Advertisement
MIRROR FOCUS

ಪರಿಸರ ದಿನಕ್ಕೊಂದು ನಮನ | ಹಸಿರಾಗಲಿ ಪರಿಸರ…. ಹಸಿರಾಗಿರಲಿ ಮನಸು….

Share
ಎರಡು ಸುಂದರವಾದ ದೃಶ್ಯ ಗಳ ಚಿತ್ರಣ.‌ ವ್ಯತ್ಯಾಸ ಇಷ್ಟೇ,  ಒಂದು ಹಳ್ಳಿಪ್ರದೇಶದ್ದು, ಇನ್ನೊಂದು  ನಗರ ಪ್ರದೇಶದ್ದು.  ನೋಡಲು ಎರಡು ಚೆಂದವೇ . ಆದರೆ ಮನಸಿಗೆ ಆಪ್ತವಾಗುವುದು  ಹಸಿರಿನ ಹಳ್ಳಿ ಚಿತ್ರವೇ.
ಪರಿಸರ ನಮಗೇನೆಲ್ಲಾ ಕೊಟ್ಟಿದೆ. ತನ್ನೊಳಗಿರುವುದನ್ನೇಲ್ಲಾ ಬಗೆಬಗೆದೇ ಕೊಟ್ಟಾಗಿದೆ. ಶುದ್ಧ ಗಾಳಿ, ನೀರು, ಫಲವತ್ತಾದ ಮಣ್ಣು ಎಲ್ಲವನ್ನೂ  ನಮಗೆ ಕೊಟ್ಟಿದೆ. ಇದರ ಮಡಿಲಲ್ಲಿ ನಮ್ಮನ್ನು ಮಕ್ಕಳಂತೆ ಸಲಹುತ್ತಿದೆ.  ಆದರೆ ನಾವು ಕೊಟ್ಟದ್ದಾದರೂ ಏನು?   ಬರೀ ನೋವನ್ನು.   ನಮ್ಮ ಸುಂದರ ಪರಿಸರ  ನಿರಂತರ ದಬ್ಬಾಳಿಕೆಗೆ  ನಲುಗಿ ಹೋಗಿದೆ.  ಯಾವ ರೀತಿ ರೀತಿ ಎಲ್ಲಾ ಸಾದ್ಯವೋ ಆ ರೀತಿಯೆಲ್ಲಾ  ಉಪಯೋಗಿಸಿ ಕೊಂಡಿದ್ದೇವೆ.  ಒಂದೇ ಎರಡೇ ಹಲವು ರೀತಿಯ ಮಾಲಿನ್ಯಗಳು ನಿಯಂತ್ರಣ ಮೀರಿ  ನಡೆಯುತ್ತಿದೆ. ವಾಯು, ಜಲ, ಶಬ್ದ ಮಾಲಿನ್ಯ ಗಳು ಸೇರಿ ಪರಿಸರವನ್ನು ಹಾಳುಗೆಡವುತ್ತಿದ್ದೇವೆ.  ಇದರ ಕುರಿತು ಜಾಗೃತಿ ಮೂಡಿಸುವ  ಸಲುವಾಗಿ ವಿಶ್ವದಾದ್ಯಂತ ಜೂನ್ 5 ರಂದು   ‘ವಿಶ್ವ ಪರಿಸರ ದಿನ’ ವೆಂದು ಆಚರಿಸಲಾಗುತ್ತದೆ.  1974  ನೇ ಇಸವಿಯಿಂದ ಈ ಆಚರಣೆ ಆರಂಭವಾಯಿತು.   ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ರೀತಿಯ ಕಾರ್ಯಗಳನ್ನು ಜಗತ್ತಿನಾದ್ಯಂತ ಹಮ್ಮಿ ಕೊಳ್ಳಲಾಗುತ್ತಿದೆ.
ಅನಿರೀಕ್ಷಿತವಾಗಿ  ಬಂದೆರಗಿದ   ಕೋವಿಡ್, ಜನರನ್ನು  ಪರಿಸರದತ್ತ ಮುಖ ಮಾಡುವಂತೆ ಮಾಡಿದೆ.   ಕೃತಕತೆಯಿಂದ ಹೊರಬಂದು ನೈಜತೆಯಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳ ಬೇಕಾದ ಅಗತ್ಯ ಮನಗಾಣುವ ಸಮಯ ಮನುಜನದ್ದು.  ಮನಸು‌ ಶುದ್ಧ ವಾಗಿದ್ದಾಗ ನೋಡುವ ದೃಷ್ಟಿ ಯೂ ಶುದ್ಧವಾಗಿರುತ್ತದೆ. ಮನಸಿನ ಕೊಳಕನ್ನು ದೂರ ಮಾಡಿ ಪರಿಸರದತ್ತ ಮುಖ ಮಾಡುವುದೇ  ನಾವು ಪ್ರಕೃತಿಗೆ  ಕೊಡುವ ಉಡುಗೊರೆ.
“ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ” ಈ ಬಾರಿಯ ಘೋಷ ವಾಕ್ಯ.
ಬನ್ನಿ ಪ್ರಕೃತಿಯ  ಮತ್ತೆ ಹಸಿರು ಮಾಡುವಲ್ಲಿ ಕೈ ಜೋಡಿಸೋಣ ಆಗದೇ?
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

55 minutes ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

20 hours ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

2 days ago