ದೂರದ ದೇಶಲಿ ದೊಡ್ಡ ಹುದ್ದೆಲಿ
ಇರುವ ಮಂಙನ ನೆನ್ಸಿಕಂಡ್
ಹಳ್ಳಿಲಿ ಇರುವ ಅವ್ವ ಕಣ್ಣೀರ್ ಹಾಕಿದೆ
ಒಂಬತ್ತ್ ತಿಂಗ ಹೊತ್ತ್ ಹೆತ್ತ್
ಪೊರ್ಲ್ ಲಿ ಸಾಂಕಿ , ವಿದ್ಯೆ ಕಲ್ಸಿ
ವಿದೇಶಕ್ಕೆ ಕಳ್ಸಿದ ಮಂಙನ ಒಮ್ಮೆ ನೋಡೋಕು
ಪುಳ್ಳಿಕಳ ಕೈಲಿ ಹಿಡ್ದ್ ಆಡ್ಸೋಕು
ಅವ್ವನ ಆಸೆಗೆ ಮಿತಿನೇ ಇಲ್ಲೆ
ಎಸಿ ರೂಮ್ ಲಿ ಈಸಿ ಚೇರ್ ಲಿ
ಕುದ್ದ ಮಂಙಂಗೆ ಹೆತ್ತವ್ವನ ನೆಂಪಿಲ್ಲೆ
ಮೊಬೈಲ್ ಲಿ ಮುಳ್ಗಿ ಮೈಮರ್ತ ಪುಳ್ಳಿಕಳಿಗೆ
ಹಳ್ಳಿ ಅಜ್ಜಿನ ಹಳ್ಳಿ ಕತೆಗಳ ಹಂಗ್ ಬೇಕಿಲ್ಲೆ
ಸೊಸೆಗಂತೂ ಅತ್ತೆನ ನೋಡಿಕೆ ಮೊನ್ಸ್ ಇಲ್ಲೆ
ಹಳ್ಳಿ ಮನೆಲಿ ಸೋರುವ ಮಾಡ್ ನಡಿಲಿ
ಕುದ್ದ ಅವ್ವಂಗೆ ಮಂಙನ ಬುಟ್ಟ್ ಬೇರೆ ದಿಕ್ಕಿಲ್ಲೆ
ಎಲ್ಲರ ಎದ್ರ್ ಮಂಙನ ಗುಣಗಾನ ಮಾಡುವ ಅವ್ವ
ಉಂಬ ಬಟ್ಲ್ ಎದ್ರ್ ಮಾತ್ರ ಕಣ್ಣೀರ್ ಸುರ್ಸಿದೆ
ಮಂಙನ ಮಾತ್ ಗಾಗಿ ಕಾದ್ ಕಾದ್ ಮಲ್ಗಿದೆ
ಕಣ್ಣಿಗೆ ನಿದ್ದೆ ಹತ್ತುದ್ಲೆ, ಮೊನ್ಸ್ ಲಿ ಆಸೆ ಬುಡ್ದುಲೆ
ಮಂಙನ ಪೋನ್ ಇಂದ್ ಬಂದದೆ,ಈಗ ಬಂದದೆ
ಅವ್ವನ ಕಣ್ಣೀರ್ ನೋಡಿ ಬೇಜರಾಗಿ
ಮನೆಲಿರುವ ಬೊಗ್ಗ ನಾಯಿ ಕುಂಯಿ ಕುಂಯಿ ಹೇಳಿ
ಮೋರೆ ನೆಕ್ಕಿದೆ, ಅದರ ಬಾಸೆಲಿ ಸಮ್ದಾನಾ ಮಾಡ್ದೆ
ಅಪ್ರೂಪಕ್ಕೊಮ್ಮೆ ಮಂಙನ ಫೋನ್ ಬಾಕನ
ಅವ್ವ ಹಿಗ್ಗಿದೆ. ಕುಸಿಲಿ ಮತ್ತೆ ಕಣ್ಣೀರ್ ಹಾಕಿದೆ
ಹಕ್ಕಲೆ ಇರುವ ನಾಯಿ ಒಟ್ಟಿಗೆ ದುಃಖ ಹೇಳಿಕಂದೆ
ದೇವ್ರೆ ನನ್ನೊಮ್ಮೆ ಕರ್ಕಂತೇಳಿ ಬೇಡಿ ಮಲ್ಗಿದೆ
ಅವ್ವನಕ್ಕಲೆ ಯಾರ್ ಬಾಕೆ ಬೊತ್ತ್ಂತೇಳಿ ನಾಯಿ ಕಾದ್ ಕುದ್ದದೆ.
# ಅಪೂರ್ವ ಚೇತನ್ ಪೆರಂದೋಡಿ
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…