ರಾಜ್ಯದ ಅಡಿಕೆ ಬೆಳೆಯಲ್ಲಿ ಕಂಡು ಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣಾ ಚಟುವಟಿಕೆಗಳನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು…!, ಪುನಃ ಸ್ಮಾರ್ಟ್ ಸೆಂಟೆನ್ಸ್ ಹಾಕಿ ಚೆಂಡನ್ನು ಕೇಂದ್ರದ ಅಂಗಳಕ್ಕೆ ಒದೆಯಲಾಗಿದೆ!. ಮಲೆನಾಡಿನ ಕೃಷಿಕ ಅರವಿಂದ್ ಸಿಗದಾಳ್, ಮೇಲುಕೊಪ್ಪ ಅವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದ ತುಂಬಾ ಕ್ರಿಟಿಕಲ್ ಪರಿಸ್ಥಿತಿಯಲ್ಲಿ “ಆಸ್ಪತ್ರೆಯಲ್ಲಿ ಏನೂ ಮಾಡಕಾಗಲ್ಲ, ಡಿಸ್ಚಾರ್ಜ್ ಮಾಡಿ ಮನೆಗೆ ಕರ್ಕೊಂಡು ಹೋಗಿ. ಇನ್ನೆಷ್ಟು ದಿನ ಇರ್ತಾರೆ ಅಂತ ಹೇಳೋಕಾಗಲ್ಲ. ದೇವರ ಮೇಲೆ ಬಾರ ಹಾಕಿ ಪ್ರಾರ್ಥನೆ ಮಾಡಿ.” ಅಂತಾರಲ್ಲ ಹಾಗೆ!!!.
ಸ್ಟೇಟ್ ಡಾಕ್ಟರ್, ಸೆಂಟ್ರಲ್ ಸರ್ಜನ್ ಇಬ್ಬರೂ ಅಡಿಕೆ ಎಲೆ ಚುಕ್ಕಿ, ಹಳದಿ ರೋಗದ ಬಗ್ಗೆ ಪರೋಕ್ಷವಾಗಿ ಅಂತಿಮ ತೀರ್ಮಾನ ಹೇಳಿಯಾಗಿದೆ. ಮಲೆನಾಡು-ಕರಾವಳಿಗಳಲ್ಲಿ ರೋಗಿಷ್ಟ ಅಡಿಕೆಯ ಮಾನ-ಪ್ರಾಣ ಎರಡೂ ಕೊನೇ ಉಸಿರನ್ನು ಎಣಿಸುತ್ತಿವೆ. ಬಅಡಿಕೆ ತೋಟಗಳ ಒಂದೆರಡು ಫೋಟೋ ತೆಗೆದು ಇಟ್ಕೊಂಡಿರಿ..!. ಸಂಬಂಧಿಕರಿಗೆಲ್ಲ ವಿಷಯ ತಿಳಿಸಿರಿ!.
ಹೀಗೆ ಆಗಿದೆ ಮಲೆನಾಡು ಹಾಗೂ ಕರಾವಳಿಯ ಅಡಿಕೆ ಬೆಳೆಗಾರ ಸ್ಥಿತಿ. ಅಡಿಕೆ ಬೆಳೆಗಾರರಿಗೆ ರಾಜ್ಯದಿಂದಲೂ, ಕೇಂದ್ರದಿಂದಲೂ ಸೂಕ್ತವಾದ ನ್ಯಾಯ ದೊರೆಯುತ್ತಿಲ್ಲ.
ಮಿತಾಹಾರ, ಯಜ್ಞಸ್ವರೂಪ ಭೋಜನ ಹಾಗೂ ಆಹಾರದ ಶಾಸ್ತ್ರೋಕ್ತ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ…
ಎಥೆನಾಲ್ ನೀತಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದ್ದು, ದೇಶದ ಇಂಧನ ಭದ್ರತೆಯೂ ಬಲಗೊಳ್ಳಲಿದೆ…
ಮಾನವ–ವನ್ಯಜೀವಿ ಸಂಘರ್ಷ ತಡೆ ಕುರಿತು ನಡೆದ ಸಂಸದೀಯ ಸಭೆಯಲ್ಲಿ ಕರ್ನಾಟಕದ AI ಆಧಾರಿತ…
ಅಕ್ರಮ ಅಡಿಕೆ ಆಮದು, ಜಿಎಸ್ಟಿ ತಾರತಮ್ಯ ಹಾಗೂ ಸಹಕಾರ ಸಂಘಗಳ ಸಮಸ್ಯೆಗಳ ಕುರಿತು…
ಆಗಸ್ಟ್ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್…
ಮ್ಯಾನ್ಮಾರ್ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…