Opinion

ಹಾಲು ಮಾಂಸಾಹಾರವೇ…? ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಾಲು(Milk) ಸಸ್ಯಜನ್ಯ ಮೂಲದಿಂದ ಬರದಿದ್ದರೂ ಸಸ್ತಿನಿ(memmal) ಪ್ರಾಣಿಯಿಂದ(animal) ಬರುವ ಸಸ್ಯಹಾರದಂತೆ(vegetarian) ಪರಿಗಣಿಸಬಹುದು. ಬಹಳಷ್ಟು ಜನರು ಸಸ್ಯಹಾರಿಗಳು ಹಸುವಿನ ಹಾಲನ್ನು(Cow milk) ಬಳಸುವುದನ್ನು ಮೂದಲಿಸುತ್ತಾರೆ. ಕಾಡಿನ ಜಿಂಕೆ ಕಡವೆ ಕಾಡುಕೋಣ ಇತ್ಯಾದಿ ಸಸ್ತಿನಿ ಪ್ರಾಣಿಗಳಲ್ಲಿ ಆಯಾ ಪ್ರಾಣಿಗಳ ಕರುಗಳಿಗೆ(calf) ಎಷ್ಟು ಬೇಕೋ ಅಷ್ಟು ಮಾತ್ರ ಉತ್ಪತ್ತಿಯಾಗುತ್ತದೆ. ಅವುಗಳ ಕರುವಿಗೆ ತಾಯಿ ಹಾಲಿನಿಂದ ಹೊಟ್ಟೆ ಹುಳ ಆಗುವುದಿಲ್ಲ. ಆದರೆ ಮನುಷ್ಯ ಸಾಕುವ ಹಸುಗಳಿಗೆ ಮನುಷ್ಯನ ವಿಶೇಷ ಆರೈಕೆಯಿಂದ ಅದರ ಕರುವಿನ ಅವಶ್ಯಕತೆಗಿಂತ ಹೆಚ್ಚು ಹಾಲಿನ ಉತ್ಪಾದನೆ ಆಗುತ್ತದೆ. ಒಂದು ವೇಳೆ ಅಕಸ್ಮಾತ್ತಾಗಿ ಕರು ತನ್ನ ತಾಯಿಯ ಅಷ್ಟೂ ಮೊಲೆಹಾಲು ಕುಡಿದರೆ ಖಂಡಿತವಾಗಿಯೂ ಆ ಕರುವಿಗೆ ಅಜೀರ್ಣ ವಾಗುತ್ತದೆ. ಮನುಷ್ಯ ಆ ಕರುವಿಗೆ ಮಿಕ್ಕ ಹಾಲನ್ನು ಮಾತ್ರ ಬಳಸುತ್ತಾನೆ.

Advertisement

ಹಸುವಿನ ಹಾಲನ್ನು ಕೆಲವರು ಕೋಳಿ ಮೊಟ್ಟೆಗೆ ಹೋಲಿಸುತ್ತಾರೆ. ಆದರೆ ಕೋಳಿ ಮೊಟ್ಟೆಯಿಂದ ಕೋಳಿ ಮರಿ ಜನಿಸಿದಂತೆ ಹಸುವಿನ ಹಾಲಿನಿಂದ ಹಸುವಿನ ಕರು ಹುಟ್ಟುವುದಿಲ್ಲ…!! ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ… ಹಾಲು ಮಜ್ಜಿಗೆ ಮೊಸರು ಬೆಣ್ಣೆ ತುಪ್ಪ ವಾಗಿ ಎಷ್ಟು ಕಾಲ ಬೇಕಾದರೂ ಇಡುವಂತಹದ್ದು. ಈ ಬಗೆಯಲ್ಲಿ ಯಾವುದೇ ಮಾಂಸಾಹಾರವನ್ನ ಚಿರ ಕಾಲ ಇಡಲು ಸಾದ್ಯವಿಲ್ಲ. ದೇಸಿ ಹಸುವಿನ ಹಾಲನ್ನು ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಮನುಷ್ಯ ತನ್ನ ಅಗತ್ಯಕ್ಕೆ ಆರೋಗ್ಯ ದೃಷ್ಟಿಯಿಂದ ಬಳಸುತ್ತಿದ್ದ.

