Advertisement
ಸುದ್ದಿಗಳು

ಅಂತರಾಷ್ಟ್ರೀಯ ವ್ಯಾಪಾರ | ಇನ್ನು ಮುಂದೆ ಎಲ್ಲವೂ ಮುಕ್ತ… ಮುಕ್ತ.. ಮುಕ್ತ…

Share

ಸುಂಕದ ದೊರೆಯೆಂದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿತವಾದ ಅಮೇರಿಕಾದ ಅಧ್ಯಕ್ಷ ಇಂದು ವಿಶ್ವದ ನಾನಾ ರಾಷ್ಟ್ರಗಳಿಗೆ ಒಗ್ಗಟ್ಟಾಗಲು ಅವಕಾಶ ಕಲ್ಪಿಸುತ್ತಿದೆ.ಈ ಒಗ್ಗಟ್ಟು ರಾಜಕೀಯ,ಬೌಗೋಳಿಕ ಮತ್ತು ಆರ್ಥಿಕ ರೀತಿಯದ್ದಾಗಿ ಅಮೇರಿಕಾಕ್ಕೆ ಪ್ರತ್ಯುತ್ತರ ನೀಡಲು ದಾರಿ ಮಾಡಿ ಕೊಡುತ್ತಿದೆ.ಇದು ಮುಂದೆ ಈ ಎಲ್ಲಾ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ.

ಈ ದೃಷ್ಟಿಯಿಂದ ಭಾರತ ಬೇರೆ ಬೇರೆ ದೇಶಗಳೊಂದಿಗೆ ಯಾವ್ಯಾವ ರೀತಿಯ ವ್ಯಾಪಾರ ಒಪ್ಪಂದಗಳನ್ನು ಮಾಡಿದೆ ಮತ್ತು ಇನ್ನು ಮುಂದೆ ಮಾಡಲಿದೆ ಎಂಬುವುದನ್ನು ನೋಡಲೇಬೇಕು.

ಭಾರತ ಬೇರೆ ಬೇರೆ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಇತರ ವ್ಯಾಪಾರ ಒಪ್ಪಂದಗಳಿಗೆ ಈಗಾಗಲೇ ಸಹಿಹಾಕಿ ಅವು ಅನುಷ್ಠಾನಗೊಂಡಿದ್ದರೆ,ಇದೀಗ ಇನ್ನೂ ಕೆಲವು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ.ಈ ನಿಟ್ಟಿನಲ್ಲಿ ದೇಶವು ಈಗಾಗಲೇ 50 ಕೂ ಹೆಚ್ಚು ದೇಶಗಳೊಂದಿಗೆ ಆದ್ಯತೆಯ ಪ್ರವೇಶ, ಆರ್ಥಿಕ ಸಹಕಾರ ಮತ್ತು ಮುಕ್ತ ವ್ಯಾಪಾರ ಸಂಬಂಧವನ್ನು ಹೊಂದಿದೆ.

ಭಾರತ ಮಾಡಿಕೊಂಡ ವಿವಿಧ ರೀತಿಯ ವ್ಯಾಪಾರ ಒಪ್ಪಂದಗಳು.

