ಅನುಕ್ರಮ

ಕವನ | ಬದುಕು ಮತ್ತು ಸಾವು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹುಟ್ಟಿದಾಗ ದೃಷ್ಟಿ ಕಳೆದುಕೊಂಡಾತ
ಜಗತ್ತನ್ನು ಕಾಣಲಾಗಲಿಲ್ಲವೆಂದು,
ಬದುಕನ್ನು ಕಳೆದುಕೊಂಡಿದ್ದರೆ
ಜಗದಲ್ಲಿ ಕುರುಡರೇ
ಕಾಣಸಿಗುತ್ತಿರಲಿಲ್ಲ….!

Advertisement
Advertisement

ಕಿವಿಗಳಿಲ್ಲದವರು ತನ್ನವರ
ನುಡಿಗಳ ಕೇಳಿಸಿಕೊಳ್ಳಲಾಗುತ್ತಿಲ್ಲವೆಂದು
ಬದುಕಿಗೆ ಅಂತ್ಯವಿಡುತ್ತಿದ್ದರೆ
ಇಂದು ಕಿವುಡರೇ
ಕಾಣ ಸಿಗುತ್ತಿರಲಿಲ್ಲ…..!

ಪ್ರೀತಿ ಸಿಗದೇ ಇದ್ದವರೆಲ್ಲಾ,
ತಮ್ಮ ಬದುಕನ್ನು
ಅಂತ್ಯಗಾಣಿಸುತ್ತಿದ್ದರೆ,
ಅನಾಥವೆಂಬ ಪದಕೆ
ಅರ್ಥವೇ ಇರುತ್ತಿರಲಿಲ್ಲ…!

ಕಷ್ಟಕ್ಕೆ ಹೆದರಿ ಎಲ್ಲರೂ
ಬದುಕನ್ನು ಕಳೆದುಕೊಂಡಿದ್ದರೆ
ಬದುಕಿನ ಸುಂದರ ಕ್ಷಣಗಳ
ಯಾರು ಅನುಭವಿಸುತ್ತಿರಲಿಲ್ಲ..!

ಕಷ್ಟಗಳ ಬದುಕಿನ ದಾರಿಯಾಗಿಸಬೇಕು
ನೋವುಗಳನ್ನೇ ಬದುಕಿನ ಬೆಳಕಾಗಿಸಬೇಕು
ಬದುಕಿ ಏನನ್ನೂ ಸಾಧಿಸಲಾಗಲಿಲ್ಲವೆಂದ ಮೇಲೆ,
ಸತ್ತು ಸಾಧಿಸುವುದೇನಿದೆ….?

Advertisement

#ಅಪೂರ್ವ ಕೊಲ್ಯ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

4 hours ago

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…

9 hours ago

ಗುರು ಆದಿತ್ಯ ರಾಜಯೋಗ | ಯಾರಿಗೆಲ್ಲಾ ಕುಬೇರ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

17 hours ago

ಕೃಷಿ ಸಂಸ್ಕರಣಾ ಘಟಕ | 15 ಲಕ್ಷ ರೂಪಾಯಿ ಸಹಾಯಧನ ನೀಡಲು ಸರ್ಕಾರ  ನಿರ್ಧಾರ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…

17 hours ago