ಸುದ್ದಿಗಳು

ಐಟಿಐ ವಿದ್ಯಾರ್ಥಿಗಳ ಸಂಕಷ್ಟ | ಪಾಠ ಓದಿದ್ದು ಒಂದು -ಪರೀಕ್ಷೆಗೆ ಬಂದದ್ದು ಇನ್ನೊಂದು | ವಿದ್ಯಾರ್ಥಿಗಳ ಸಂಕಷ್ಟಕ್ಕೆ ಪರಿಹಾರ ಬೇಕಿದೆ |

Share

ವರ್ಷವಿಡೀ ಓದಿದ ಬಳಿಕ ಪರೀಕ್ಷೆ ನಡೆದಾಗ ಐಟಿಐ ವಿಭಾಗದ ಇಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

Advertisement

ಇಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿಗಳಿಗೆ ಇಲೆಕ್ಟ್ರಿಕಲ್‌ ವಿಭಾಗದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರೆಯಲು ಬಂದಿತ್ತು. ಪರೀಕ್ಷೆ ಮುಗಿದ ಬಳಿಕ ಈ ಎಡವಟ್ಟು ತಿಳಿದಿತ್ತು. ಕೊನೆಗೆ ಈ ಪರೀಕ್ಷೆಗೆ ಗ್ರೇಸ್‌ ಅಂಕ ನೀಡಲಾಗುವುದು  ಎಂದು ಭರವಸೆ ಸಿಕ್ಕಿದ ಬಳಿಕ ವಿದ್ಯಾರ್ಥಿಗಳು ಸಮಾಧಾನಗೊಂಡಿದ್ದರು. ಇದೀಗ ಫಲಿತಾಂಶ ಬಂದಾಗ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಯಾರು ಹೊಣೆ ಎನ್ನುವುದು  ಈಗ ಪ್ರಶ್ನೆಯಾಗಿದೆ. ಐಟಿಐ ವಿಭಾಗದವು ರಾಜ್ಯಮಟ್ಟ ಮಾತ್ರವಲ್ಲ ರಾಷ್ಟ್ರಮಟ್ಟದ ವ್ಯವಸ್ಥೆ. ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ವಿದ್ಯಾರ್ಥಿ ಸಂಘಟನೆಗಳು ಈ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ.

ಅಂತಿಮ ವರ್ಷದ ಐಟಿಐ ಪರೀಕ್ಷೆಯಲ್ಲಿ ಎಲೆಕ್ಟಿಕಲ್ ವಿಭಾಗದ ಐದು ಪ್ರಶ್ನೆಗಳನ್ನು ಇಲೆಕ್ಟ್ರಾನಿಕ್ಸ್ ಡ್ರಾಯಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಪರೀಕ್ಷಾ ವಿಭಾಗದವರ ಎಡವಟ್ಟು ಮಕ್ಕಳಿಗೆ ಗೊತ್ತಾದ  ತಕ್ಷಣವೇ ಆಗಲೇ ಪರೀಕ್ಷಾ ಸಿಬ್ಬಂದಿಯವರಿಗೆ ಕೇಳಿದರೂ, ಪರವಾಗಿಲ್ಲ ನಿಮಗೆ ಗೊತ್ತಿರೋದನ್ನ ಬರೆಯಿರಿ , ಗ್ರೇಸ್ ಮಾರ್ಕ್ಸ್ ಕೊಡ್ತಾರೆ ಅಂತ ಹೇಳಿದ್ದಾರೆ. ಒಟ್ಟು 50 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 40 ಅಂಕದ ಪ್ರಶ್ನೆಗಳು ಬೇರೆ ವಿಭಾಗದ ಪ್ರಶ್ನೆಗಳಾಗಿದ್ದು, ಗ್ರೇಸ್ ಮಾರ್ಕ್ಸ್ ಸಿಗುತ್ತೆ ಅಂತ ಮಕ್ಕಳು ಪರೀಕ್ಷೆ ಬರೆದು ತೆರಳಿದ್ದಾರೆ. ಆದರೆ  ಫಲಿತಾಂಶ ಬಂದಾಗ ಅದೊಂದೇ ವಿಷಯದಲ್ಲಿ ಬಹುಪಾಲು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಇಲಾಖೆಗಳ ಈ ಎಡವಟ್ಟಿನಿಂದ ಮಕ್ಕಳ ಭವಿಷ್ಯ ಹಾಳಾಗಿದ್ದು, ಸಂಬಂಧಿಸಿದವರು ಕೂಡಲೇ ಕ್ರಮ ತೆಗೆದುಕೊಳ್ಳಲು ಪೋಷಕರು ಆಗ್ರಹಿಸಿದ್ದಾರೆ.

ಈಗ ಐಟಿಐ ವಿದ್ಯಾರ್ಥಿಗಳ ಪರೀಕ್ಷಾ ಪದ್ದತಿಯೂ ಬದಲಾಗಿದೆ. ಹಿಂದಿನಂತೆ ಪರೀಕ್ಷೆ ಬರೆಯುವ ಬದಲು ಉನ್ನತ ವ್ಯಾಸಾಂಗದ ಮಾದರಿಯಂತೆ ಆನ್‌ ಲೈನ್‌ ಮಾಕ್‌ ಟೆಸ್ಟ್‌ ಇರುತ್ತದೆ. ಇದೂ ಒಂದು ಸಮಸ್ಯೆ ವಿದ್ಯಾರ್ಥಿಗಳಿಗೆ ಕಾಡುತ್ತದೆ. ಇದೀಗ ಡ್ರಾಯಿಂಗ್ ವಿಭಾಗವೂ ಸಂಕಷ್ಟವಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಕ್ಷಣವೇ ಇಲಾಖೆಗಳು ಗಮನಹರಿಸಬೇಕಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಬಯಲು | 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |

ಸುಮಾರು 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಹಾಗೂ 12 ಟ್ರಕ್‌ಗಳನ್ನು ಮಹಾರಾಷ್ಟ್ರದ…

12 hours ago

ಪ್ರೀತಿಯಲ್ಲಿ ನಿಪುಣರು ಈ ರಾಶಿಯವರು…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಯನ್ನ ಗೌರವಿಸಿ ಪಾಲಿಸಬೇಕಾದುದ್ದೂ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪಮುಖ್ಯಮಂತ್ರಿ…

23 hours ago

ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆಗಳು ಗೋಚರಿಸುತ್ತಿವೆ. ಒಳನಾಡಿನಲ್ಲಿ…

1 day ago

ತರಕಾರಿ,ಹಣ್ಣುಗಳಲ್ಲಿ ಶೇ. 15ರಷ್ಟು ತ್ಯಾಜ್ಯ ಉತ್ಪತ್ತಿ

ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ಕೇಂದ್ರ…

1 day ago

ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’

ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ.…

1 day ago