ಮನ್ಸ್ ನ ಕದ್ದಂವ,ಕನ್ಸ್ ಲಿ ಬಂದಂವ
ತಣ್ಣಂಗೆ ಬೀಸುವ ಗಾಳಿಲಿ
ನಂಗೆ ಒಂದು ಪತ್ರ ಕಳ್ಸಿದಂವ
ಅಂವ ನನ್ನಂವ…..
ಕಣ್ಣ್ ನ ರೆಪ್ಪೆಲಿ ಪೆನ್ಸಿಲ್ ಹಿಡ್ದ್
ಮನ್ಸ್ ನ ಕನ್ನಡಿಲಿ ಚಿತ್ರ ಬುಡ್ಸಿ
ನಿದ್ದೆ ಕದ್ದ್ ಓಡ್ದಂವ
ಅಂವ ನನ್ನಂವ….
ನನ್ನ ಕನ್ಸ್ ಗಳಿಗೆ ಗರಿ ಕಟ್ಟಿ
ನನ್ನ ಹೆಜ್ಜೆ ಒಟ್ಟಿಗೆ ಹೆಜ್ಜೆ ಹಾಕಿ
ಪ್ರೀತಿನ ದೋಣಿಲಿ ನನ್ನ ಸುತ್ತಾಡ್ಸಿದಂವ
ಅಂವ ನನ್ನಂವ….
ಹಣೆಗೆ ಕುಂಕುಮ ಬೊಟ್ಟು ಇಸಿ
ಕಿನೆ ಬೆರ್ಳ್ ಹಿಡ್ದ್ ,ಏಳ್ ಹೆಜ್ಜೆ ನಡ್ದ್
ನನ್ನ ಬದ್ಕಿಗೆ ಬೆಳಕಾದಂವ
ಅಂವ ನನ್ನಂವ….
# ಅಪೂರ್ವಚೇತನ್ ಪೆರಂದೋಡಿ
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…