ಬೀದಿಯ ಕಸ – ಕಾರುವುದು ವಿಷ

September 29, 2020
8:56 PM
ಕಸವನು ಸುರಿವರು ಬೀದಿಯ ಬದಿಯಲಿ
ಸ್ವಚ್ಛತೆ ಎಲ್ಲಿದೆ ಹೇಳಮ್ಮ
ತುಚ್ಛ ಮನುಜರು ಹಾದಿಯ ಬಿಡುವರೆ
ಹುಚ್ಚರು ಇವರು ತಿಳಿಯಮ್ಮ ||
ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು
ಕೆಟ್ಟ ವಾಸನೆ ಹಬ್ಬುತಿದೆ
ರೋಗದ ಮಾರಿಯು ಕಾಯುತ ಕೂರಲು
ಪಕ್ಕದ ಜನರನು ಕಾಡುತಿದೆ ||
ನಿತ್ಯದ ಬದುಕಲಿ ನರಕದ ದರ್ಶನ
ಸಹಿಸಲಸಾಧ್ಯದ ವಾಸನೆಯು
ನಿಷ್ಠೆಯ ಪಥದಲಿ ಸಾಗಿರಿ ಮನುಜರೆ
ಮಾಡಲೇ ಬೇಡಿರಿ ಮೋಸವನು ||
ನಾಳಿನ ಬಾಳಿಗೆ ಕೊಳ್ಳಿಯ ಇಡುವರು
ಮಳ್ಳಿಯ ಹಾಗೆ ನಡೆಯುತಲಿ
ಬಾಳಿನ ಮೂಲಕೆ ಕುತ್ತನು ತರುವರು
ಮುಳ್ಳಿನ ಕೂಪಕೆ ಬೀಳುತಲಿ ||
ನಮ್ಮನೆ ಕಸವನು ತಿಪ್ಪೆಗೆ ಎಸೆಯದೆ
ಒಳ್ಳೆಯ ಗೊಬ್ಬರ ಮಾಡೋಣ
ಕಸದಿಂದ ರಸವನು ತಪ್ಪದೆ ಗಳಿಸುತ
ಸ್ವಸ್ಥತೆಯನ್ನು ಪಡೆಯೋಣ  ||
ಪರಿಸರ ಕಾಳಜಿ ನಮ್ಮಲಿ ಬೆಳೆಯಲಿ
ಸ್ವಚ್ಛ ಭಾರತ ತೋರೋಣ
ಮುಂದಿನ ಜನರಿಗೆ ಬಳುಬಳಿಯಾಗಿಸಿ
ಭೂತಾಯಿಯ ಮಡಿಲಲಿ ನಲಿಯೋಣ ||
#ರೂಪಾಪ್ರಸಾದ ಕೋಡಿಂಬಳ

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?
February 24, 2025
9:25 PM
by: ರಮೇಶ್‌ ದೇಲಂಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ
ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?
February 5, 2025
6:57 AM
by: ರಮೇಶ್‌ ದೇಲಂಪಾಡಿ
ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?
February 2, 2025
1:28 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror