MIRROR FOCUS

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾಷೆ ಇರುವುದು ವಿಷಯವನ್ನು ಹಂಚಿಕೊಳ್ಳಲು. ಭಾವನೆಗಳನ್ನು ಅಭಿವ್ಯಕ್ತಿಸುವ ಸಲುವಾಗಿ. ಕನಸುಗಳನ್ನು ಕಟ್ಟಲು, ಕಂಡ ಕನಸನ್ನು ಈಡೇರಿಸಿಕೊಳ್ಳಲು.

Advertisement
Advertisement

ಎಲ್ಲರಿಗೂ ಅವರವರ ಭಾಷೆಯ ಬಗ್ಗೆ ವಿಶೇಷ ಮಮತೆ ಇರುವುದು ಸಹಜವೇ. ಮಾತೃಭಾಷೆಯ ಬಗ್ಗೆ ಸ್ವಲ್ಪ ಜಾಸ್ತಿಯೇ ವ್ಯಾಮೋಹ. ಅವರವರ ಭಾಷೆ ಮಾತನಾಡುವುದು ಇಷ್ಟದ ವಿಷಯವೇ. ನಮ್ಮ ಕರ್ನಾಟಕದಲ್ಲಂತೂ ನವೆಂಬರ್ ಬಂದರೆ ಒಮ್ಮೆ ಮೈಕೊಡವಿ ನಿಂತಂತಾಗುತ್ತದೆ. ಪೇಪರ್ ನಲ್ಲೂ, ದೂರದರ್ಶನದಲ್ಲೂ, ಆಕಾಶವಾಣಿಯಲ್ಲೂ, ಕನ್ನಡವೇ ರಿಂಗಿಣಿಸುತ್ತದೆ. ನಮ್ಮ ಈ ನಡೆ ಮನಸಿಗೆ ಕಸಿವಿಸಿ ಉಂಟು ಮಾಡುತ್ತದೆ.

ಭಾಷೆಯಾಗಿ ಕನ್ನಡ ಶ್ರೀಮಂತವಾಗಿದೆ. ಅಭಿವ್ಯಕ್ತಿಸಲು ಪ್ರತಿಯೊಂದು ಭಾವನೆಗಳಿಗೂ, ಸಂಬಂದಗಳಿಗೂ ಅದರದ್ದೇ ಆದ ಶಬ್ಧಗಳಿವೆ. ಸಮೃದ್ಧವಾಗಿರುವ ಕನ್ನಡವನ್ನು ಉಳಿಸಿಕೊಳ್ಳುವುದು ಇಂದಿನ ಅನಿವಾರ್ಯತೆ. ಕನ್ನಡವನ್ನು ಶುದ್ಧವಾಗಿ ಮಾತನಾಡುವವರು ಸಿಕ್ಕಿದಾಗ ಮಾತುಗಳನ್ನು ಕೇಳಲು ಖುಷಿಯಾಗುತ್ತದೆ. ಇಂದು ನಮ್ಮ ಕನ್ನಡವೂ ಇತರ ಭಾಷೆಗಳ ಮಿಶ್ರಣದ ಕಿಚಡಿಯಾಗಿ ಬಿಟ್ಟಿದೆ. ನಾವು ಎಷ್ಟು ಅದಕ್ಕೆ ಹೊಂದಿಕೊಂಡಿದ್ದೇವೆಂದರೆ ಅದು ಕನ್ನಡವಲ್ಲವೆಂದು ಒಪ್ಪಿಕೊಳ್ಳಲೂ ಅಸಾಧ್ಯವೆಂಬಷ್ಟು. ಒಂದು ಹತ್ತು ವಾಕ್ಯ ಆಂಗ್ಲ ಶಬ್ದವನ್ನು ಬಳಸದೆ ಮಾತನಾಡುವುದು ಎಷ್ಟು ಕಷ್ಟವೆಂದು ಒಮ್ಮೆ ಪ್ರಯತ್ನಿಸಿದರೆ ಗೊತ್ತಾಗುತ್ತದೆ. ಸೋತು ಬಿಡುತ್ತೀರಿ! ಅಷ್ಟು ನಾವು ಹೊಂದಿಕೊಂಡಿದ್ದೇವೆ. ಬೇರೆ ಭಾಷೆಗಳನ್ನೂ ನಾವು ಕಲಿಯುವುದು ಒಳ್ಳೆಯದೇ. ಆದರೆ ಬಳಸುವಾಗ , ಮಾತನಾಡುವಾಗ ಆಯಾ ಭಾಷೆಯನ್ನೇ ಸರಿಯಾಗಿ, ಸ್ಷಷ್ಟವಾಗಿ ನುಡಿಯುವುದು ಚಂದವಲ್ಲವೇ.? ನುಡಿ ಕನ್ನಡ ನಡೆ ಕನ್ನಡ, ಬದುಕು ಕನ್ನಡ. ಜೈ ಕನ್ನಡಮ್ಮ, ಜೈ ಕರ್ನಾಟಕ.

 

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

2 hours ago

ಶನಿ ಬುಧರಿಂದ ನವಪಂಚಮ ರಾಜಯೋಗ

2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…

2 hours ago

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

11 hours ago

ಗೆದ್ದದ್ದು ಬೆಂಗಳೂರು ಅಲ್ಲ, ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿ…!!! ಗೊತ್ತಾ..?

ಎಲ್ಲಿ  ಉಚಿತವೆಂಬ ಆಮಿಶ ಇದೆಯೋ  ಅಲ್ಲಿ ತಳ್ಳಾಟವೂ  ಇರುತ್ತದೆ. ಸರಕಾರಿ ಬಸ್ ಗಳಲ್ಲಿ…

12 hours ago

ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…

12 hours ago

ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ…

18 hours ago