ಕ್ರೀಡಾಪಟುಗಳ ಸಾಧನೆ ಅದು ಯಾವತ್ತಿದ್ರೂ ದೇಶದ ಸಾಧನೆ ಎಂದೇ ಪರಿಗಣಿಸಲಾಗುತ್ತದೆ. ಅವರಿಗೆ ವಿಶೇಷ ಸ್ಥಾನ ಮಾನ, ಗೌರವವನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ, ಅಥ್ಲೆಟಿಕ್ಸ್ನಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ಎಂಬುದು ಈಗ ಆಟಗಾರರ ಪ್ರದರ್ಶನದಿಂದ ಗೋಚರಿಸುತ್ತಿದೆ. ಬುಡಪೆಸ್ಟ್ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ, ಡಿಪಿ ಮನು, ಕಿಶೋರ್ ಜೆನಾ ಫೈನಲ್ಗೇರಿದ್ದು, ಭಾರತ ಹೊಸ ಇತಿಹಾಸ ಬರೆಯುವ ಹೊಸ್ತಿಲಿನಲ್ಲಿದೆ. ಇದೀಗ 4×400 ಮೀಟರ್ಸ್ ರಿಲೇ ಓಟದಲ್ಲಿ ಮೊಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮೊಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ ಅವರ ರಿಲೇ ತಂಡವು ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿ ದಾಖಲೆ ಬರೆದಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಅರ್ಹತಾ ಸುತ್ತಿನಲ್ಲಿ ಭಾರತದ ಪುರುಷರ ತಂಡವು 4×400 ಮೀಟರ್ ಓಟವನ್ನು 2.59.05 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿತು. ಅತಿ ಕಡಿಮೆ ಸಮಯದಲ್ಲಿ ಈ ಓಟವನ್ನು ಪೂರ್ಣಗೊಳಿಸಿದ ಭಾರತ ರಿಲೇ ತಂಡ, ಏಷ್ಯನ್ ದಾಖಲೆಯನ್ನು ಸಹ ಮುರಿಯಿತು. ಕಳೆದ ವರ್ಷ ನಡೆದ ಈ ಅಥ್ಲೆಟಿಕ್ಸ್ನಲ್ಲಿ 2.59.51 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಜಪಾನ್ ರಿಲೇ ತಂಡ ಅತಿ ಕಡಿಮೆ ಸಮಯದಲ್ಲಿ ಗುರಿ ತಲುಪಿದ ಏಷ್ಯನ್ ತಂಡ ಎಂಬ ದಾಖಲೆ ಬರೆದಿತ್ತು. ನಂತರ ಜಪಾನ್ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ನಿರ್ಮಿಸಿದ್ದ 3.00.25 ಸೆಕೆಂಡುಗಳ ದಾಖಲೆಯನ್ನು ಮುರಿದಿತ್ತು.
ಇತಿಹಾಸ ಸೃಷ್ಟಿಸಿದ ಭಾರತ : ಟೋಕಿಯೊ ಒಲಿಂಪಿಕ್ಸ್ನ 4×400 ಮೀಟರ್ ರಿಲೇ ರೇಸ್ನಲ್ಲಿ ಭಾರತ ಫೈನಲ್ಗೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಭಾರತ ತನ್ನ ಹೀಟ್ನಲ್ಲಿ ಎರಡನೇ ಸ್ಥಾನ ಗಳಿಸಿ, ಫೈನಲ್ ಪ್ರವೇಶಿಸಿದೆ. ಅಮೆರಿಕ ಮೊದಲ ಸ್ಥಾನದಲ್ಲಿ ರೇಸ್ ಮುಗಿಸಿದರೆ, ಗ್ರೇಟ್ ಬ್ರಿಟನ್ ಮೂರನೇ ಸ್ಥಾನ ಗಳಿಸಿತು. ಓಟದಲ್ಲಿ ಭಾರತದ ಕ್ವಾರ್ಟೆಟ್ನ ಶಕ್ತಿ ಎಷ್ಟಿತ್ತೆಂದರೆ ದೈತ್ಯ ಅಮೆರಿಕ ಕೇವಲ 1 ಸೆಕೆಂಡ್ ಅಂತರದಿಂದ ಮೊದಲ ಸ್ಥಾನ ಪಡೆದುಕೊಂಡಿತು. ಅಮೆರಿಕ ತನ್ನ ಓಟವನ್ನು 2.58.47 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ, ಗ್ರೇಟ್ ಬ್ರಿಟನ್ 2.59.42 ತೆಗೆದುಕೊಂಡಿತು.
ಭಾರತೀಯರ ಪ್ರದರ್ಶನ ಹೇಗಿತ್ತು ಗೊತ್ತಾ? : ಅರ್ಹತಾ ಸುತ್ತಿನಲ್ಲಿ ಭಾರತದ ಪರ ಮೊಹಮ್ಮದ್ ಅನಾಸ್ ಓಟವನ್ನು ಪ್ರಾರಂಭಿಸಿದರು. ಅವರ ಆರಂಭ ನಿಧಾನವಾಗಿತ್ತು. ಇದರ ಪರಿಣಾಮ ಮೊದಲ 100 ಮೀಟರ್ ಓಟದ ನಂತರ ಭಾರತ ಆರನೇ ಸ್ಥಾನದಲ್ಲಿ ನಿಂತಿತು. ಆದರೆ, ಮುಂದಿನ 100 ಮೀಟರ್ಗಳಲ್ಲಿ ಭಾರತವು ಅಷ್ಟೇ ಅದ್ಭುತ ಶೈಲಿಯಲ್ಲಿ ಪುನರಾಗಮನ ಮಾಡಿತು. ಅಮೋಜ್ ಜೇಕಬ್ ಅವರ ವೇಗದ ಓಟದಿಂದಾಗಿ ಭಾರತ ಎರಡನೇ ಸ್ಥಾನಕ್ಕೆ ಏರಿತ್ತು. ಇದಾದ ನಂತರ ಮುಹಮ್ಮದ್ ಅಜ್ಮಲ್ ಮತ್ತು ಅಂತಿಮವಾಗಿ ಅಮೋಜ್ ಜೇಕಬ್ ನೀಡಿದ ಮುನ್ನಡೆಯನ್ನು ರಾಜೇಶ್ ರಮೇಶ್ ಉಳಿಸಿಕೊಂಡರು. ಕೊನೆಯ ಕ್ಷಣಗಳಲ್ಲಿ ಭಾರತವು ಅಮೆರಿಕವನ್ನು ಸೋಲಿಸಲು ಪ್ರಯತ್ನಿಸಿತು, ಆದರೆ ಯಶಸ್ವಿಯಾಗಲಿಲ್ಲ. ಆದರೆ ಭಾರತ ಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 4×400 ಮೀಟರ್ ರಿಲೇ ಓಟದ ಫೈನಲ್ ಇಂದು ಅಂದರೆ, ಇದೇ ಭಾನುವಾರ ನಡೆಯಲಿದೆ.
Source : Sports News
ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…