ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಜೀವನದ ಹಾದಿಯಲ್ಲಿ, ಹುಟ್ಟು-ಸಾವು ಮದ್ಯದಲ್ಲಿ ಚರಿತ್ರೆ ಸೃಷ್ಟಿಸುವ ಅವಕಾಶಗಳಿವೆ…
ಪ್ರತಿಯೊಂದು ಹೆಜ್ಜೆಯಲ್ಲೂ ಸೋಲು ಒಂದು ಪಾಠವಾಗಿ, ಗೆಲುವು ಪ್ರತಿಫಲವಾಗಿ ದೊರೆಯುವುದು ಸಾಧನೆಯ ಹಾದಿಯಲ್ಲಿ…
ಸೋಲಿಗೆಂದು ಹೆದರದೆ-ಬೆದರದೆ,
ನೋವಿಗೆಂದು ಜಗ್ಗದೆ-ಕುಗ್ಗದೆ ಸಾಗುವುದೇ ಜೀವನ,
ಮುಂದೆ ಸಾಗುವುದೇ ಜೀವನ…
ರಾತ್ರಿ ಕಾಣುವ ಕನಸೆಲ್ಲಾ ಎಂದಿಗೂ ನನಸಾಗದು…
ಪ್ರಯತ್ನವು ಇಲ್ಲದೇ ಫಲವು ಎಂದಿಗೂ ದೊರೆಯದು…
ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಹೇಳಲು ಆಗದ ಕಥೆಗಳು, ಹೇಳಿಯೂ ತೀರದ ಕಥೆಗಳು ನಮ್ಮ-ನಿಮ್ಮ ಬದುಕಿನಲ್ಲಿ ನೂರಾರು…
ನಮ್ಮ ಬದುಕಿನ ಕಥೆಗಳೆಲ್ಲಾ ಮುಂದೆ ಒಂದು ಚರಿತ್ರೆಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿ ಬದುಕುವುದೇ ಜೀವನ,
ನಾವು ಸತ್ತ ಮೇಲೂ ಬದುಕುವುದೇ ಜೀವನ…
# ಉಲ್ಲಾಸ್ ಕಜ್ಜೋಡಿ
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…
ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…
ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…