MIRROR FOCUS

ಅಡಿಕೆ ಹಳದಿ ಎಲೆರೋಗ ಪ್ರದೇಶದಲ್ಲಿ ಪರ್ಯಾಯ ಬೆಳೆ | ಹಣ್ಣಿನ ಕೃಷಿಯ ಬಗ್ಗೆ ಮಾಹಿತಿ | ತೋಟಗಾರಿಕಾ ಇಲಾಖೆ-ಸಹಕಾರಿ ಸಂಘದಿಂದ ಜಾಗೃತಿ ಕಾರ್ಯಕ್ರಮ | ಮಾರುಕಟ್ಟೆಗೆ ಸಹಕಾರಿ ಸಂಘ ಸ್ಥಾಪನೆಯ ಕಡೆಗೂ ಯೋಚನೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಈಗ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗುತ್ತಿದೆ. ಸುಳ್ಯದಲ್ಲಿ ಅಡಿಕೆಗೆ ಹಳದಿ ಎಲೆರೋಗದ ಆತಂಕವಾದರೆ, ಕೆಲವು ಕಡೆ ಎಲೆಚುಕ್ಕಿ ರೋಗದ ಭೀತಿ. ಇದೆಲ್ಲದರ ಜೊತೆಗೆ ಈಗ ಅಡಿಕೆ ಬೆಳೆವಿಸ್ತರಣೆಯ ವೇಗದಲ್ಲಿ ಮಾರುಕಟ್ಟೆಯ ಬಗ್ಗೆಯೂ ಆತಂಕ ಆರಂಭವಾಗಿದೆ.

Advertisement
Advertisement

ಇಂತಹ ಸಂದರ್ಭದಲ್ಲಿ ಪರ್ಯಾಯ ಬೆಳೆಯ ಬಗ್ಗೆ ಕೃಷಿಕರಿಗೆ ಮಾಹಿತಿ , ಜಾಗೃತಿ ನೀಡುವುದು ಅಗತ್ಯ ಇದೆ. ಈ ಕೆಲಸವನ್ನು  ವಿವಿಧ ಸಹಕಾರಿ ಸಂಘಗಳು, ಸಂಘಟನೆಗಳು ಮಾಡುತ್ತಿವೆ. ಅದರಲ್ಲಿ ಸುಳ್ಯ ತೋಟಗಾರಿಕಾ ಇಲಾಖೆ ಹಾಗೂ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘವು ಈಗ ಎರಡನೇ ಬಾರಿಗೆ ತಮ್ಮ ವ್ಯಾಪ್ತಿಯ ಕೃಷಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಿದೆ.ಅದರ ಜೊತೆಗೆ ಹಣ್ಣು ಕೃಷಿಯಲ್ಲಿ ಹಣ್ಣುಗಳ ಮಾರುಕಟ್ಟೆಗೂ ಸಹಕಾರಿ ಸಂಘ ಸ್ಥಾಪನೆಯ ಬಗ್ಗೆಯೂ ಯೋಚನೆ ನಡೆಯುತ್ತಿದೆ.