  1. ಆದ್ಯತೆಯ ವ್ಯಾಪಾರ ಒಪ್ಪಂದಗಳು : ಇಲ್ಲಿ ಎರಡು ಅಥವಾ ಹೆಚ್ಚಿನ ದೇಶಗಳು ತಾವು ಒಪ್ಪಿದ ಪ್ರಮಾಣದ ಸುಂಕವನ್ನು ಹೇರುತ್ತವೆ.ಈ ರಾಷ್ಟ್ರಗಳು ತಮ್ಮೊಳಗೆ ಒಪ್ಪಿಗೆ ಆಗುವ ಉತ್ಪನ್ನಗಳಿಗೆ ಸುಂಕವನ್ನು ಕಡಿಮೆ ಮಾಡುತ್ತವೆ.ಈ ಪಟ್ಟಿಯನ್ನು ಸಕಾರಾತ್ಮಕ ಪಟ್ಟಿ ಎನ್ನಲಾಗುತ್ತದೆ.ಉದಾಹರಣೆಗೆ, ಭಾರತ 2007 ರ ಸಮಯದಲ್ಲಿ ಚಿಲಿ ದೇಶದೊಂದಿಗೆ ಮಾಡಿಕೊಂಡ ಒಪ್ಪಂದ.
  2. ಮುಕ್ತ ವ್ಯಾಪಾರ ಒಪ್ಪಂದಗಳು : ಇಲ್ಲಿ ಪಾಲುದಾರ ರಾಷ್ಟ್ರಗಳ ನಡುವೆ ವ್ಯಾಪಾರ ಮಾಡುವ ವಸ್ತುಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುವುದು ಅಥವಾ ಅವನ್ನು ತೆಗೆದು ಹಾಕುವುದು.ಇಲ್ಲಿಯ ತನಕ ಭಾರತ 13 ಕಾರ್ಯನಿರತ ಇಂತಹ ಒಪ್ಪಂದಗಳಲ್ಲಿ ವ್ಯವಹರಿಸುತ್ತಿದೆ. ಉದಾಹರಣೆಗೆ,ಭಾರತ ಶ್ರೀಲಂಕಾ,ಭಾರತ ಥೈಲ್ಯಾಂಡ್ ಒಪ್ಪಂದಗಳು.
  3. ಸಮಗ್ರ ಆರ್ಥಿಕ ಸಹಕಾರ ಒಪ್ಪಂದಗಳು
  4. ಸಮಗ್ರ ಆರ್ಥಿಕ ಪಾಲುಗಾರಿಕೆ ಒಪ್ಪಂದಗಳು : ಇವೆರಡೂ ಒಪ್ಪಂದಗಳು ಸರಕುಗಳು, ಸೇವೆಗಳು, ಮತ್ತು ಹೂಡಿಕೆಯ ಮೇಲೆ ಸಮಗ್ರ ಪ್ಯಾಕೇಜ್ ಅನ್ನು ಒಳಗೊಂಡಿರುತ್ತದೆ.ಜೊತೆಗೆ ಬೌದ್ಧಿಕ ಆಸ್ತಿ, ಸರ್ಕಾರಿ ಸಂಗ್ರಹಣೆ ಮಾನದಂಡಗಳು, ನೈರ್ಮಲ್ಯ ಮತ್ತು ಸಸ್ಯಗಳ ಆರೋಗ್ಯ ರಕ್ಷಣೆ ಸಮಸ್ಯೆಗಳಂತಹ ಕ್ಷೇತ್ರಗಳಲ್ಲಿ ವ್ಯಾಪಾರ ಸೌಲಭ್ಯ ನಿಯಮ ರಚನೆಯನ್ನು ಒಳಗೊಂಡಿರುತ್ತದೆ.

ಇಷ್ಟು ಮಾತ್ರವಲ್ಲದೆ ವ್ಯಾಪಾರ ಸೌಲಭ್ಯ,ಕಸ್ಟಮ್ಸ್ ಸಹಕಾರ,ಹೂಡಿಕೆ, ಸ್ಪರ್ಧೆ, ಬೌದ್ಧಿಕ ಆಸ್ತಿ ಹಕ್ಕು ಇತ್ಯಾದಿಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿವೆ.ಈ ಎರಡೂ ಒಪ್ಪಂದಗಳು ಹೆಚ್ಚು ಸಮಗ್ರ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿವೆ.ಉದಾಹರಣೆಗೆ, ಮೂರನೇ ತರದ ಒಪ್ಪಂದದಲ್ಲಿ ಭಾರತ, ಆಸ್ಟ್ರೇಲಿಯ,ಮಲೇಶಿಯ, ಸಿಂಗಾಪುರ ಮುಂತಾದ ರಾಷ್ಟ್ರಗಳೊಂದಿಗೆ ಮಾಡಿಕೊಂಡವು ಇದ್ದರೆ ನಾಲ್ಕನೇ ವರ್ಗದಲ್ಲಿ ಭಾರತ, ಜಪಾನ್,ದಕ್ಷಿಣ ಕೊರಿಯ ಇತ್ಯಾದಿ ರಾಷ್ಟ್ರಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ಬರುತ್ತವೆ.ಇವುಗಳೊಂದಿಗೆ 24.07.2025 ರಂದು ಇಂಗ್ಲೆಂಡಿನೊಂದಿಗೆ ಮಾಡಿಕೊಂಡ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ,ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುನ್ನುಡಿ ಬರೆದಿದೆ.

