Advertisement
MIRROR FOCUS

ಎಮ್ಮೇ ನಿನಗೆ ಸಾಟಿ ಇಲ್ಲ..! | ಮಾರುಕಟ್ಟೆಯಲ್ಲಿ KMF ಎಮ್ಮೆ ಹಾಲು ಲಭ್ಯ | 1 ಲೀಟರ್ ಬೆಲೆ ಎಷ್ಟು..?

Share

ಹಾಲನ್ನು(Milk) ಭೂಲೋಕದ ಅಮೃತ(Nectar) ಎನ್ನಲಾಗುತ್ತದೆ. ಆದರೆ ಹಸುವಿನ ಹಾಲಿಗೆ(Cow Milk) ಮೊದಲ ಪ್ರಾಶಸ್ತ್ಯ. ತದನಂತರ ಎಮ್ಮೆ, ಮೇಕೆ, ಕತ್ತೆ ಹಾಲು(Baffalo, Goat, Donkey) ಹೀಗೆ. ದನದ ಹಾಲಿನಷ್ಟೇ ಪ್ರಾಮುಖ್ಯತೆ ಇರುವುದು ಎಮ್ಮೆ ಹಾಲಿಗೆ. ಹಳ್ಳಿಗಳಲ್ಲಿ ಇಂದಿಗೂ ಎಮ್ಮೆ ಹಾಲಿನ ಉಪಯೋಗ ಇದೆ. ಆದರೆ ಪಟ್ಟಣಗಳಲ್ಲಿ ನಂದಿನಿ ಪ್ಯಾಕೆಟ್‌(Nandini milk) ಹಾಲಿನದ್ದೇ ಕಾರುಬಾರು. ಅದರಲ್ಲೂ ದನದ ಹಾಲಿಗೆ ಡಿಮ್ಯಾಂಡ್.‌ ಇದೀಗ ಎಮ್ಮೆ ಹಾಲನ್ನು ಕೆಎಂಎಫ್‌ ನವರು ಪ್ಯಾಕೆಟ್‌ ತುಂಬಿ ಮಾರಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ಕೆಎಂಎಫ್ (KMF) ಎಮ್ಮೆ ಹಾಲು (Buffalo Milk) ಶುಕ್ರವಾರದಿಂದ ಮಾರುಕಟ್ಟೆಗೆ ಲಭ್ಯವಾಗುತ್ತಿದ್ದು, ಗ್ರಾಹಕರಿಂದಲೂ ಭಾರೀ ಬೇಡಿಕೆ ಬರುತ್ತಿದೆ.

Advertisement
Advertisement

ಪ್ರತಿ ಲೀಟರ್ ಹಾಲಿಗೆ (Milk) 60 ರೂ. ನಿಗದಿಪಡಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್‌ಗೆ 39.50 ರೂಪಾಯಿಗೆ (5 ರೂ. ಪ್ರೋತ್ಸಾಹಧನವನ್ನೊಳಗೊಂಡು) ಖರೀದಿ ಮಾಡಲಾಗುತ್ತಿದೆ.

Advertisement

ಕೆಎಂಎಫ್ ವತಿಯಿಂದ ಎಮ್ಮೆ ಹಾಲು ಪೂರೈಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ನಂದಿನಿ ಎಮ್ಮೆ ಹಾಲನ್ನು (Nandini Buffalo Milk) ಮಾರುಕಟ್ಟೆಗೆ ಬಿಡಲಾಗಿತ್ತು. ಆದ್ರೆ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಅಂದು ಪ್ರತಿದಿನ ಸುಮಾರು 5,000 ಲೀಟರ್ ಹಾಲನ್ನು ಕೆಎಂಎಫ್ ಮಾರಾಟ ಮಾಡುತ್ತಿತ್ತು. ಸದ್ಯ ಬೆಂಗಳೂರು ಸೇರಿದಂತೆ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಮಾರುಕಟ್ಟೆಗಳಲ್ಲಿಯೂ ಎಮ್ಮೆ ಹಾಲು ಮಾರಾಟಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ.

