ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ದೈವ-ದೇವರನ್ನು ನೆನಪಾಗುತ್ತದೆ. ಇಲ್ಲೂ ಹಾಗೆ, ಏನಾದರೂ ಸಂಕಟವಾದರೆ ತಕ್ಷಣ ನೆನಪಾಗುವುದು ಈ ದೈವ. ಹೀಗಾಗಿ ಇಲ್ಲಿ ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ. ಈ ವಿಶೇಷವಾದ ದೈವದ ಕೋಲ ನಡೆಯುವುದು ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ ಕಿಲಮರಿತ್ತಾಯ ಜೋಡು ನೇಮವು ವೈಶಿಷ್ಟ್ಯವನ್ನು ಪಡೆದಿದೆ. ಜಾತ್ರಾ ಆರಂಭದ ದಿನ ಹಾಗೂ ಮರುದಿನ ಈ ನೇಮೋತ್ಸವ ನಡೆದುಕೊಂಡು ಬರುತ್ತಿದೆ. ದೈವರಾದನೆಯಲ್ಲಿ ದೈವದ ಅಣಿಗಳಿಗೆ ಮಹತ್ವದ ಪ್ರಾಧಾನ್ಯತೆ ಇದ್ದು, ಶಿಶಿಲದಲ್ಲಿರುವ ಕಿಲಮರಿತ್ತಾಯನ ಅಣಿ ಉಳಿದ ದೈವಗಳಂತಲ್ಲ. ಈ ದೈವದ ಅಣಿಯು ದೈವದ ಮುಂಭಾಗದಲ್ಲಿ ಇರುವುದೇ ಇಲ್ಲಿನ ವಿಶೇಷ. ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುವ ಪದ್ದತಿ ಇದೆ.ಹಾರಿಸಿದ ಕೋಳಿಗಳನ್ನು ನತ೯ಕ ಕುಟುಂಬಸ್ಥರು ಸಾಕಾಣಿಕೆ ಮಾಡುತ್ತಾರೆ.ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ.
ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುತ್ತಾರೆ.
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…
ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…