Opinion

ಹಾಲು ಮಾಂಸಾಹಾರವೇ…? ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಾಲು(Milk) ಸಸ್ಯಜನ್ಯ ಮೂಲದಿಂದ ಬರದಿದ್ದರೂ ಸಸ್ತಿನಿ(memmal) ಪ್ರಾಣಿಯಿಂದ(animal) ಬರುವ ಸಸ್ಯಹಾರದಂತೆ(vegetarian) ಪರಿಗಣಿಸಬಹುದು. ಬಹಳಷ್ಟು ಜನರು ಸಸ್ಯಹಾರಿಗಳು ಹಸುವಿನ ಹಾಲನ್ನು(Cow milk) ಬಳಸುವುದನ್ನು ಮೂದಲಿಸುತ್ತಾರೆ. ಕಾಡಿನ ಜಿಂಕೆ ಕಡವೆ ಕಾಡುಕೋಣ ಇತ್ಯಾದಿ ಸಸ್ತಿನಿ ಪ್ರಾಣಿಗಳಲ್ಲಿ ಆಯಾ ಪ್ರಾಣಿಗಳ ಕರುಗಳಿಗೆ(calf) ಎಷ್ಟು ಬೇಕೋ ಅಷ್ಟು ಮಾತ್ರ ಉತ್ಪತ್ತಿಯಾಗುತ್ತದೆ. ಅವುಗಳ ಕರುವಿಗೆ ತಾಯಿ ಹಾಲಿನಿಂದ ಹೊಟ್ಟೆ ಹುಳ ಆಗುವುದಿಲ್ಲ. ಆದರೆ ಮನುಷ್ಯ ಸಾಕುವ ಹಸುಗಳಿಗೆ ಮನುಷ್ಯನ ವಿಶೇಷ ಆರೈಕೆಯಿಂದ ಅದರ ಕರುವಿನ ಅವಶ್ಯಕತೆಗಿಂತ ಹೆಚ್ಚು ಹಾಲಿನ ಉತ್ಪಾದನೆ ಆಗುತ್ತದೆ. ಒಂದು ವೇಳೆ ಅಕಸ್ಮಾತ್ತಾಗಿ ಕರು ತನ್ನ ತಾಯಿಯ ಅಷ್ಟೂ ಮೊಲೆಹಾಲು ಕುಡಿದರೆ ಖಂಡಿತವಾಗಿಯೂ ಆ ಕರುವಿಗೆ ಅಜೀರ್ಣ ವಾಗುತ್ತದೆ. ಮನುಷ್ಯ ಆ ಕರುವಿಗೆ ಮಿಕ್ಕ ಹಾಲನ್ನು ಮಾತ್ರ ಬಳಸುತ್ತಾನೆ.

Advertisement
Advertisement

ಹಸುವಿನ ಹಾಲನ್ನು ಕೆಲವರು ಕೋಳಿ ಮೊಟ್ಟೆಗೆ ಹೋಲಿಸುತ್ತಾರೆ. ಆದರೆ ಕೋಳಿ ಮೊಟ್ಟೆಯಿಂದ ಕೋಳಿ ಮರಿ ಜನಿಸಿದಂತೆ ಹಸುವಿನ ಹಾಲಿನಿಂದ ಹಸುವಿನ ಕರು ಹುಟ್ಟುವುದಿಲ್ಲ…!! ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ… ಹಾಲು ಮಜ್ಜಿಗೆ ಮೊಸರು ಬೆಣ್ಣೆ ತುಪ್ಪ ವಾಗಿ ಎಷ್ಟು ಕಾಲ ಬೇಕಾದರೂ ಇಡುವಂತಹದ್ದು. ಈ ಬಗೆಯಲ್ಲಿ ಯಾವುದೇ ಮಾಂಸಾಹಾರವನ್ನ ಚಿರ ಕಾಲ ಇಡಲು ಸಾದ್ಯವಿಲ್ಲ. ದೇಸಿ ಹಸುವಿನ ಹಾಲನ್ನು ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಮನುಷ್ಯ ತನ್ನ ಅಗತ್ಯಕ್ಕೆ ಆರೋಗ್ಯ ದೃಷ್ಟಿಯಿಂದ ಬಳಸುತ್ತಿದ್ದ.

ಆದರೆ ಬ್ರಿಟಿಷ್ ರು ಬಂದ ಮೇಲೆ ಕಾಫೀ ಟೀ ಗಳಿಗೆ ಯಥೇಚ್ಛವಾಗಿ ಹಾಲು ಬಳಕೆ ಶುರುವಾಯಿತು. ಹಿಂದೆ ಹಾಲು ಮಕ್ಕಳಿಗೆ ಮತ್ತು ರೋಗಿ ಗಳಿಗೆ ಹೆಚ್ಚಾಗಿ ನಮ್ಮಲ್ಲಿ ಬಳಕೆಯಾಗು ತ್ತಿತ್ತು. ಈ ಐವತ್ತು ವರ್ಷಗಳ ಹಿಂದೆ ಹಾಲು ಮಾರುವುದು ಎಂಬ ಕಲ್ಪನೆ ಯೇ ಇರಲಿಲ್ಲ. ನಗರ ಪ್ರದೇಶದಲ್ಲೂ ಚಿಕ್ಕ ಪ್ರಮಾಣದಲ್ಲಿ ಹಾಲು ವ್ಯಾಪಾರ ಆಗು ತ್ತಿತ್ತು. ಈ ಡೈರಿ ಫಾರಂ ಕಲ್ಪನೆ ಭಾರತದಲ್ಲಿ ಇರಲಿಲ್ಲ. ಭಾರತೀಯರು ಹಾಲನ್ನು ಅಮೃತ ದಂತೆ ಪೂಜನೀಯ ವಾಗಿ ಬಳಸುತ್ತಿದ್ದರು. ಹಾಲು ಕೊಡುವ ಗೋವನ್ನ ಅತ್ಯಂತ ಪ್ರೀತಿಯಿಂದ ಪೂಜನೀಯವಾಗಿ ನೋಡಿಕೊಳ್ಳುತ್ತಿದ್ದರು.

ಹಾಲಿಗೆ ನಕಾರಾತ್ಮಕತೆ ಬಂದದ್ದು ಈ ಹೆಚ್ ಎಫ್ ಜೆರ್ಸಿ ಹಸುಗಳು ಮಾರುಕಟ್ಟೆ ಗೆ ಬಂದಮೇಲೆ… ಹೆಚ್ಚು ಹಾಲು ಕೊಡಲು ಸ್ಟಿರಾಯ್ಡ್ ಇಂಜಕ್ಷನ್ , ಹಸು ಬೆದೆಗೆ ಬರಲು ಇಂಜಕ್ಷನ್, ಹಸುವಿನ ಬೆಳವಣಿಗೆಗೆ ಚೋದಕಗಳು… ಹಸುವನ್ನ ಕಾರ್ಖಾನೆಯ ಯಂತ್ರದಂತೆ ನೋಡಿದಾಗ ಹಸುವಿನ ಹಾಲೂ ಮಾಂಸಾಹಾರದಂತೆ ಭಾಸ ವಾಗಬಹುದು. ಆದರೆ ಅಗತ್ಯ ಕ್ಕೆ ಬೇಕಾದಷ್ಟೇ ಹಾಲನ್ನು ಪ್ರೀತಿಯಿಂದ ಲಾಲನೆ ಪೋಷಣೆ ಮಾಡಿದ ಹಸುಗಳಿಂದ ಪಡೆದರೆ ಖಂಡಿತವಾಗಿಯೂ ಹಸುವಿನ ಹಾಲು ಅಮೃತ.

ಹಸುವಿನ ಹಾಲನ್ನು ಮಾಂಸಾಹಾರಕ್ಕೆ ಹೋಲಿಸುವುದು ಮೂರ್ಖತನ. ಯಾವುದೇ ಜೀವಿಯ ಪ್ರಾಣ ತೆಗದು, ಹಿಂಸಿಸಿ ಪಡೆದ ವಸ್ತು ಮಾಂಸಾಹಾರ… ಹೆಚ್ಚುವರಿ ಗವ್ಯೋತ್ಪನ್ನವಾದ ಹಾಲು ಖಂಡಿತವಾಗಿಯೂ ಹಿಂಸೆಯಿಂದ ಬರುವಂತಹ ವಸ್ತುವಲ್ಲ…
ಹಸುವಿನ (ವಿಶೇಷವಾಗಿ ದೇಸಿ) ಹಾಲು ಅಮೃತ… ದಯಮಾಡಿ ಯಾರೂ ಹಸುವಿನ ಹಾಲನ್ನು ಮಾಂಸಾಹಾರಕ್ಕೆ ಹೋಲಿಸದಿರಿ….

Advertisement
Service title
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

10 hours ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

17 hours ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

17 hours ago

14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…

18 hours ago

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ – ಉಪಲೋಕಾಯುಕ್ತ ಬಿ. ವೀರಪ್ಪ

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ  ಉಪಲೋಕಾಯುಕ್ತ ಬಿ.…

18 hours ago