KMF (Buffalo Milk) is available in the market from Friday (today) in the state and there is a huge demand from consumers. 60 per liter of milk. is scheduled. Milk unions are supplied with 60 thousand liters of buffalo milk every day. It is being purchased from farmers at Rs 39.50 per liter (including Rs 5 subsidy). – ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 05-10-2024 | ಗುಡುಗು ಸಹಿತ ಸಾಮಾನ್ಯ ಮಳೆ | ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ

ಈಗಿನಂತೆ ಅಕ್ಟೊಬರ್ 10ರ ವೇಳೆಗೆ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ…

7 hours ago

ಬಳ್ಪದ ತ್ರಿಶೂಲಿನೀ ದೇವಸ್ಥಾನ | ಕದಂಬರ ಕಾಲದ ದೇವಾಲಯದಲ್ಲಿ ನವರಾತ್ರಿ ಸಂಭ್ರಮ |

ಕದಂಬ, ಚೋಳರ ಕಾಲದಿಂದಲೂ ದೇವಿಯ ಆರಾಧನೆ ನಡೆಯುತ್ತಿತ್ತು. ಕದಂಬರ ಕಾಲದ ದೇವಸ್ಥಾನವೊಂದು ಕಡಬ…

11 hours ago

ರಾಜ್ಯದ  ಚಾರಣ ಪಥಗಳಲ್ಲಿ ದಿನಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ | ಸಚಿವ ಈಶ್ವರ್ ಖಂಡ್ರೆ

ರಾಜ್ಯದ ಎಲ್ಲಾ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ.

1 day ago

ಹವಾಮಾನ ವರದಿ | 04-10-2024 | ಗುಡುಗು ಸಹಿತ ಮಳೆ ಮುಂದುವರಿಕೆ | ಹಿಂಗಾರು ಮತ್ತಷ್ಟು ವಿಳಂಬ |

ಮಳೆಯು ವಾತಾವರಣದ ಅಧಿಕ ತಾಪಮಾನದಿಂದ ಸ್ಥಳೀಯವಾಗಿ ಉಂಟಾದ ಮೋಡಗಳಿಂದಾಗುತ್ತಿವೆ. ಹಿಂಗಾರು ಮಾರುತಗಳು ಮತ್ತಷ್ಟು…

1 day ago

ಅಡಿಕೆ ಧಾರಣೆ ಇಳಿಕೆ | ಅನಾವಶ್ಯಕ ಗೊಂದಲ ಬೇಡ | ಅಡಿಕೆಗೆ ಬೇಡಿಕೆ ಇದ್ದು ಧಾರಣೆ ಕುಸಿಯುವ ಲಕ್ಷಣವಿಲ್ಲ – ಕಿಶೋರ್‌ ಕುಮಾರ್‌ ಕೊಡ್ಗಿ |

ಅಡಿಕೆ ಧಾರಣೆಗೆ ಸಂಬಂಧಿಸಿದ  ಅನಾವಶ್ಯಕ ಗೊಂದಲಗಳಿಂದ ಕೂಡಿದ, ಆಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ…

2 days ago

ಡಾಕ್ಟರೇಟ್ ಪದವಿ ಪಡೆದ ಪುತ್ತೂರಿನ ವಿವೇಕಾನಂದ ಪ್ರಾಧ್ಯಾಪಕಿ ವಿದ್ಯಾ ಎಸ್

ವಿದ್ಯಾ ಎಸ್‌ ಅವರಿಗೆ "ಕರ್ನಾಟಕದ ಹವ್ಯಕ ಸಮುದಾಯ: ಒಂದು ಸಮಾಜಶಾಸ್ತ್ರೀಯ ಅಧ್ಯಯನ" ಎಂಬ…

2 days ago