ಕವನ | ಬದುಕು ಮತ್ತು ಸಾವು

November 14, 2021
11:30 AM

ಹುಟ್ಟಿದಾಗ ದೃಷ್ಟಿ ಕಳೆದುಕೊಂಡಾತ
ಜಗತ್ತನ್ನು ಕಾಣಲಾಗಲಿಲ್ಲವೆಂದು,
ಬದುಕನ್ನು ಕಳೆದುಕೊಂಡಿದ್ದರೆ
ಜಗದಲ್ಲಿ ಕುರುಡರೇ
ಕಾಣಸಿಗುತ್ತಿರಲಿಲ್ಲ….!

ಕಿವಿಗಳಿಲ್ಲದವರು ತನ್ನವರ
ನುಡಿಗಳ ಕೇಳಿಸಿಕೊಳ್ಳಲಾಗುತ್ತಿಲ್ಲವೆಂದು
ಬದುಕಿಗೆ ಅಂತ್ಯವಿಡುತ್ತಿದ್ದರೆ
ಇಂದು ಕಿವುಡರೇ
ಕಾಣ ಸಿಗುತ್ತಿರಲಿಲ್ಲ…..!

ಪ್ರೀತಿ ಸಿಗದೇ ಇದ್ದವರೆಲ್ಲಾ,
ತಮ್ಮ ಬದುಕನ್ನು
ಅಂತ್ಯಗಾಣಿಸುತ್ತಿದ್ದರೆ,
ಅನಾಥವೆಂಬ ಪದಕೆ
ಅರ್ಥವೇ ಇರುತ್ತಿರಲಿಲ್ಲ…!

ಕಷ್ಟಕ್ಕೆ ಹೆದರಿ ಎಲ್ಲರೂ
ಬದುಕನ್ನು ಕಳೆದುಕೊಂಡಿದ್ದರೆ
ಬದುಕಿನ ಸುಂದರ ಕ್ಷಣಗಳ
ಯಾರು ಅನುಭವಿಸುತ್ತಿರಲಿಲ್ಲ..!

ಕಷ್ಟಗಳ ಬದುಕಿನ ದಾರಿಯಾಗಿಸಬೇಕು
ನೋವುಗಳನ್ನೇ ಬದುಕಿನ ಬೆಳಕಾಗಿಸಬೇಕು
ಬದುಕಿ ಏನನ್ನೂ ಸಾಧಿಸಲಾಗಲಿಲ್ಲವೆಂದ ಮೇಲೆ,
ಸತ್ತು ಸಾಧಿಸುವುದೇನಿದೆ….?

#ಅಪೂರ್ವ ಕೊಲ್ಯ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror