Advertisement
Share

ಕಾರಣವೇ ಇಲ್ಲದೆ ಮನದಲ್ಲಿ
ಮೌನದ ಮೋಡ ಕವಿದಿದೆ.
ಹೆಜ್ಜೆಯ ಜೊತೆ ಗೆಜ್ಜೆಯ ಸಪ್ಪಳವಿದ್ದರೂ
ನಡಿಗೆಯಲಿ ಏಕಾಂಗಿತನದ ನೆರಳಿದೆ.
ಮನದ ಮೋಡಗಳ ನಡುವೆ ಅದೇಕೋ ಗುದ್ದಾಟ..
ಯಾಕೆ…..ಈ ಸಂಘರ್ಷ…?

ಹನಿಯಾಗಿ ಹರಿಯುತ್ತಿಲ್ಲ.. ಅಲ್ಲೇ ಬತ್ತಿದ ಭಾವ..
ಏನೀ … ತೊಳಲಾಟ…?
ಹೊತ್ತು ಸರಿದಷ್ಟು ಗಾಢ ಕತ್ತಲು ಆವರಿಸುತ್ತಿದೆ…
ಮೌನ ರಕ್ಕಸತನದಿ ಮೆರೆಯುತಿದೆ
ಮಾತು ಹೊರಬರಲು ಅಂಜುತಿದೆ
ಮೊಗದ ಕನ್ನಡಿಯಲಿ…..
ಪ್ರಶ್ನೆಗಳದೇ ಸುರಿಮಳೆ
ಎಲ್ಲಿದೆ …..ಉತ್ತರ…?

ಉತ್ತರದ ಹುಡುಕಾಟದಲ್ಲಿ ಮತ್ತದೇ ಪ್ರಶ್ನೆ
ಕಣ್ಣ ರೆಪ್ಪೆಗಳೂ ಮುಚ್ಚದೇ ಕಾಯುತಿದೆ
ತುಟಿಯಂಚಿನಲಿ ಮಾತು ಹೊರಬರಲು ಯತ್ನಿಸುತಿದೆ
ಮನಸ್ಸು ಮೌನದ ಬೇಗೆಯಿಂದ
ಬೇರ್ಪಡಲು ತವಕಿಸುತಿದೆ…
ಮೌನದ ರಕ್ಕಸ ನರ್ತನಕೆ
ಮನಸ್ಸು ಶರಣಾಗಿದೆ…
ಸೋತು ಬಸವಳಿದಿದೆ…..

ಆದರೂ ಅದೆಲ್ಲೋ ಮೂಲೆಯಲಿ
ನಾಳಿನ ಬೆಳಕು ಕಾಣುವ
ಭರವಸೆಯ ಕಿಡಿಯು ಗೋಚರಿಸುತಿದೆ

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

9 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

10 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

10 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

13 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 day ago