ಚುನಾವಣಾ ಕಣ | ಬಹಿರಂಗವಾದ ಇನ್ನೊಂದು ಚುನಾವಣಾ ಸಮೀಕ್ಷೆ | ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಪರವಾದ ಅಲೆ… ? |

March 31, 2023
2:32 PM

ಚುನಾವಣೆ ಘೋಷಣೆಯ ಹೊತ್ತಿಗೆ ಹಲವು ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಇದೀಗ ಸ್ಮಾಲ್‌ ಬಾಕ್ಸ್‌ ಇಂಡಿಯಾ ಎನ್ನುವ ಸ್ವತಂತ್ರ ಸಂಸ್ಥೆಯೊಂದು ಚುನಾವಣಾ ಸಮೀಕ್ಷೆ ನಡೆಸಿದ್ದು ಈ ಬಾರಿ ಕಾಂಗ್ರೆಸ್‌ 118-129 ಸ್ಥಾನಗಳನ್ನು  ಪಡೆಯಲಿದೆ ಎಂದು ಹೇಳಿದೆ. ಬಿಜೆಪಿ 65-7- , ಜೆಡಿಎಸ್‌ 28-32 ಹಾಗೂ ಇತರರು 1-3 ಸ್ಥಾನಗಳನ್ನು  ಗೆಲ್ಲಬಹುದು  ಎಂದು ಸ್ಮಾಲ್‌ ಬಾಕ್ಸ್‌ ಹೇಳಿದೆ.

ಸ್ಮಾಲ್ ಬಾಕ್ಸ್ ಇಂಡಿಯಾ ಸ್ವತಂತ್ರ ಸಂಸ್ಥೆಯಾಗಿದ್ದು ತನ್ನದು ಲಾಭರಹಿತ ಸಂಸ್ಥೆ ಎಂದು ಟ್ವಿಟ್ಟರ್‌ ನಲ್ಲಿ  ಹೇಳಿದೆ. ಈಗಾಗಲೇ, ಗುಜರಾತ್ ನಲ್ಲಿ ಬಿಜೆಪಿ, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಮೀಕ್ಷೆಯಲ್ಲೇ ಹೇಳಿದ್ದೇವೆ ಎಂದು ಈ ಸಂಸ್ಥೆ ತನ್ನ ಟ್ವಿಟ್ಟರ್ ಮೂಲಕ ಹೇಳಿದೆ. ಇದೀಗ ಕರ್ನಾಟಕದಲ್ಲೂ ಸಮೀಕ್ಷೆ ನಡೆಸಿದ್ದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನಗಳು ಲಭಿಸಲಿವೆ. ಬಹುಮತ ಮೂಲಕ ಕಾಂಗ್ರೆಸ್‌ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದೆ.ಕಾಂಗ್ರೆಸ್‌ 118-129 ಸ್ಥಾನಗಳನ್ನು  ಪಡೆಯಲಿದೆ ಎಂದು ಹೇಳಿದೆ. ಬಿಜೆಪಿ 65-7- , ಜೆಡಿಎಸ್‌ 28-32 ಹಾಗೂ ಇತರರು 1-3 ಸ್ಥಾನಗಳನ್ನು  ಗೆಲ್ಲಬಹುದು  ಎಂದು ಸ್ಮಾಲ್‌ ಬಾಕ್ಸ್‌ ಹೇಳಿದೆ.

ಈ ಬಾರಿ ಕಾಂಗ್ರೆಸ್‌ 41%  ಮತಗಳನ್ನು  ಹಾಗೂ ಬಿಜೆಪಿ  36%, ಜೆಡಿಎಸ್‌ 18% ಹಾಗೂ ಇತರರು 5% ಮತ ಪಡೆಯುವರು ಎಂದು ಈ ಸಮೀಕ್ಷೆ ಹೇಳಿದೆ.

ಈಚೆಗೆ ನಡೆದ ಎಬಿಪಿ-ಸಿ ವೋಟರ್ ಸಮೀಕ್ಷೆಯಲ್ಲಿ ಕೂಡಾ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರೆ ಜೀ ನ್ಯೂಸ್ ಮಾತ್ರಾ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ
May 4, 2026
2:57 PM
by: ದ ರೂರಲ್ ಮಿರರ್.ಕಾಂ
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು
May 4, 2026
7:58 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!
May 4, 2026
7:35 AM
by: ಮಿರರ್‌ ಡೆಸ್ಕ್
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!
May 3, 2026
10:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror