ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಜೀವನದ ಹಾದಿಯಲ್ಲಿ, ಹುಟ್ಟು-ಸಾವು ಮದ್ಯದಲ್ಲಿ ಚರಿತ್ರೆ ಸೃಷ್ಟಿಸುವ ಅವಕಾಶಗಳಿವೆ…
ಪ್ರತಿಯೊಂದು ಹೆಜ್ಜೆಯಲ್ಲೂ ಸೋಲು ಒಂದು ಪಾಠವಾಗಿ, ಗೆಲುವು ಪ್ರತಿಫಲವಾಗಿ ದೊರೆಯುವುದು ಸಾಧನೆಯ ಹಾದಿಯಲ್ಲಿ…
ಸೋಲಿಗೆಂದು ಹೆದರದೆ-ಬೆದರದೆ,
ನೋವಿಗೆಂದು ಜಗ್ಗದೆ-ಕುಗ್ಗದೆ ಸಾಗುವುದೇ ಜೀವನ,
ಮುಂದೆ ಸಾಗುವುದೇ ಜೀವನ…
ರಾತ್ರಿ ಕಾಣುವ ಕನಸೆಲ್ಲಾ ಎಂದಿಗೂ ನನಸಾಗದು…
ಪ್ರಯತ್ನವು ಇಲ್ಲದೇ ಫಲವು ಎಂದಿಗೂ ದೊರೆಯದು…
ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಹೇಳಲು ಆಗದ ಕಥೆಗಳು, ಹೇಳಿಯೂ ತೀರದ ಕಥೆಗಳು ನಮ್ಮ-ನಿಮ್ಮ ಬದುಕಿನಲ್ಲಿ ನೂರಾರು…
ನಮ್ಮ ಬದುಕಿನ ಕಥೆಗಳೆಲ್ಲಾ ಮುಂದೆ ಒಂದು ಚರಿತ್ರೆಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿ ಬದುಕುವುದೇ ಜೀವನ,
ನಾವು ಸತ್ತ ಮೇಲೂ ಬದುಕುವುದೇ ಜೀವನ…
# ಉಲ್ಲಾಸ್ ಕಜ್ಜೋಡಿ
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಮುಂಗಾರು ದುರ್ಬಲಗೊಂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ಚಟುವಟಿಕೆಗಳು ಉಂಟಾದರೆ ಮಾತ್ರ ಮುಂಗಾರು ಸ್ವಲ್ಪ…
ರಾಜ್ಯದಲ್ಲಿ ಕೊರೋನ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಏನೂ ಇಲ್ಲ ಎಂದು ಆರೋಗ್ಯ ಸಚಿವ…
ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮಳೆಗೆ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ…
ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…
2025ರ ಜೂನ್ 7 ರಿಂದ ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಲಿರುವುದು…