ ಮಹಾ ಪೀಳಿಗೆಗೆ ನನ್ನದೊಂದು ನಮನಗಳು .

ಬರಹ :
ಸದಾಶಿವ ಮರಿಕೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ
July 19, 2026
9:41 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಲಸಿನ ಬೀಜದ ಸಿಪ್ಪೆಯಿಂದ ಕೈಗಾರಿಕಾ ಬಳಕೆಯ ಸೆಲ್ಯುಲೋಸ್..! ರೈತರಿಗೆ ಮೌಲ್ಯವರ್ಧನೆಯ ಹೊಸ ಅವಕಾಶ
July 19, 2026
8:11 AM
by: ದ ರೂರಲ್ ಮಿರರ್.ಕಾಂ
ಜುಲೈ 31 ರೊಳಗೆ ಬೆಳೆವಿಮೆ ನೋಂದಣಿ ಮಾಡಿಸಿಕೊಳ್ಳಿ – ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಅವಕಾಶ
July 18, 2026
8:10 PM
by: ದ ರೂರಲ್ ಮಿರರ್.ಕಾಂ
ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror