The Rural Mirror ಫಾಲೋಅಪ್

ಗ್ರಾಮೀಣ ಭಾರತ | ಅನಾರೋಗ್ಯಕ್ಕೆ ತುತ್ತಾದ ಮಹಿಳೆಯನ್ನು ಬಡಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಸಾಗಿಸಿದ ಘಟನೆ | ಜೀಪು ಸಾಗುವ ವ್ಯವಸ್ಥೆ ಇದ್ದರೂ ಬಡಿಗೆಯಲ್ಲಿ ಹೊತ್ತರು…! | ಗ್ರಾಪಂ ಸದಸ್ಯರಿಂದ ತರಾಟೆ | ರಸ್ತೆಗಾಗಿ ವಾಸ್ತವ ತಿರುಚಿದರು..!?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ರಸ್ತೆ‌ ಸರಿಯಿಲ್ಲದ‌ ಕಾರಣ ವೃದ್ದೆಯನ್ನು ಮರದ ಬಡಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಸಾಗಾಟ ಘಟನೆ ವಾರಗಳ ಹಿಂದೆ ಸುಳ್ಯ ವಿಧಾನಸಭಾ ಕ್ಷೇತ್ರ ಕಡಬದ ಬಳ್ಳಕ್ಕದಿಂದ ವರದಿಯಾಗಿತ್ತು. ಇದೀಗ ಈ ಘಟನೆಯ ಅಸಲಿಯ ಬಗ್ಗೆ ಆ ವಾರ್ಡ್‌ ನ ಗ್ರಾಪಂ ಸದಸ್ಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ರಸ್ತೆ ಸರಿ ಇಲ್ಲ ಎಂದು ಬಿಂಬಿಸಲು ವೃದ್ಧೆಯನ್ನು ಬಡಿಗೆಯಲ್ಲಿ ಕಟ್ಟಿ ವೈರಲ್‌ ಮಾಡಿರುವುದು  ಈಗ ಬೆಳಕಿಗೆ ಬಂದಿದೆ. ಗ್ರಾಮೀಣ ಭಾರತದ ನಿಜವಾದ ಕಾಳಜಿಗೆ ಇದೊಂದು ಅಪಚಾರವಾಗಿದೆ.

Advertisement

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಆ.19 ರಂದು ಈ ಘಟನೆ ನಡೆದಿದೆ. 70 ವರ್ಷದ ಮಹಿಳೆಯೊಬ್ಬರು ಕಾಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ರಸ್ತೆ ಇದ್ದರೂ ಅಭಿವೃದ್ದಿ ಕಾರಣ ಹಿನ್ನೆಲೆಯಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದರು. ರಸ್ತೆಯೇ ಸರಿ ಇಲ್ಲವೆಂದು ಬಿಂಬಿಸಲು ಮಹಿಳೆಯನ್ನು ಬಡಿಗೆಯಲ್ಲಿ ಕಟ್ಟಿ ಹೊತ್ತ ವಿಡಿಯೋ ಮಾಡಿ ವೈರಲ್‌ ಮಾಡಲಾಗಿತ್ತು. ಸಹಜವಾಗಿಯೇ ಗ್ರಾಮೀಣ ಭಾರತದ ಈ ವಿಡಿಯೋ ಎಲ್ಲಾ ಮಾಧ್ಯಮಗಳಿಗೂ ತಲುಪಿಸಿದ್ದರು. ರಾಜ್ಯಾದ್ಯಂತ ಗಮನಸೆಳೆದಿತ್ತು.

