ಕನಸೆಂಬ ಪಕ್ಷಿಯ ಬೆನ್ನೇರಿ ಹೊರಟಾಗ…..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
“ಕನಸು” ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಹ  ತಾನು ಮುಂದೆ ಜೀವನದಲ್ಲಿ ಹೇಗೆ ಆಗಬೇಕು ಎಂಬ ಕನಸು ಕಾಣುತ್ತಲೇ ಬರುತ್ತಾನೆ. ಆ ಕನಸು ನನಸಾಗುತ್ತದೆಯೋ? ಇಲ್ಲವೋ! ಎಂದು ತಿಳಿಯಲು ಸಾಧ್ಯವಿಲ್ಲ. ಆದರೂ ಸಹ ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗುತ್ತಾನೆ! ಒಂದಲ್ಲಾ ಒಂದು ದಿನ ತಾನು ಆ ಕನಸನ್ನು ನನಸು ಮಾಡಿಕೊಳ್ಳುವೆ ಎಂಬ ಛಲ ಆತನಲ್ಲಿ ಇರುತ್ತದೆ.
ವ್ಯಕ್ತಿ ತನ್ನ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣುವ ಬದಲು ಕೇವಲ ಒಂದು ಕನಸನ್ನು ಕಂಡು ಆ ಕನಸನ್ನು ನನಸು ಮಾಡಿಕೊಳ್ಳಲು ಮುಂದಡಿ ಇರಿಸಿದರೆ ಒಂದು ದಿನ ನನಸಾಗಿಯೇ ಆಗುತ್ತದೆ. ಕೇವಲ ಆ ಕನಸನ್ನು ಬೆನ್ನತ್ತಿ ಹೊರಟರೆ ಸಾಲದು,  ಕನಸನ್ನು ಬೆನ್ನತ್ತಿ ಹೋಗುವ ದಾರಿ ಹಾಗೂ ತಲುಪುವ ಗುರಿ ಎರಡೂ ಸಹ ಒಳ್ಳೆಯದಾಗಿರಬೇಕು.
ನಮ್ಮ ಗುರಿ ಸಾಧನೆಯು ಇನ್ನೊಬ್ಬರ ಜೀವನವನ್ನು ಹಾಳು ಮಾಡಬಾರದು, ನಮ್ಮ ಕನಸು ಇನ್ನೊಬ್ಬರ ಕನಸಿಗೆ ಮುಳ್ಳಾಗಬಾರದು, ನಮ್ಮ ನಿರ್ಧಾರಗಳು ಇನ್ನೊಬ್ಬರ ಬದುಕಿಗೆ ಮುಳುವಾಗಬಾರದು.
ಬದುಕಿನಲ್ಲಿ ನೂರಾರು ಕನಸುಗಳನ್ನು ಕಂಡು ಯಾವ ಕನಸನ್ನು ಈಡೇರಿಸಿಕೊಳ್ಳುವುದು ಎಂದು ಚಿಂತೆ ಮಾಡುವ ಬದಲು ಕೇವಲ ಒಂದು ಕನಸನ್ನು ಕಾಣಿ, ಹಾಗೂ ಆ ಕನಸನ್ನು ನನಸಾಗಿಸಲು ಹೋರಾಟ ಮಾಡಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆ, ನಿಷ್ಠೆ, ಸತ್ಯ, ಅಹಿಂಸೆ, ಪ್ರೀತಿ ಹಾಗೂ ನಿರ್ದಿಷ್ಟ ಗುರಿ ಮತ್ತು ಉದ್ದೇಶ. ಈ ಅಂಶಗಳು ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಿಸಲು ಸಹಕಾರಿಯಾಗುತ್ತದೆ.
ಆದರೆ ಈ ಕನಸಿನ ಓಟದಲ್ಲಿ ಪ್ರೀತಿ, ಸ್ನೇಹ, ಸಂಬಂಧಗಳನ್ನು ಎಂದಿಗೂ ಮರೆಯದಿರಿ. ಏಕೆಂದರೆ ಒಂದು ನಿಜವಾದ ಪ್ರೀತಿ, ಒಂದು ನಿಜವಾದ ಸ್ನೇಹ, ನಿಮ್ಮ ಈ ಸಾಧನೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರಬಹುದು.
ಸಾಧನೆಯ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಿ. ಏಕೆಂದರೆ ನಮ್ಮ ದೇಹಕ್ಕೆ ಬಂಧನ ಇರಬಹುದು ಆದರೆ ನಮ್ಮ ಭಾವನೆಗಳಿಗೆ ಬಂಧನವಿಲ್ಲ. ಹಾಗೂ ಆ ಭಾವನೆಗಳನ್ನು ಬಂಧಿಸಲು ಸಾಧ್ಯವೂ ಇಲ್ಲ. ಭಾವನೆಗಳು ಎಂದಿಗೂ ಸ್ವತಂತ್ರ. ಭಾವನೆಗಳೇ ಒಂದು ಪ್ರಪಂಚ.
“ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗು… ಆದರೆ ಎಂದಿಗೂ ಮರೆಯದಿರು ಪ್ರೀತಿ, ಸ್ನೇಹ, ಸಂಬಂಧಗಳನ್ನು…..”
# ಉಲ್ಲಾಸ್‌ ಕಜ್ಜೋಡಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

8 hours ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

9 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

9 hours ago

ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ…

10 hours ago

ಫಸಲ್ ವಿಮಾ ಯೋಜನೆ | ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ

2025 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ…

10 hours ago