Advertisement
Share

ಕಾರಣವೇ ಇಲ್ಲದೆ ಮನದಲ್ಲಿ
ಮೌನದ ಮೋಡ ಕವಿದಿದೆ.
ಹೆಜ್ಜೆಯ ಜೊತೆ ಗೆಜ್ಜೆಯ ಸಪ್ಪಳವಿದ್ದರೂ
ನಡಿಗೆಯಲಿ ಏಕಾಂಗಿತನದ ನೆರಳಿದೆ.
ಮನದ ಮೋಡಗಳ ನಡುವೆ ಅದೇಕೋ ಗುದ್ದಾಟ..
ಯಾಕೆ…..ಈ ಸಂಘರ್ಷ…?

ಹನಿಯಾಗಿ ಹರಿಯುತ್ತಿಲ್ಲ.. ಅಲ್ಲೇ ಬತ್ತಿದ ಭಾವ..
ಏನೀ … ತೊಳಲಾಟ…?
ಹೊತ್ತು ಸರಿದಷ್ಟು ಗಾಢ ಕತ್ತಲು ಆವರಿಸುತ್ತಿದೆ…
ಮೌನ ರಕ್ಕಸತನದಿ ಮೆರೆಯುತಿದೆ
ಮಾತು ಹೊರಬರಲು ಅಂಜುತಿದೆ
ಮೊಗದ ಕನ್ನಡಿಯಲಿ…..
ಪ್ರಶ್ನೆಗಳದೇ ಸುರಿಮಳೆ
ಎಲ್ಲಿದೆ …..ಉತ್ತರ…?

ಉತ್ತರದ ಹುಡುಕಾಟದಲ್ಲಿ ಮತ್ತದೇ ಪ್ರಶ್ನೆ
ಕಣ್ಣ ರೆಪ್ಪೆಗಳೂ ಮುಚ್ಚದೇ ಕಾಯುತಿದೆ
ತುಟಿಯಂಚಿನಲಿ ಮಾತು ಹೊರಬರಲು ಯತ್ನಿಸುತಿದೆ
ಮನಸ್ಸು ಮೌನದ ಬೇಗೆಯಿಂದ
ಬೇರ್ಪಡಲು ತವಕಿಸುತಿದೆ…
ಮೌನದ ರಕ್ಕಸ ನರ್ತನಕೆ
ಮನಸ್ಸು ಶರಣಾಗಿದೆ…
ಸೋತು ಬಸವಳಿದಿದೆ…..

ಆದರೂ ಅದೆಲ್ಲೋ ಮೂಲೆಯಲಿ
ನಾಳಿನ ಬೆಳಕು ಕಾಣುವ
ಭರವಸೆಯ ಕಿಡಿಯು ಗೋಚರಿಸುತಿದೆ

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

8 hours ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago

ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ…

2 days ago

ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’

ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…

2 days ago

ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!

ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…

2 days ago

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

3 days ago