ಆದರೆ ಈ ಘಟನೆ ನಡೆದ ನಂತರ ಇದೀಗ  ಅದೇ ಮನೆಯವರು ಜೀಪಲ್ಲಿ ಸುಮಾರು ಎಂಟು ಕ್ವಿಂಟಾಲ್‌ ಅಡಿಕೆ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ವಿಡಿಯೋ ಮಾಡಿ ವೈರಲ್‌ ಮಾಡಿದ್ದಾರೆ. ವೃದ್ಧ  ಮಹಿಳೆಯನ್ನು ಬಡಿಗೆಯಲ್ಲಿ ಸಾಗಿಸಿದ ಎರಡು ದಿನಗಳ ಬಳಿಕ ಅದೇ ಮನೆಯಿಂದ ಜೀಪ್ ನಲ್ಲಿ ಅಡಿಕೆ ಸಾಗಾಟ ಮಾಡಿರುವ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ಜೀಪು ಸಾಗುವ ದಾರಿ ಇದ್ದರೂ ವೃದ್ಧೆಯನ್ನು ಏಕೆ ಬಡಿಗೆಯಲ್ಲಿ ಕಟ್ಟಿ ಹೊತ್ತಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರುವುದು  ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆಯ ಹೆಸರಿನಲ್ಲಿ ರಾಜಕೀಯ ಮಾಡಿದ  ಮನೆ ಮಂದಿಯನ್ನು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಮಳೆಯಿಂದಾಗಿ ಕಚ್ಛಾ ರಸ್ತೆ ಹಾನಿಗೊಳಗಾಗಿದ್ದು ನಿಜ. ಆದರೆ ರಸ್ತೆ ಇದೆ, ಜೀಪು ಓಡಾಟ ನಡೆಯುತ್ತದೆ. ಹಾಗಿದ್ದರೂ ಮಹಿಳೆಯನ್ನು ಬಡಿಗೆಯಲ್ಲಿ ಕಟ್ಟಿ ಹೊತ್ತಿರುವುದು ಅಮಾನವೀಯ ಎಂದೂ ಹೇಳಿದ್ದಾರೆ.

ಇಂದಿಗೂ ಹಲವಾರು ಗ್ರಾಮೀಣ ಭಾಗಗಳು ಮೂಲಭೂತ ಸಮಸ್ಯೆಯಿಂದ ಬಳಲುತ್ತಿವೆ. ಅಭಿವೃದ್ಧಿಯ ಕಡೆಗೆ ಆಡಳಿತವು ಗಮನಹರಿಸಬೇಕಿರುವುದೂ ನಿಜವೇ. ಆದರೆ ವಾಸ್ತವ ಸಂಗತಿಯನ್ನು ಮರೆಮಾಚಿ ಈ ರೀತಿ ವಿಡಿಯೋ ಮಾಡಿ ವೈರಲ್‌ ಮಾಡುವುದರ ಬಗ್ಗೆ ಅನೇಕರು ಖೇದ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡುವುದರಿಂದ ವಾಸ್ತವ ಸಂಗತಿಗಳೂ ಆಡಳಿತ ಗಮನಕ್ಕೆ ಬಾರದೇ ಇರುತ್ತವೆ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕಾದ್ದು ನಿಜ, ಈ ರೀತಿಯ ಘಟನೆಗಳು ನಡೆಯಬಾರದು ಎಂದು “ರೂರಲ್‌ ಮಿರರ್‌” ಉದ್ದೇಶಿಸುತ್ತದೆ. ಹೀಗಾಗಿ ತಪ್ಪು ಮಾಹಿತಿಯಿಂದ ಈ ಹಿಂದೆ ಪ್ರಕಟ ಮಾಡಿರುವ ವರದಿಗೆ ವಿಷಾದಿಸುತ್ತೇವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ

ಜಮ್ಮು- ಕಾಶ್ಮೀರದ  ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ  ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…

7 hours ago

ಹವಾಮಾನ ವರದಿ | 22.04.2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.26ರಿಂದ ಮಳೆ ಹೆಚ್ಚಾಗುವ ನಿರೀಕ್ಷೆ

23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

11 hours ago

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |

ಮಹಾರಾಷ್ಟ್ರದ ಅಹಲ್ಯಾನಗರದಿಂದ ಅಮೆರಿಕದ ನ್ಯೂಯಾರ್ಕ್‌ಗೆ 14 ಟನ್‌ಗಳಷ್ಟು ಭಾರತೀಯ ದಾಳಿಂಬೆಯನ್ನು ರಫ್ತು ಮಾಡಲಾಗಿದೆ.…

21 hours ago

ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ

ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ಲಾಸ್ಟಿಕ್ ಬಳಕೆ ಕುರಿತು ಹೆಚ್ಚು ತಿಳುವಳಿಕೆ…

22 hours ago

ಹಾವು, ಕಾಗೆ, ನಾಯಿಗಳು ಕನಸಿನಲ್ಲಿ ಬಂದ್ರೆ ನಿರ್ಲಕ್ಷ್ಯ ಮಾಡ್ಬೇಡಿ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

22 hours ago

ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ | ಆಲಿಕಲ್ಲು, ಗುಡುಗು ಸಹಿತ ಭಾರಿ ಮಳೆ

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ್ದ ಮೇಘಸ್ಫೋಟ ಮತ್ತು ಭೂಕುಸಿತ ಪೀಡಿತ ರಾಂಬನ್ ಜಿಲ್ಲೆಯಲ್ಲಿ ಪರಿಹಾರ ಹಾಗೂ…

22 hours ago