Advertisement
MIRROR FOCUS

ಉಪಯೋಗಿಸಿ ನೋಡಿ ಕೋಳಿ ಗೊಬ್ಬರ | ಹೊಲದಲ್ಲಿ ಬೆಳೆಗಳ ಅಬ್ಬರ..! | ಒಂದಷ್ಟು ನಕಾರಾತ್ಮಕ ಅಂಶಗಳು ಇವೆ..! ಎಚ್ಚರ…

Share

ಅತಿಯಾದ ರಾಸಾಯನಿಕ ಗೊಬ್ಬರಗಳ(Chemical Fertilizer) ಬಳಕೆಯಿಂದ ಮಣ್ಣಿನ ಫಲವತ್ತತೆ(Soil fertility) ಹಾಳಾಗಿದ್ದಲ್ಲದೆ ನಾವು ಸೇವಿಸುವ ಆಹಾರ ಕಲುಷಿತಗೊಂಡಿದೆ(Contaminated food). ಇಂತಹ ವಿಷಯಗಳನ್ನು ಅರಿತ ಕೆಲವು ರೈತರು(Farmer) ಸಾವಯವ ಗೊಬ್ಬರಗಳಾದ(Organic fertilizer) ಕೊಟ್ಟಿಗೆ ಗೊಬ್ಬರ(Cow Manure), ಆಡು/ಕುರಿ ಗೊಬ್ಬರ(Goat/Sheep Manure), ಎರೆಹುಳು ಗೊಬ್ಬರ(Earthworm Manure), ಹಂದಿ ಗೊಬ್ಬರ(Pig Manure) ಮತ್ತು ಕೋಳಿ ಗೊಬ್ಬರವನ್ನು(Poultry Manure) ಬಳಸಿ ಕೃಷಿ(Agriculture) ಮಾಡುತ್ತಿದ್ದಾರೆ.

ಬೇರೆ ಸಾವಯವ ಗೊಬ್ಬರಗಳಿಗೆ ಹೋಲಿಸಿದರೆ ಕೋಳಿ ಗೊಬ್ಬರದಲ್ಲಿ ಹೆಚ್ಚು ಸಾರಜನಕ, ರಂಜಕ ಮತ್ತು ಪೊಟ್ಯಾಷ್(Nitrogen, Phosphorus, Potash)ಸಿಗುತ್ತವೆ ಆದ್ದರಿಂದಲೇ ಕೋಳಿ ಹಿಕ್ಕಿಯನ್ನು ರೈತರು ಬೆಳೆಗಳಿಗೆ ಗೊಬ್ಬರಗಳಾಗಿ ಬಳಸುತ್ತಾರೆ. ಇತ್ತಿಚೆಗೆ ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿದೆ ಅನೇಕ ರೈತರು ಮಾಂಸ ಮತ್ತು ಮೊಟ್ಟೆ ಉತ್ಪಾದನೆಯ ಉದ್ದೇಶದಿಂದ ಕೋಳಿಗಳನ್ನು ಸಾಕುತ್ತಾರೆ. ಜೊತೆ ಜೊತೆಗೆ ಕೋಳಿ ಗೊಬ್ಬರವನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ.

ಕೃಷಿಯಲ್ಲಿ ರೈತರು ಕೋಳಿ ಗೊಬ್ಬರವನ್ನು ಬಳಸಿದರೆ ಹೆಚ್ಚಿನ ಇಳುವರಿ ಪಡೆಯುವ ಜೊತೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಕೋಳಿ ಸಾಕಾಣಿಕಾ ಕೇಂದ್ರದಿಂದ ತಂದ ಗೊಬ್ಬರವನ್ನು ರೈತರು ನೇರವಾಗಿ ಬೆಳೆಗಳಿಗೆ ಬಳಸಬಾರದು. ಕೆಲ ದಿನಗಳ ತನಕ ತೇವಾಂಶ ಇರುವ ಸ್ಥಳದಲ್ಲಿ ಸಂಗ್ರಹಿಸಿ ಉಪಯೋಗಿಸಬೇಕು. ಹೆಚ್ಚು ತೇವಾಂಶ ಇರುವ ಅಂದರೆ ಮಳೆಗಾಲದ ಸಮಯದಲ್ಲಿ ಈ ಗೊಬ್ಬರ ಬೆಳೆಸಿದರೆ ಇನ್ನು ಸೂಕ್ತ.