ಒಂದು ಕಡೆ ಅಡಿಕೆ ಬೆಳೆ ವಿಸ್ತರಣೆ ವಿಪರೀತವಾಗುತ್ತಿದೆ . ಇನ್ನೊಂದು ಕಡೆ ಅಡಿಕೆಗೆ ವಿವಿಧ ರೋಗಗಳು ಬಾಧಿಸುತ್ತದೆ. ಮತ್ತೊಂದು ಕಡೆ ಅಡಿಕೆ ಮಾರುಕಟ್ಟೆ ಬಗ್ಗೆ ಅಸ್ಥಿರತೆ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಸರಿಯಾದ ಮಾರ್ಗದರ್ಶನ, ಪರ್ಯಾಯ ಕೃಷಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕಾದ್ದು ಕೂಡಾ ಅಗತ್ಯ ಇದೆ. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯು ಸರ್ಕಾರದ ಯೋಜನೆ, ಅನುದಾನ, ಸಹಕಾರದ ಬಗ್ಗೆ ಮಾಹಿತಿ ನೀಡಿದರೆ, ಕೃಷಿಕರ ಜೊತೆಗೆ ನಾವಿದ್ದೇವೆ ಎನ್ನಬೇಕಾದ್ದು ಸಹಕಾರ ಸಂಘಗಳು ಹಾಗೂ ಪ್ರಮುಖ ಸಂಘಗಳು. ಕೃಷಿ ಪರವಾಗಿರುವ ವ್ಯಕ್ತಿಗಳು.  ಈಗ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘವು ತನ್ನ ವ್ಯಾಪ್ತಿಯ ಕೃಷಿಕರಿಗೆ ಅಡಿಕೆ ಬೆಳೆಯ ಜೊತೆಗೆ ಪರ್ಯಾಯ ಬೆಳೆಯ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಈ ಸಹಕಾರಿ ಸಂಘದ ವ್ಯಾಪ್ತಿಯಲ್ಲೂ ಅಡಿಕೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಕಂಡುಬಂದಿದೆ. ಕೆಲವು ಕೃಷಿಕರು ಸಂಕಷ್ಟದಲ್ಲಿದ್ದಾರೆ.

ಆರಂಭದಲ್ಲಿ ತೋಟಗಾರಿಕಾ ಇಲಾಖೆಯು ಹಣ್ಣು ಕೃಷಿಯ ಬಗ್ಗೆ ಮಾಹಿತಿ ನೀಡಿತು. ಇದಕ್ಕಾಗಿ ಐಐಎಚ್‌ಆರ್‌ ನ ವಿಜ್ಞಾನಿ ಡಾ. ಮುರಳಿ ಅವರು ರಂಬುಟಾನ್‌ ಹಣ್ಣಿನ ಕೃಷಿ ಸಹಿತ ವಿವಿಧ ಹಣ್ಣಿನ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಮಲೆನಾಡಿನಲ್ಲಿ, ಅಡಿಕೆ ಬೆಳೆಯ ಜೊತೆಗೆ ಯಾವುದೆಲ್ಲಾ ಹಣ್ಣಿನ ಕೃಷಿಯನ್ನು ಬೆಳೆಸಬಹುದು ಎಂದು ಮಾಹಿತಿ ನೀಡಿದರು.

ಅಡಿಕೆ ಜೊತೆಗೆ ಕಾಳುಮೆಣಸು, ಜಾಯಿಕಾಯಿ ಕೃಷಿಯನ್ನು ಹೇಗೆ ಬೆಳೆಯಬಹುದು ಎಂದು ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ತೊಟ್ಟೆತ್ತೋಡಿ ಅವರು ಮಾಹಿತಿ ನೀಡಿದರು. ಅಡಿಕೆಯ ಜೊತೆಗೆ ಉಪಬೆಳೆಯಾಗಿಯೂ, ಪ್ರಮುಖ ಬೆಳೆಯಾಗಿಯೂ ಹೇಗೆ ಬೆಳೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