Advertisement

ಬಹುಪಕ್ಷೀಯ ಒಪ್ಪಂದಗಳು:

  1. ಏಶಿಯಾ ಫೆಸಿಫಿಕ್ ವ್ಯಾಪಾರ ಒಪ್ಪಂದ: ಇದು ಆದ್ಯತೆಯ ವ್ಯಾಪಾರ ಒಪ್ಪಂದ ಆಗಿದ್ದು,ಈ ಗುಂಪಿನಲ್ಲಿ ಬಾಂಗ್ಲಾ ದೇಶ, ಚೀನಾ, ಲಾವೋಸ್, ಮಂಗೋಲಿಯಾ, ದಕ್ಷಿಣ ಕೊರಿಯ ಮತ್ತು ಶ್ರೀಲಂಕಾ ರಾಷ್ಟ್ರಗಳು ಇವೆ.
  2. ಆಸಿಯಾನ್: ಇದರಲ್ಲಿ ಮೊದಲನೆಯದಾಗಿ ಭಾರತ ಸರಕು ವ್ಯಾಪಾರ ಒಪ್ಪಂದ,ಎರಡನೆಯದಾಗಿ ಭಾರತ ಸೇವಾ ಒಪ್ಪಂದ ಮತ್ತು ಮೂರನೆಯದಾಗಿ ಭಾರತ ಹೂಡಿಕೆ ಒಪ್ಪಂದವು ಇದೆ.ಈ ಗುಂಪಿನಲ್ಲಿ ಬ್ರೂನಲ್,ಕಾಂಬೋಡಿಯಾ,ಇಂಡೋನೇಷಿಯಾ, ಲಾವೋಸ್, ಮಲೇಶಿಯ, ಮೈನಾಮಾರು, ಫಿಲಿಫೈನ್ಸ್, ಸಿಂಗಾಪುರ,  ಥಾಯ್ಲೆಂಡ್ ಮತ್ತು ವಿಯೆಟ್ನಾಂ ರಾಷ್ಟ್ರಗಳು ಇವೆ.
  3. ಸಾರ್ಕ್ ಆದ್ಯತೆಯ ವ್ಯಾಪಾರ ಒಪ್ಪಂದ ಅಥವಾ ಸಾಪ್ತಾ:  ಈ ಗುಂಪಿನಲ್ಲಿ ಬಾಂಗ್ಲಾ ದೇಶ,ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿವೆ.
  4. ಟೇಪಾ : ಇದು ಪಶ್ಚಿಮ ಐರೋಪ್ಯ ರಾಷ್ಟ್ರಗಳಾದ ಐಸ್ಲೆಂಡ್,ನಾರ್ವೆ,ಸ್ವಿಸ್ ಮುಂತಾದ ರಾಷ್ಟ್ರಗಳೊಂದಿಗೆ ಮಾಡಿಕೊಂಡ ಮುಕ್ತ ಸಹಕಾರ ಸಂಘದ ಒಪ್ಪಂದ.
  5. ಎಫ್ತ : ಇದು ಐರೋಪ್ಯ ಒಕ್ಕೂಟದ ಒಂದಿಗೆ ಮಾಡಿಕೊಂಡ ವ್ಯಾಪಾರ ಮತ್ತು ಪಾಲುದಾರಿಕೆ ಒಪ್ಪಂದ.
  6. ಭಾರತ ಮತ್ತು ಮಾರ್ಕೊಸರ್ ನಡುವಿನ ಆದ್ಯತೆಯ ವ್ಯಾಪಾರ ಒಪ್ಪಂದ : ಈ ಗುಂಪಿನಲ್ಲಿ ಬ್ರೆಜಿಲ್, ಅರ್ಜೆಂಟೀನ, ಉರುಗ್ವೆ ಮತ್ತು ಪರಾಗ್ವೇ ರಾಷ್ಟ್ರಗಳು ಇವೆ.
  7. ಎರಷಿಯ ಆರ್ಥಿಕ ಒಕ್ಕೂಟ :  ಇದೊಂದು ಮುಕ್ತ ವ್ಯಾಪಾರ ಒಪ್ಪಂದ ಆಗಿದ್ದು, ಇಲ್ಲಿ ಅರ್ಮೇನಿಯ, ಬೆಲಾರಸ್,ಕಝಾಕಿಸ್ತಾನ್, ರಷ್ಯಾ ಇತ್ಯಾದಿ ರಾಷ್ಟ್ರಗಳು ಇವೆ. ಇದಕ್ಕೆ 20.08.2025 ರಂದು ಮಾಸ್ಕೋ ದಲ್ಲಿ ಸಹಿ ಹಾಕಲಾಯಿತು.