ಆದರೆ ಬ್ರಿಟಿಷ್ ರು ಬಂದ ಮೇಲೆ ಕಾಫೀ ಟೀ ಗಳಿಗೆ ಯಥೇಚ್ಛವಾಗಿ ಹಾಲು ಬಳಕೆ ಶುರುವಾಯಿತು. ಹಿಂದೆ ಹಾಲು ಮಕ್ಕಳಿಗೆ ಮತ್ತು ರೋಗಿ ಗಳಿಗೆ ಹೆಚ್ಚಾಗಿ ನಮ್ಮಲ್ಲಿ ಬಳಕೆಯಾಗು ತ್ತಿತ್ತು. ಈ ಐವತ್ತು ವರ್ಷಗಳ ಹಿಂದೆ ಹಾಲು ಮಾರುವುದು ಎಂಬ ಕಲ್ಪನೆ ಯೇ ಇರಲಿಲ್ಲ. ನಗರ ಪ್ರದೇಶದಲ್ಲೂ ಚಿಕ್ಕ ಪ್ರಮಾಣದಲ್ಲಿ ಹಾಲು ವ್ಯಾಪಾರ ಆಗು ತ್ತಿತ್ತು. ಈ ಡೈರಿ ಫಾರಂ ಕಲ್ಪನೆ ಭಾರತದಲ್ಲಿ ಇರಲಿಲ್ಲ. ಭಾರತೀಯರು ಹಾಲನ್ನು ಅಮೃತ ದಂತೆ ಪೂಜನೀಯ ವಾಗಿ ಬಳಸುತ್ತಿದ್ದರು. ಹಾಲು ಕೊಡುವ ಗೋವನ್ನ ಅತ್ಯಂತ ಪ್ರೀತಿಯಿಂದ ಪೂಜನೀಯವಾಗಿ ನೋಡಿಕೊಳ್ಳುತ್ತಿದ್ದರು.

ಹಾಲಿಗೆ ನಕಾರಾತ್ಮಕತೆ ಬಂದದ್ದು ಈ ಹೆಚ್ ಎಫ್ ಜೆರ್ಸಿ ಹಸುಗಳು ಮಾರುಕಟ್ಟೆ ಗೆ ಬಂದಮೇಲೆ… ಹೆಚ್ಚು ಹಾಲು ಕೊಡಲು ಸ್ಟಿರಾಯ್ಡ್ ಇಂಜಕ್ಷನ್ , ಹಸು ಬೆದೆಗೆ ಬರಲು ಇಂಜಕ್ಷನ್, ಹಸುವಿನ ಬೆಳವಣಿಗೆಗೆ ಚೋದಕಗಳು… ಹಸುವನ್ನ ಕಾರ್ಖಾನೆಯ ಯಂತ್ರದಂತೆ ನೋಡಿದಾಗ ಹಸುವಿನ ಹಾಲೂ ಮಾಂಸಾಹಾರದಂತೆ ಭಾಸ ವಾಗಬಹುದು. ಆದರೆ ಅಗತ್ಯ ಕ್ಕೆ ಬೇಕಾದಷ್ಟೇ ಹಾಲನ್ನು ಪ್ರೀತಿಯಿಂದ ಲಾಲನೆ ಪೋಷಣೆ ಮಾಡಿದ ಹಸುಗಳಿಂದ ಪಡೆದರೆ ಖಂಡಿತವಾಗಿಯೂ ಹಸುವಿನ ಹಾಲು ಅಮೃತ.

Advertisement

ಹಸುವಿನ ಹಾಲನ್ನು ಮಾಂಸಾಹಾರಕ್ಕೆ ಹೋಲಿಸುವುದು ಮೂರ್ಖತನ. ಯಾವುದೇ ಜೀವಿಯ ಪ್ರಾಣ ತೆಗದು, ಹಿಂಸಿಸಿ ಪಡೆದ ವಸ್ತು ಮಾಂಸಾಹಾರ… ಹೆಚ್ಚುವರಿ ಗವ್ಯೋತ್ಪನ್ನವಾದ ಹಾಲು ಖಂಡಿತವಾಗಿಯೂ ಹಿಂಸೆಯಿಂದ ಬರುವಂತಹ ವಸ್ತುವಲ್ಲ…
ಹಸುವಿನ (ವಿಶೇಷವಾಗಿ ದೇಸಿ) ಹಾಲು ಅಮೃತ… ದಯಮಾಡಿ ಯಾರೂ ಹಸುವಿನ ಹಾಲನ್ನು ಮಾಂಸಾಹಾರಕ್ಕೆ ಹೋಲಿಸದಿರಿ….

Advertisement
Service title
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ

ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…

4 hours ago

ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |

ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…

11 hours ago

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

16 hours ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

17 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

2 days ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago