ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ದೈವ-ದೇವರನ್ನು ನೆನಪಾಗುತ್ತದೆ. ಇಲ್ಲೂ ಹಾಗೆ, ಏನಾದರೂ ಸಂಕಟವಾದರೆ ತಕ್ಷಣ ನೆನಪಾಗುವುದು ಈ ದೈವ. ಹೀಗಾಗಿ ಇಲ್ಲಿ ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ. ಈ ವಿಶೇಷವಾದ ದೈವದ ಕೋಲ ನಡೆಯುವುದು ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ ಕಿಲಮರಿತ್ತಾಯ ಜೋಡು ನೇಮವು ವೈಶಿಷ್ಟ್ಯವನ್ನು ಪಡೆದಿದೆ. ಜಾತ್ರಾ ಆರಂಭದ ದಿನ ಹಾಗೂ ಮರುದಿನ ಈ ನೇಮೋತ್ಸವ ನಡೆದುಕೊಂಡು ಬರುತ್ತಿದೆ. ದೈವರಾದನೆಯಲ್ಲಿ ದೈವದ ಅಣಿಗಳಿಗೆ ಮಹತ್ವದ ಪ್ರಾಧಾನ್ಯತೆ ಇದ್ದು, ಶಿಶಿಲದಲ್ಲಿರುವ ಕಿಲಮರಿತ್ತಾಯನ ಅಣಿ ಉಳಿದ ದೈವಗಳಂತಲ್ಲ. ಈ ದೈವದ ಅಣಿಯು ದೈವದ ಮುಂಭಾಗದಲ್ಲಿ ಇರುವುದೇ ಇಲ್ಲಿನ ವಿಶೇಷ. ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುವ ಪದ್ದತಿ ಇದೆ.ಹಾರಿಸಿದ ಕೋಳಿಗಳನ್ನು ನತ೯ಕ ಕುಟುಂಬಸ್ಥರು ಸಾಕಾಣಿಕೆ ಮಾಡುತ್ತಾರೆ.ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ.
ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುತ್ತಾರೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…