ಪ್ರಸ್ತಾವಿತ ಒಪ್ಪಂದಗಳು :

  1. ಬಂಗಾಳ ಕೊಲ್ಲಿ ಉಪಕ್ರಮದ ಪ್ರಕಾರ ಬಿಂಸ್ಟೆಕ್
  2. ದಕ್ಷಿಣ ಆಫ್ರಿಕಾ ಕಸ್ಟಮ್ಸ್ ಯೂನಿಯನ್.
  3. ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ.
  4. ಗಲ್ಫ್ ಸಹಕಾರ ಮಂಡಳಿ ಒಂದಿಗೆ ಮುಕ್ತ ವ್ಯಾಪಾರ ಒಪ್ಪಂದ.
  5. ಐ ಬಿ ಎಸ್ ಎ ಮುಕ್ತ ವ್ಯಾಪಾರ ಒಪ್ಪಂದ
  6. ಸಿಂಗಾಪೂರ್ ಒಂದಿಗೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ.
  7. ಜಪಾನ್ ಒಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ.
  8. ದಕ್ಷಿಣ ಕೊರಿಯ ಒಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ.
  9. ನೇಪಾಳ ಮತ್ತು ಭೂತಾನ್ ಗಳೊಂದಿಗೆ ವ್ಯಾಪಾರ ಒಪ್ಪಂದ.
  10. ಆರ್ ಸಿ ಇ ಪಿ

ಇವೆಲ್ಲದರ ಜೊತೆಗೆ ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್,ಸಂಯುಕ್ತ ಅರಬ್ ರಾಷ್ಟ್ರಗಳು,ಇತ್ಯಾದಿ ದೇಶಗಳೊಂದಿಗೆ ಮಾತುಕತೆ ಮುಂದುವರಿಯುತ್ತಿದೆ.

ಒಪ್ಪಂದಗಳಿಂದ ಏನು ಲಾಭ? :  ಮೇಲೆ ಹೆಸರಿಸಿದ ನಾನಾ ರೀತಿಯ ಒಪ್ಪಂದಗಳಿಂದ ಭಾರತಕ್ಕೆ ಆಗುವ ಲಾಭಗಳು ಹಲವು.ಉದಾಹರಣೆಗೆ ಭಾರತ ಆಸ್ಟ್ರೇಲಿಯ ಒಂದಿಗೆ ಮಾಡುವ ಒಪ್ಪಂದಕ್ಕೆ ಅನುಗುಣವಾಗಿ ಭಾರತ ಜವುಳಿ,ಆಭರಣ ಮತ್ತು ರತ್ನಗಳು,ಚರ್ಮದ ಉತ್ಪನ್ನಗಳು,ಇಂಜಿನಿಯರಿಂಗ್ ಉತ್ಪನ್ನಗಳು ಇತ್ಯಾದಿಗಳನ್ನು ಅಲ್ಲಿಗೆ ರಫ್ತು ಮಾಡಲು ಅವಕಾಶಗಳಿವೆ. ಇದೇ ರೀತಿ ಸಂಯುಕ್ತ ಅರಬ್ ರಾಷ್ಟ್ರಗಳಿಗೆ ಆಭರಣಗಳ ರಫ್ತಿಗೆ ಸಾಧ್ಯತೆಗಳು ಹೆಚ್ಚಾಗಿವೆ.ಭಾರತ ಇಂದು ಅಮೇರಿಕಾದ ಸುಂಕದ ಹೆಚ್ಚಳದಿಂದಾಗಿ ಈ ಉದ್ದಿಮೆಗಳಿಗೆ ತೊಂದರೆಗಳು ಆಗುತ್ತಿರುವ ಕಾರಣ ಮೇಲೆ ಹೆಸರಿಸಿದ ಮುಕ್ತ ಇಲ್ಲವೇ ಇತರ ವ್ಯಾಪಾರ ಒಪ್ಪಂದಗಳಿಂದ ಲಾಭ ಪಡೆಯಲು ಸಾಧ್ಯ.