ಆದರೆ ಕೆಲ ರೈತರ ಅನುಭವದ ಪ್ರಕಾರ ಕೋಳಿ ಗೊಬ್ಬರದ ಬಗ್ಗೆ ಒಂದಷ್ಟು ನಕಾರಾತ್ಮಕ ಆಲೋಚನೆಗಳು ಇವೆ. ಹಾಗಾಗಿ ಕೋಳಿ ಗೊಬ್ಬರ ಒಳ್ಳೆಯದು ಹೌದೋ ಅಲ್ಲವೋ ಎಂಬ ಬಗ್ಗೆ ರೈತರೇ ವಿಮರ್ಷೆ ಮಾಡಬೇಕು, ಗೊಬ್ಬರದಿಂದ ಕೃಷಿ ಹಾಳಾಗಿದೆಯೆಂದು ಕೆಲ ರೈತರು ಹೇಳುವುದು ಇದೆ. ಯಾವುದೇ ಬಾಹ್ಯ ಪರಿಕರಗಳು ಕೃಷಿ ಕಾರ್ಯಗಳಲ್ಲಿ ಬಳಸುವುದು ಈಗ ಬಹಳ ಅಪಾಯಕಾರಿ ಮತ್ತು ಹಲವು ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ. ಕೋಳಿ ಗೊಬ್ಬರದಲ್ಲಿ ಸೇರಿರುವ ವಿನಾಶಕಾರಿ, ಪ್ರಚೋದನಕಾರಿ ಔಷಧಿಗಳು ಕೃಷಿ ಭೂಮಿಯಲ್ಲಿ ಸೇರಿ, ಮುಂದೆ ಕುಡಿಯುವ ನೀರು ಕೂಡಾ ಕಲ್ಮಶವಾಗುತ್ತದೆ. ಮಾರಣಾಂತಿಕ ಕಾಯಿಲೆಗಳು ಪ್ರಾರಂಭ ಆಗಲು ಇವುಗಳು ಬೀಜಾಂಕುರ ಆಗಿರುತ್ತದೆ. ಕೋಳಿ ಗೊಬ್ಬರ ಅಧಿಕ ಉಪಯೋಗ ಅಡಿಕೆ ಮರಗಳು ಹೆಚ್ಚು ಟೊಳ್ಳಾಗುತ್ತದೆ. ಪ್ರಕೃತಿ ವಿಕೋಪದಲ್ಲಿ ಬೇಗನೆ ಮುರಿದು ಬೀಳುತ್ತವೆ. ಹಾಗೆ ಕೋಳಿ ಗೊಬ್ಬರ ತುಂಬಾ ಹೀಟ್ ಅನ್ನೋ ಬಗ್ಗೆ ಕೆಲ ರೈತರ ಅಭಿಪ್ರಾಯವಿದೆ. ಯಾವುದಕ್ಕೂ ಒಂದಷ್ಟು ಪ್ರಯೋಗ, ಅಥವಾ ಈಗಾಗಲೇ ಬಳಸಿದ ರೈತರ ಸಲಹೆ ಪಡೆಯುವುದು ಉತ್ತಮ.

ಮಾಹಿತಿ ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ

ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…

14 hours ago

ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…

17 hours ago

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…

1 day ago

ಗೋಮಯದಿಂದ ಗ್ರೀನ್‌ ಎನರ್ಜಿ | ದೆಹಲಿಯಲ್ಲಿ 300 ಟನ್ ಜೈವಿಕ ಅನಿಲ ಘಟಕ – ಯಮುನಾ ಮಾಲಿನ್ಯ ತಡೆಗೆ ಮೆಗಾ ಪ್ಲಾನ್‌

ದೆಹಲಿಯ ಗಾಜಿಪುರದಲ್ಲಿ ದಿನಕ್ಕೆ 300 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕ ಸ್ಥಾಪನೆಗೆ…

1 day ago

ಇಂಡೋ ಫಾಲಿ, ಬರ್ಮಾ ಗೋಟಾ ಹಾವಳಿ : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ನಿಜವಾಗಿಯೂ ಎಷ್ಟು ಹೊಡೆತ?

ಇಂಡೋ ಫಾಲಿ ಮತ್ತು ಬರ್ಮಾ ಗೋಟಾ ಅಡಿಕೆ ಆಮದು ಹೆಚ್ಚಾದರೂ ಮಂಗಳೂರು ಚಾಲಿ…

2 days ago