Advertisement

ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್‌ ಮೂಲೆತೋಟ ಅವರು ಕೃಷಿಕರಿಗೆ ಧೈರ್ಯ ತುಂಬಿದರು. ಅಡಿಕೆಯ ಜೊತೆಗೆ ಪರ್ಯಾಯ ಕೃಷಿಯನ್ನು ಈಗಲೇ ಬೆಳೆಯುವುದಕ್ಕೆ ಆರಂಭಿಸಬೇಕಿದೆ. ವಿವಿಧ ರೋಗಗಳು ಅಡಿಕೆಯನ್ನು ಕಾಡುತ್ತಿರುವಾಗ ಆಹಾರ ಬೆಳೆಯ ಸಾಲಿನಲ್ಲಿರುವ ಹಣ್ಣಿನ  ಕೃಷಿಯ ಕಡೆಗೆ ಆಸಕ್ತರಾಗಬೇಕು  ಎಂದರು. ಹಣ್ಣಿನ ಬೆಳೆಗಳ ಮಾರುಕಟ್ಟೆ ಬಗ್ಗೆಯೂ ಯೋಜನೆ ತಿಳಿಸಿದ ವಿಷ್ಣು ಭಟ್‌ ಅವರು, ಸಹಕಾರಿ ಸಂಸ್ಥೆಯ ಮಾದರಿಯಲ್ಲಿಯೇ ಹಣ್ಣಿನ ಕೃಷಿಯಲ್ಲಿ ಹಣ್ಣು ಬೆಳೆಗಳ ಮಾರಾಟ ಮತ್ತು ಮೌಲ್ಯವರ್ಧನೆಗೆ ಸಹಕಾರಿ ಸಂಘ ಸ್ಥಾಪನೆ ಬಗ್ಗೆಯೂ ಯೋಚನೆ ನಡೆಸಲಾಗಿದೆ. ಭವಿಷ್ಯದಲ್ಲಿ ಅಡಿಕೆಯ ಬೆಳೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಂತಹ ರೋಗಗಳು ಕಾಡುವ ವೇಳೆ ಅಡಿಕೆ  ಜೊತೆಗೆ ಅಥವಾ ಅಡಿಕೆಗೆ ಪರ್ಯಾಯವಾಗಿ ಇನ್ನೊಂದು ಕೃಷಿ ಅಗತ್ಯ ಇದೆ, ಮಾರುಕಟ್ಟೆಯ ಬಗ್ಗೆ ಆಗಲೂ ದಿಟ್ಟ ನಿರ್ಧಾರ ಅಗತ್ಯ ಇದೆ  ಎಂದು ವಿಷ್ಣು ಭಟ್‌ ಅವರು ಕೃಷಿಕರಿಗೆ ಧೈರ್ಯ ತುಂಬಿದರು.

ಎಲ್ಲೆಡೆ ಅಡಿಕೆ ಬೆಳೆ ವಿಸ್ತರಣೆಯ ವೇಗ ಇದ್ದರೆ, ಧಾರಣೆಯ ಅಸ್ಥಿರತೆ ಈಗಾಗಲೇ ಆರಂಭವಾಗಿದೆ. ಸುಳ್ಯದಂತಹ ಪ್ರದೇಶದಲ್ಲಿ ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿರೋಗ ಹರಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಕೃಷಿಕರು ಧೈರ್ಯದಿಂದ  ಎದುರಿಸಿ ಮುನ್ನಡೆಯುವುದು ಹಾಗೂ ಸಹಕಾರಿ ಸಂಘಗಳೂ , ತೋಟಗಾರಿಕಾ ಇಲಾಖೆಯೂ ರೈತರ ಜೊತೆ ನಿಲ್ಲುವ ಕೆಲಸ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

Horticulture Department and cooperative societies are conducting various programs to make farmers interested in fruit cultivation along with Arecanut cultivation.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶುಕ್ರವಾರ ಮಹಾಲಕ್ಷ್ಮಿಯ ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಹಣದ ಸಮಸ್ಯೆ ನಿವಾರಣೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಲಕಿ ಋತ್ವಿ ಯೋಗ…

11 hours ago

ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |

ರಾಜ್ಯದ ಮಾವು  ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ   ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ…

11 hours ago

ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ

ಭಾರತದ ಕಾಫಿ ರಫ್ತು ಕಳೆದ 5 ವರ್ಷದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಶೇಕಡ…

11 hours ago

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?

ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ…

12 hours ago

ಒಂದು ಮೊಟ್ಟೆಯ ಕತೆ | ಮಕ್ಕಳಿಗೆ ಸರ್ಕಾರ ನೀಡುವ ಮೊಟ್ಟೆ ಶಿಕ್ಷಕರಿಗೆ ತಲೆನೋವು ಏಕೆ..?

ಸರ್ಕಾರವು ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ನೀಡುವ ಮೊಟ್ಟೆ ಈಗ ಶಿಕ್ಷಕರಿಗೆ ತಲೆನೋವಾಗುತ್ತಿದೆ.…

13 hours ago