Advertisement
Opinion

ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ | ಕಿಡ್ನಿಯ ಸಮಸ್ಯೆಗಳು ಮತ್ತು ಪರಿಹಾರ

Share

ಮೂತ್ರ ಪಿಂಡಗಳು ದೇಹದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡ ಕಾಪಾಡಿಕೊಳ್ಳುತ್ತವೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ. ಮೂತ್ರಪಿಂಡದಲ್ಲಿ ಉಂಟಾಗುವ ಸಮಸ್ಯೆಗಳು ಈ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಮೂತ್ರಪಿಂಡದ ತೊಂದರೆಗಳು ನಮ್ಮ ದೇಶದಲ್ಲಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.

ಈ ಕಾಯಿಲೆಗೆ ವಿವಿಧ ಅಂಶಗಳು ಕಾರಣವಾಗಿವೆ ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅನಾರೋಗ್ಯಕರ ಜೀವನ ಶೈಲಿ. ಈ ಕಿಡ್ನಿ ಸಮಸ್ಯೆಗಳನ್ನು ಸರಿಯಾಗಿ ಚಿಕಿತ್ಸೆ ನೀಡದೆ ಇದ್ದಲ್ಲಿ ಮೂತ್ರಪಿಂಡ ಅಂತಿಮವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. kidney failure, chronic kidney diseases (CKD ) Nephrotic syndrom, polycystic kidney Diseases ಇತ್ಯಾದಿ ಮೂತ್ರಪಿಂಡ ರೋಗಗಳು ಉಂಟಾಗಬಹುದು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ… ಸಾಮಾನ್ಯವಾಗಿ ಇದು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಇರುವುದರಿಂದ ಕಂಡು ಬರುತ್ತದೆ ದೀರ್ಘಕಾಲದವರೆಗೆ ಈ ಅಧಿಕ ರಕ್ತದ ಒತ್ತಡ (BP)ಹಾಗೂ ಹೆಚ್ಚಿನ ಸಕ್ಕರೆಯ ಮಟ್ಟವು(Diabetis) ಮೂತ್ರಪಿಂಡದ ರಕ್ತನಾಳಗಳನ್ನು ಹಾನಿಗೊಳಿಸುವುದು ಮತ್ತು ಮೂತ್ರಪಿಂಡದ ಕಾರ್ಯಗಳನ್ನು ಕ್ಷೀಣಿಸುತ್ತವೆ. ಡಯಾಲಿಸಿಸ್ ಜೊತೆಗೆ ಇದನ್ನು ನಿಯಂತ್ರಿಸಬೇಕಾಗುತ್ತದೆ.ರೋಗವು ಕೊನೆ ಹಂತಕ್ಕೆ ತಲುಪಿದಾಗ ಮೂತ್ರಪಿಂಡದ ಕಸಿ ಶಿಫಾರಸು ಮಾಡಲಾಗುತ್ತದೆ (Kidney transplantation )

Acute Renal failure :(ಕಿಡ್ನಿ ವೈಪಲ್ಯ) ತೀವ್ರವಾದ ಮೂತ್ರಪಿಂಡದ ಹಾನಿಯು ಸಾಮಾನ್ಯವಾಗಿ ಗಾಯಗಳು ಅಥವಾ ಅಪಘಾತಗಳಿಂದ ಮೂತ್ರಪಿಂಡಗಳಿಗೆ ನೇರ ಹಾನಿಯಾಗುವುದರಿಂದ ಉಂಟಾಗುತ್ತದೆ.

ಮೂತ್ರಪಿಂಡ ಕಾಯಿಲೆ ಲಕ್ಷಣಗಳು
– ಕಡಿಮೆಯಾದ ಮೂತ್ರ ವಿಸರ್ಜನೆ
– ಕೀಲುಗಳು ಪಾದಗಳು ಮುಖದಲ್ಲಿ ಊತ ಹಾಗೂ ನೋವು
– ಉಸಿರಾಟದ ತೊಂದರೆ
– ಆಯಾಸ, ನಿದ್ರಾಹೀನತೆ
– ಎದೆ ನೋವು ಗೊಂದಲ

ಪರಿಹಾರ 
– ಕಿಡ್ನಿ ವೈಫಲ್ಯದಿಂದ ರಕ್ಷಿಸಲು ಅನೇಕ ಗಿಡಮೂಲಿಕೆಗಳು ಬಳಸುವುದು ಉತ್ತಮ.. ವರುಣ ಗೋಕ್ಷುರ ಪುನರ್ನವ ಶುಂಠಿ ತ್ರಿಫಲ ಅರಶಿನ ಇತ್ಯಾದಿ ಹಾಗೂ ಇವುಗಳಿಂದ ತಯಾರಿಸಿದ ಅನೇಕ ಆಯುರ್ವೇದ ಔಷಧಿಗಳು ಕಿಡ್ನಿಯ ಸಮಸ್ಯೆಯ ಆರಂಭದಲ್ಲಿ ತೆಗೆದುಕೊಳ್ಳುವುದರಿಂದ ಕಿಡ್ನಿಯ ವೈಫಲ್ಯದಿಂದ ರಕ್ಷಿಸಬಹುದು ಇವುಗಳ ನೈಸರ್ಗಿಕ ಗುಣಲಕ್ಷಣಗಳೊಂದಿಗೆ ಮೂತ್ರಪಿಂಡದ ಕಾರ್ಯ ನಿರ್ವಹಣೆ ಸರಿಯಾಗಿ ಮಾಡಲು ಸಹಾಯ ಮಾಡುವುದು
– ಉತ್ತಮ ಆಹಾರ….ತಾಜಾ ತರಕಾರಿ ಹಣ್ಣುಗಳ ಸೇವನೆ, ಶುದ್ಧವಾದ ಹಿತಮಿತವಾದ ನೀರು ಸೇವನೆ, ಗೋಧಿಯ ಹುಲ್ಲು, ದಾಳಿಂಬೆ ಹಾಗೂ – ಲಿಂಬೆಹಣ್ಣಿನ ರಸ ಕಿಡ್ನಿಯ ರಕ್ಷಣೆ ಮಾಡುವಲ್ಲಿ ಸಹಾಯಕಾರಿಯಾಗುತ್ತವೆ.
– ಮಾಂಸಹಾರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವುದರಿಂದ ಸಸ್ಯಾಹಾರ ಸೇವನೆ ಉತ್ತಮ.
– ಆರೋಗ್ಯಕರ ಜೀವನ ಶೈಲಿ ಜೊತೆಗೆ ಮಾನಸಿಕ ಒತ್ತಡ ನಿಗ್ರಹಿಸಲು ಧ್ಯಾನ ಯೋಗ ಪ್ರಾಣಾಯಾಮ ದಿನನಿತ್ಯ ವ್ಯಾಯಾಮ ಮಾಡುವುದರಿಂದ
– ಮೂತ್ರಪಿಂಡದ ರೋಗಗಳನ್ನು ತಡೆಗಟ್ಟಬಹುದು.
ಯಾವುದೇ ಕಿಡ್ನಿಯ ಸಮಸ್ಯೆಯ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ಬರಹ :
ಡಾ.ಜ್ಯೋತಿ ಕೆ, ಲಕ್ಷ್ಮೀ ಕ್ಲಿನಿಕ್ ಮಂಗಳೂರು. 94481 68053
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

6 hours ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

6 hours ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

14 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

16 hours ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

22 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

22 hours ago