ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಜೀವನದ ಹಾದಿಯಲ್ಲಿ, ಹುಟ್ಟು-ಸಾವು ಮದ್ಯದಲ್ಲಿ ಚರಿತ್ರೆ ಸೃಷ್ಟಿಸುವ ಅವಕಾಶಗಳಿವೆ…
ಪ್ರತಿಯೊಂದು ಹೆಜ್ಜೆಯಲ್ಲೂ ಸೋಲು ಒಂದು ಪಾಠವಾಗಿ, ಗೆಲುವು ಪ್ರತಿಫಲವಾಗಿ ದೊರೆಯುವುದು ಸಾಧನೆಯ ಹಾದಿಯಲ್ಲಿ…
ಸೋಲಿಗೆಂದು ಹೆದರದೆ-ಬೆದರದೆ,
ನೋವಿಗೆಂದು ಜಗ್ಗದೆ-ಕುಗ್ಗದೆ ಸಾಗುವುದೇ ಜೀವನ,
ಮುಂದೆ ಸಾಗುವುದೇ ಜೀವನ…
ರಾತ್ರಿ ಕಾಣುವ ಕನಸೆಲ್ಲಾ ಎಂದಿಗೂ ನನಸಾಗದು…
ಪ್ರಯತ್ನವು ಇಲ್ಲದೇ ಫಲವು ಎಂದಿಗೂ ದೊರೆಯದು…
ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಹೇಳಲು ಆಗದ ಕಥೆಗಳು, ಹೇಳಿಯೂ ತೀರದ ಕಥೆಗಳು ನಮ್ಮ-ನಿಮ್ಮ ಬದುಕಿನಲ್ಲಿ ನೂರಾರು…
ನಮ್ಮ ಬದುಕಿನ ಕಥೆಗಳೆಲ್ಲಾ ಮುಂದೆ ಒಂದು ಚರಿತ್ರೆಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿ ಬದುಕುವುದೇ ಜೀವನ,
ನಾವು ಸತ್ತ ಮೇಲೂ ಬದುಕುವುದೇ ಜೀವನ…
# ಉಲ್ಲಾಸ್ ಕಜ್ಜೋಡಿ
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…