Opinion

ನಿಮ್ಮ ಆಧಾರ್‌ ಕಾರ್ಡ್‌ಗೆ ಹತ್ತು ವರ್ಷ ತುಂಬಿದೆಯಾ…? | ಹಾಗಿದ್ದರೆ ಗಮನಿಸಿ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಆಧಾರು ಕಾರ್ಡು(Aadhaar Card) ನವೀಕರಣ(Renewal) ಮಾಡಿಸಿ…. ನಿಮ್ಮ ಆಧಾರಿಗೆ ಹತ್ತು ವರ್ಷ ತುಂಬಿದೆಯಾ…? ತುಂಬಿದರೆ ತಕ್ಷಣ ಸಮೀಪದ ಗ್ರಾಮ ಒನ್ ಗೆ ಹೋಗಿ ರಿನೀವಲ್ ಮಾಡಿಸಿಕೊಂಡು ‘ಆಧಾರ ಪುನೀತವಾಗಿ” ‌ ‌ ನಮ್ಮ ಜೀವನ.. ನಮ್ಮ ಗ್ರಾಮೀಣ ಕೃಷಿ ಬದುಕು.. ಈ ಆಧಾರು, ಫ್ರೂಫ್(Proof) , ಬಿಪಿಎಲ್(BPL), ಬೆಳೆ ವಿಮೆ(crop insurance), ಅಕ್ರಮ‌ಸಕ್ರಮ‌ ಅರ್ಜಿ, ಎಲೆಚುಕ್ಕಿ ಶಿಲೀಂಧ್ರ, ಗೃಹಲಕ್ಷ್ಮಿ , ಕಿಸಾನ್ ಸಮ್ಮಾನ್( leaf fungus, Grilahakshmi, Kisan Samman).. ಆ ಲಿಂಕ್ ಈ ಲಿಂಕ್ ಮಾಡಿಸುವುದರೊಳಗೇ ಪಾವನವಾಗುತ್ತದೆ.

Advertisement
Advertisement

ಬೆಳಿಗ್ಗೆ ಹುಲ್ಲು ಬೀಜ ಕೇಳಿ ಪಶುವೈದ್ಯ ಇಲಾಖೆಯ ಸಿಬ್ಬಂದಿ ಗೆ ಕರೆ ಮಾಡಿದ್ದೆ.. ಅವರು ಉಚಿತ ಮೇವಿನ ಬೀಜ ಕ್ಕೆ ಆಧಾರು, ಫ್ರೂಟ್ ಐಡಿ , ಆ ಜರಾಕ್ಸು, ಈ ಓಟಿಪಿ ಕೇಳಿದರು. ನಾನು ಈ ಅಡಕೆ ಕೊಯ್ಲು ಸಮಯದಲ್ಲಿ ಇದನ್ನೆಲ್ಲ ಮಾಡುತ್ತಾ ಕೂರಲು ಪುರುಸೋತ್ತು ಇಲ್ಲ ಬೀಜ ಬೇಡ ಬಿಡಿ ಎಂದು ಕೈಬಿಟ್ಟೆ.. ಊರು ಮನೆ ಪಂಚಾಯತಿ, ಆರೋಗ್ಯ ಕೇಂದ್ರಗಳು, ಪಶುವೈದ್ಯ ಇಲಾಖೆ ಇವರಿಗೆಲ್ಲ ಯಾಕ್ರೀ, ಹಿಡುದು ಮುಟ್ಟಿದ್ದಕ್ಕೆಲ್ಲಾ ಆದಾರು, ಫ್ರೂಫ್ ಮತ್ತೊಂದು…?‌ ಯಾರಿಗೆ ಇದನ್ನೇ ಮಾಡ್ತಾ ಕೂರಕ್ಕೆ ಆಗುತ್ತದೆ…?

ನಮ್ಮ ಆಧಾರಿಗೆ ವಯಸ್ಸು ಎಷ್ಟು ಆಗಿದೆ ಎಂದು ನೋಡಿಕೊಂಡು ಅದನ್ನು ರಿನಿವಲ್ ಮಾಡಿಸಬೇಕು.. ಅದಕ್ಕೆ ಮತ್ತೆ ನೂರೆಂಟು ತೊಡಕು.. ಸರ್ವರೂ ಬ್ಯಿಸಿ… ಒಟ್ಟಿನಲ್ಲಿ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ನಲ್ಲೇ ಹಾಸಿಗೆ ಹಾಕಿಕೊಂಡು ಒಂದು ಸ್ಟೌವ್ ಪಾತ್ರೆ ಪಡಗ ಇಟ್ಟುಕೊಂಡು ಅಲ್ಲೇ ವಾಸ್ತವ್ಯ ಹೂಡಿ ಒಂದಾದ ಮೇಲೆ ಒಂದು ಲಿಂಕ್ ಮಾಡಿಸುತ್ತಾ ಕಾಲ ದೂಡಬೇಕು ಅಷ್ಟೇ.. ಅಂದಹಾಗೆ ಇದಾದ ಮೇಲೆ ರೇಷನ್ ಕಾರ್ಡ್ ಗೆ ವಯಸ್ಸಾಗುತ್ತದೆ.. ನಂತರ ಓಟರ್ ಐಡಿಗೂ ದಶಮಾನೋತ್ಸವ ಮುಗಿತದೆ…!!

ಅನಂತರ ಮೇಲೆ ಪಾನ್ ಕಾರ್ಡ್ ಗೆ ವಯಸ್ಸು ಆಗುತ್ತದೆ.. ಮತ್ತೆ ಹೊಸ ಆದಾರ್ ಗೆ ಮತ್ತೆ ಹಳೆ ಆರ್ ಟಿ ಸಿ ಲಿಂಕು.. ಇದು ಗ್ರಾಮ ಒನ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಸಾಕುವ ಯೋಜನೆ ಯಾ….?, ಯಾಕೆ ಸರ್ಕಾರ ವೇ ಜನರಿಗೆ ತೊಂದರೆ ಕೊಡದೇ ರಿನಿವಲ್ ಮಾಡಿಕೊಡಬಾರದು….?, ಜನರನ್ನು ಮತ್ತಷ್ಟು ಗೊಂದಲ ಅವ್ಯವಸ್ಥೆ ಚಿಂತೆಗೆ ಯಾಕೆ ದೂಡಬೇಕು…?
ಬಲ್ಲವರು ಪೇಳಿ…..

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

1 day ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

1 day ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

1 day ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

1 day ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

1 day ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

1 day ago