ಇಷ್ಟು ಮಾತ್ರವಲ್ಲದೆ ಈ ಒಪ್ಪಂದಗಳ ಆಧಾರದಲ್ಲಿ ವಿವಿಧ ವಸ್ತುಗಳು ಮತ್ತು ಸೇವೆಗಳ ರಫ್ತು ಹೆಚ್ಚಬಹುದು.ಇವೆಲ್ಲಾ ಉದ್ಯೋಗ ಸೃಷ್ಟಿ,ವಿದೇಶಿ ಬಂಡವಾಳದ ಒಳಹರಿವು,ಕಡಿಮೆ ವೆಚ್ಚದ ಕಚ್ಚಾ ವಸ್ತುಗಳ ಆಮದು,ಪೈಪೋಟಿಯ ಹೆಚ್ಚಳ ಮುಂತಾದ ಲಾಭಗಳನ್ನು ತಂದುಕೊಡಲು ಸಾಧ್ಯ.
ಭಾರತಕ್ಕಾಗುವ ಸಮಸ್ಯೆಗಳು.

Advertisement

ಮೇಲೆ ಹೆಸರಿಸಿದ ನಾನಾ ರೀತಿಯ ಒಪ್ಪಂದಗಳು ನಾನಾ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡಬಹುದು.ಉದಾಹರಣೆಗೆ ಬೇರೆ ಬೇರೆ ರೀತಿಯ ಕೃಷಿ ಉತ್ಪನ್ನಗಳ ಆಮದು,ಆಂತರಿಕ ಉದ್ದಿಮೆಗಳಿಗೆ ಸಂಕಷ್ಟ,ಅಸಮಾನತೆ,ನಿರುದ್ಯೋಗ,ಆರ್ಥಿಕ ಅಸ್ಥಿರತೆ,ಆಮದಿನ ಮೇಲೆ ಹತೋಟಿ ಸಾಧಿಸಲು ಅಸಾಧ್ಯವಾಗುವುದು ಇತ್ಯಾದಿ..

ಮೇಲೆ ಹೆಸರಿಸಿದ ಸಮಸ್ಯೆಗಳು ಬರುವ ಸಾಧ್ಯತೆಗಳು ಇದ್ದ ಕಾರಣ ಭಾರತ ಈ ಮೊದಲು ಆರ್. ಸಿ. ಇ. ಪಿ ಗೆ ಸಹಿ ಹಾಕಿರಲಿಲ್ಲ. ಇದೇ ರೀತಿ ಆಂತರಿಕವಾಗಿ ಕೃಷಿಕರಿಗೆ ಸಮಸ್ಯೆ ಆಗುವ ಕಾರಣ ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಲ್ಲಿಲ್ಲ.

ಪ್ರಸ್ತುತ ಅಮೇರಿಕಾ ಹಾಕಿದ ಸವಾಲುಗಳನ್ನು ಭಾರತ ಎದುರಿಸಲೇ ಬೇಕು.ನಈ ನಿಟ್ಟಿನಲ್ಲಿ ರಷ್ಯಾ,ಚೀನಾ ಮತ್ತು ಜಪಾನ್ ದೇಶಗಳೊಂದಿಗೆ ಪ್ರಾಥಮಿಕ ಹಂತದ ಮಾತುಕತೆಗಳಾಗಿವೆ.ಇವುಗಳೊಂದಿಗೆ ಮೇಲೆ ಹೆಸರಿಸಿದ ನಾನಾ ರೀತಿಯ ಮುಕ್ತ ವ್ಯಾಪಾರ ಒಪ್ಪಂದಗಳು ಇವಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ನಿಶ್ಚಿತ.ಇದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ವ್ಯಾಪಾರ ಒಪ್ಪಂದಗಳು ಆಗುವ ಸಾಧ್ಯತೆಗಳು ದಟ್ಟವಾಗಿವೆ.ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಒಪ್ಪಂದಗಳು ಅಮೇರಿಕಾದ ವಿರುದ್ಧವಾಗಿ ಬಂದು ಜಾಗತಿಕವಾಗಿ ಸಮಗ್ರ ಬದಲಾವಣೆಗೆ ಅವಕಾಶ ಮೂಡಿಬರಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?

12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

4 hours ago

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ

ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…

8 hours ago

ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ

ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…

10 hours ago

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

19 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

20 hours ago