ಸುದ್ದಿಗಳು

ಔಷಧಿಯ ಗುಣಗಳುಳ್ಳ ಇಪ್ಪೆ ಮರ | ಎಲೆ, ಹೂ, ಕಾಯಿ, ತೊಗಟೆ ಎಲ್ಲವೂ ಉಪಯೋಗ….! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಔಷಧಿಯ ಗುಣಗಳುಳ್ಳ ಇಪ್ಪೆ ಮರ ಮಲೆನಾಡಿನ ಕಾಡು ಬೆಳೆಗಳಲ್ಲಿ ಒಂದು.ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ. ಇದರ ಎಲೆ ಹೂವು ಕಾಯಿ ತೊಗಟೆ ಇವು ಉತ್ತಮ ಔಷಧಿಯು ಹೌದು. ರುಚಿಯು ಹೌದು.

Advertisement
Advertisement

ಸಾಧಾರಣವಾಗಿ ಮೇ ಕೊನೆಯ ವಾರಗಳಲ್ಲಿ ಇದರ ಹಣ್ಣು ಬೀಜ ಸಿಕ್ಕುತ್ತದೆ. ಬೀಜವನ್ನು ಸಂಗ್ರಹಿಸಿ ಉಪ್ಪಾಗೆ, ಮುರುಗನ ಬೀಜ ದಿಂದ ಎಣ್ಣೆ ತೆಗೆದಂತೆ (ತುಪ್ಪ) ತೆಗೆಯಬೇಕು ಇದು ಎರಡು ವರ್ಷಕ್ಕೂ ಹಾಳಾಗುವುದಿಲ್ಲ.

1) ಇಪ್ಪೆ ತುಪ್ಪವನ್ನು ಬಿಸಿ ಮಾಡಿ ಹಚ್ಚುವುದರಿಂದ ಸಂಧಿವಾತ ಗುಣವಾಗುತ್ತದೆ.
2) ತಲೆಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.
3) ಇಪ್ಪೇಚಕ್ಕೆ ಕಷಾಯ ಸಂಧಿವಾತಕ್ಕೆ ಒಳ್ಳೆಯ ಔಷಧಿ.
4) ತೊಗಟೆಯ ಪುಡಿಯಲ್ಲಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ.
5) ತೊಗಟೆಯ ಪುಡಿಯನ್ನು ತೋನ್ನು ರೋಗದಲ್ಲಿ ಉಪಯೋಗಿಸುತ್ತೇನೆ.
6) ತೊಗಟೆಯ ಪುಡಿಯನ್ನು ಕ್ಯಾನ್ಸರ್ ರೋಗದಲ್ಲಿ ಬಳಸುತ್ತೇನೆ.
7) ತಿಪ್ಪೆಯ ಹೂವಿನಲ್ಲಿ ಮಾಡಿದ ಲೇಹ್ಯ ನಿದ್ದೆಗೆ ಮತ್ತು ಪುಷ್ಟಿಗೆ ತುಂಬಾ ಒಳ್ಳೆಯದು.
8) ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಬೇಕಾದಾಗ ಶರಭತ್ ಮಾಡಿ ಕುಡಿಯಬಹುದು.
9) ಹೂವನ್ನು ನೀರು ಅಥವಾ ಹಾಲು ಹಾಕಿ ಕುದಿಸಿ ಕುಡಿಯುವುದರಿಂದ ಕರುಳಿನ ಹುಣ್ಣು ಗುಣವಾಗುತ್ತದೆ.
10) ಹಸಿ ಹೂವನ್ನು ತಿನ್ನುವುದರಿಂದ ಕೆಮ್ಮು ಗುಣವಾಗುತ್ತದೆ.
11) ಅರೆಬರೆ ವಣಗಿದ ಹಣ್ಣು ಯಾವ ಡ್ರೈಫ್ರೂಟಿಗೂ ಕಡಿಮೆ ಇಲ್ಲ. ಶಾಲಾ ದಿನಗಳಲ್ಲಿ ಮರದ ಕೆಳಗೆ ಹೆಕ್ಕಿ ತಿನ್ನುವುದೇ ಒಂದು ಸಂಭ್ರಮ. ಹೆಚ್ಚಾಗಿ ಮತ್ತು ಬರುವ ಸಾಧ್ಯತೆಯೂ ಇದೆ.
12) ಇದರ ಎಳೆಯ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಕಿವಿಗೆ ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ.
13) ಬೆಳೆದ ಮರದಿಂದ ಮಣೆ (ಕುಳಿತು ಕೊಳ್ಳಲು) ಮಾಡಿ ಕುಳಿತು ಜಪ ಮಾಡುವುದರಿಂದ ಬೇಗನೆ ಸಿದ್ದಿ ಆಗುವುದು ಎನ್ನುವ ನಂಬಿಕೆ.
14) ಮರದ ಕಡಗೋಲು ತಯಾರಿಸಿ ಮಜ್ಜಿಗೆ ಕಡೆಯುವುದರಿಂದ ವಾತರೋಗ ನಿವಾರಣೆ ಆಗುತ್ತದೆ. ದೇಹಕ್ಕೂ ತಂಪು.

ಖ್ಯಾತ ನಾಟಿ ವೈದ್ಯೆ ಸುಮನಾ ಮಳಗದ್ದೆಯವರು ಇಪ್ಪೆ ಮರದ ಉಪಯೋಗಗಳ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಅವರನ್ನು ಸಂಪರ್ಕಿಸೋದಾದ್ರೆ :  ಸುಮನಾ ಮಳಲಗದ್ದೆ 9980182883.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ಎಐ ಕೃಷಿ ನೀತಿ | ಅನುಷ್ಠಾನಕ್ಕಾಗಿ ಸರ್ಕಾರ 500 ಕೋಟಿ ಮೀಸಲು

ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್‌ಗಳು ಮತ್ತು…

5 minutes ago

ಭರದಿಂದ ನಡೆಯುತ್ತಿದೆ ಎತ್ತಿನಹೊಳೆ ಯೋಜನೆ | 2027ರೊಳಗೆ ಎತ್ತಿನಹೊಳೆ ನೀರು ಕೋಲಾರ ಭಾಗಕ್ಕೆ

ಎತ್ತಿನ ಹೊಳೆ  ಯೋಜನೆಯ  ಮೂಲಕ  ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…

1 hour ago

ಮಕರ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಯಶಸ್ಸು, ಸಂಪತ್ತು

ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?

ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ…

3 hours ago

ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…

11 hours ago

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…

13 hours ago