ಸುಳ್ಯ ತಾಲೂಕಿನ ನೀರಾವರಿ ಕೃಷಿ ಪಂಪ್ ಸೆಟ್ಟುಗಳ 2003 ರಿಂದ 2008 ರ ಅವಧಿಯ ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಸುಳ್ಯ ತಾಲೂಕಿನ ಭಾರತೀಯ ಕಿಸಾನ್ ಸಂಘದ ನಿಯೋಗವು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಇವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಕೃಷಿ ಪಂಪ್ಸೆಟ್ಟುಗಳು ಬಾಕಿಯನ್ನು ದ ಕ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮನ್ನಾ ಮಾಡಲಾಗಿತ್ತು. ಹಾಗಿದ್ದರೂ ಸುಳ್ಯ ತಾಲೂಕಿನ ಕೃಷಿ ಪಂಪುಸೆಟ್ಟುಗಳ ಬಾಕಿ ಮನ್ನಾ ಆಗಿರದೆ, ಈಗಲೂ ಹಳೆ ಬಾಕಿ ಎಂದು ನಮೂದಾಗುತ್ತಿತ್ತು.ಇದರಿಂದ ಕೃಷಿಕರ ಕೃಷಿ ಪಂಪ್ ಸೆಟ್ಟುಗಳ ಖಾತೆ ವರ್ಗಾವಣೆಯಾಗುವ ಸಂದರ್ಭ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಭಾ ಕಿ ಸಂ ಈ ಬಾಕಿಯನ್ನು ಸುಳ್ಯ ತಾಲೂಕಿನಲ್ಲೂ ಮನ್ನಾ ಮಾಡುವಂತೆ ಮನವಿ ಮಾಡಿದೆ.ಮನವಿ ನೀಡಿದ ವೇಳೆ ಸಚಿವರು ಮೆಸ್ಕಾಂ ಆಢಳಿತ ನಿರ್ದೇಶಕರ ಜೊತೆ ವಿಮರ್ಶಿಸಿ ಮನ್ನಾ ಮಾಡುವ ಭರವಸೆಯನ್ನು ನೀಡಿದರು. ಇದೇ ವೇಳೆ ಸುಳ್ಯ ತಾಲೂಕಿನ ನಿಂತಿಕಲ್ಲು ಸಮೀಪ ಕುಳಾಯಿತ್ತೋಡಿಯಲ್ಲಿ ಸ್ಥಾಪನೆಯಾಗಬೇಕಾದ 33 ಕೆ. ವಿ. ಉಪ ವಿದ್ಯುತ್ ಕೇಂದ್ರದ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಅಧ್ಯಕ್ಷರಾದ ಎನ್. ಜಿ. ಪ್ರಭಾಕರ ರೈ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ. ಜಿ. ಎಸ್. ಎನ್. ಪ್ರಸಾದ್, ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಕಾರ್ಯದರ್ಶಿ ಬಿ. ಸಾಯಿಶೇಖರ್, ಖಜಾಂಚಿ ಕೆ. ಸೀತಾರಾಮ್, ನಿಕಟಪೂರ್ವ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಭಟ್ ನೆಟ್ಟಾರು, ಸದಸ್ಯರಾದ ಗೋಪಾಲಕೃಷ್ಣ ಭಟ್ ಕರುವಂಕಲ್ಲು, ಗಬ್ಲಡ್ಕ ಸದಾಶಿವ ಭಟ್, ಯತಿರಾಜ್ ಓಣಿಯಡ್ಕ ಭಾಗವಹಿಸಿದ್ದರು.
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…
ಗುಟ್ಕಾ ಮತ್ತು ಪಾನ್ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…