Advertisement
Opinion

ನಿಮ್ಮ ಆಧಾರ್‌ ಕಾರ್ಡ್‌ಗೆ ಹತ್ತು ವರ್ಷ ತುಂಬಿದೆಯಾ…? | ಹಾಗಿದ್ದರೆ ಗಮನಿಸಿ..

Share

ಆಧಾರು ಕಾರ್ಡು(Aadhaar Card) ನವೀಕರಣ(Renewal) ಮಾಡಿಸಿ…. ನಿಮ್ಮ ಆಧಾರಿಗೆ ಹತ್ತು ವರ್ಷ ತುಂಬಿದೆಯಾ…? ತುಂಬಿದರೆ ತಕ್ಷಣ ಸಮೀಪದ ಗ್ರಾಮ ಒನ್ ಗೆ ಹೋಗಿ ರಿನೀವಲ್ ಮಾಡಿಸಿಕೊಂಡು ‘ಆಧಾರ ಪುನೀತವಾಗಿ” ‌ ‌ ನಮ್ಮ ಜೀವನ.. ನಮ್ಮ ಗ್ರಾಮೀಣ ಕೃಷಿ ಬದುಕು.. ಈ ಆಧಾರು, ಫ್ರೂಫ್(Proof) , ಬಿಪಿಎಲ್(BPL), ಬೆಳೆ ವಿಮೆ(crop insurance), ಅಕ್ರಮ‌ಸಕ್ರಮ‌ ಅರ್ಜಿ, ಎಲೆಚುಕ್ಕಿ ಶಿಲೀಂಧ್ರ, ಗೃಹಲಕ್ಷ್ಮಿ , ಕಿಸಾನ್ ಸಮ್ಮಾನ್( leaf fungus, Grilahakshmi, Kisan Samman).. ಆ ಲಿಂಕ್ ಈ ಲಿಂಕ್ ಮಾಡಿಸುವುದರೊಳಗೇ ಪಾವನವಾಗುತ್ತದೆ.

ಬೆಳಿಗ್ಗೆ ಹುಲ್ಲು ಬೀಜ ಕೇಳಿ ಪಶುವೈದ್ಯ ಇಲಾಖೆಯ ಸಿಬ್ಬಂದಿ ಗೆ ಕರೆ ಮಾಡಿದ್ದೆ.. ಅವರು ಉಚಿತ ಮೇವಿನ ಬೀಜ ಕ್ಕೆ ಆಧಾರು, ಫ್ರೂಟ್ ಐಡಿ , ಆ ಜರಾಕ್ಸು, ಈ ಓಟಿಪಿ ಕೇಳಿದರು. ನಾನು ಈ ಅಡಕೆ ಕೊಯ್ಲು ಸಮಯದಲ್ಲಿ ಇದನ್ನೆಲ್ಲ ಮಾಡುತ್ತಾ ಕೂರಲು ಪುರುಸೋತ್ತು ಇಲ್ಲ ಬೀಜ ಬೇಡ ಬಿಡಿ ಎಂದು ಕೈಬಿಟ್ಟೆ.. ಊರು ಮನೆ ಪಂಚಾಯತಿ, ಆರೋಗ್ಯ ಕೇಂದ್ರಗಳು, ಪಶುವೈದ್ಯ ಇಲಾಖೆ ಇವರಿಗೆಲ್ಲ ಯಾಕ್ರೀ, ಹಿಡುದು ಮುಟ್ಟಿದ್ದಕ್ಕೆಲ್ಲಾ ಆದಾರು, ಫ್ರೂಫ್ ಮತ್ತೊಂದು…?‌ ಯಾರಿಗೆ ಇದನ್ನೇ ಮಾಡ್ತಾ ಕೂರಕ್ಕೆ ಆಗುತ್ತದೆ…?

ನಮ್ಮ ಆಧಾರಿಗೆ ವಯಸ್ಸು ಎಷ್ಟು ಆಗಿದೆ ಎಂದು ನೋಡಿಕೊಂಡು ಅದನ್ನು ರಿನಿವಲ್ ಮಾಡಿಸಬೇಕು.. ಅದಕ್ಕೆ ಮತ್ತೆ ನೂರೆಂಟು ತೊಡಕು.. ಸರ್ವರೂ ಬ್ಯಿಸಿ… ಒಟ್ಟಿನಲ್ಲಿ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ನಲ್ಲೇ ಹಾಸಿಗೆ ಹಾಕಿಕೊಂಡು ಒಂದು ಸ್ಟೌವ್ ಪಾತ್ರೆ ಪಡಗ ಇಟ್ಟುಕೊಂಡು ಅಲ್ಲೇ ವಾಸ್ತವ್ಯ ಹೂಡಿ ಒಂದಾದ ಮೇಲೆ ಒಂದು ಲಿಂಕ್ ಮಾಡಿಸುತ್ತಾ ಕಾಲ ದೂಡಬೇಕು ಅಷ್ಟೇ.. ಅಂದಹಾಗೆ ಇದಾದ ಮೇಲೆ ರೇಷನ್ ಕಾರ್ಡ್ ಗೆ ವಯಸ್ಸಾಗುತ್ತದೆ.. ನಂತರ ಓಟರ್ ಐಡಿಗೂ ದಶಮಾನೋತ್ಸವ ಮುಗಿತದೆ…!!

ಅನಂತರ ಮೇಲೆ ಪಾನ್ ಕಾರ್ಡ್ ಗೆ ವಯಸ್ಸು ಆಗುತ್ತದೆ.. ಮತ್ತೆ ಹೊಸ ಆದಾರ್ ಗೆ ಮತ್ತೆ ಹಳೆ ಆರ್ ಟಿ ಸಿ ಲಿಂಕು.. ಇದು ಗ್ರಾಮ ಒನ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಸಾಕುವ ಯೋಜನೆ ಯಾ….?, ಯಾಕೆ ಸರ್ಕಾರ ವೇ ಜನರಿಗೆ ತೊಂದರೆ ಕೊಡದೇ ರಿನಿವಲ್ ಮಾಡಿಕೊಡಬಾರದು….?, ಜನರನ್ನು ಮತ್ತಷ್ಟು ಗೊಂದಲ ಅವ್ಯವಸ್ಥೆ ಚಿಂತೆಗೆ ಯಾಕೆ ದೂಡಬೇಕು…?
ಬಲ್ಲವರು ಪೇಳಿ…..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ

ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…

8 hours ago

ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…

9 hours ago

ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ

ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…

9 hours ago

ನಿಷೇಧಿತ ಗುಟ್ಕಾ ಮಾರಾಟಕ್ಕೆ ಕಡಿವಾಣ | FDA ದಾಳಿ, 14 ಮಂದಿ ಬಂಧನ – ₹32 ಲಕ್ಷ ಮೌಲ್ಯದ ವಸ್ತು ವಶ

ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…

10 hours ago

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ವಿಶ್ವ ಪರಿಸರ ದಿನಾಚರಣೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಒತ್ತಿ…

10 hours ago

ಲ್ಯಾಬ್‌ ಟು ಲ್ಯಾಂಡ್ – 13.4 ಕೋಟಿ ರೈತರನ್ನು ತಲುಪಿದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’

ದೇಶದಾದ್ಯಂತ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನವು 13.4 ಕೋಟಿ ರೈತರನ್ನು ತಲುಪಿದೆ…

13 hours ago