ಆನೆ ಬಂದ್ರೆ ಮೆಸೇಜ್ ಬರುತ್ತೆ | ಕಾಡಾನೆ ಸಮಸ್ಯೆಗೆ ಹೊಸ ಪ್ಲಾನ್ | ಇನ್ನಾದ್ರು ಗ್ರಾಮೀಣ ಜನರ ಪ್ರಾಣ ಉಳಿಬಹುದಾ..?

March 9, 2023
6:01 PM

ನಾಡಿನತ್ತ ಗಜ ಪಯಣ ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ರೆಂಜಿಲಾಡಿಯಲ್ಲಿ ಇಬ್ಬರ ಪ್ರಾಣವನ್ನೇ ಬಲಿಪಡೆದಿತ್ತು. ಆಮೇಲೆ ನರ ಹಂತಕ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಹರ ಸಾಹಸವನ್ನೇ ಪಡಬೇಕಾಯಿತು. ಆನೆ ಮತ್ತು ಮನುಷ್ಯನ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಾಗೆಯೇ ಇದು ನಿಲ್ಲದ ಸಮಸ್ಯೆ. ಆದರೂ ಈ ಸಮಸ್ಯೆ ಪರಿಹಾರಕ್ಕೆ ಕೆಲವೊಂದು ಮಾರ್ಗಗಳನ್ನು ಅರಣ್ಯ ಇಲಾಖೆ ಕಂಡು ಹಿಡಿಯುತ್ತಲೇ ಇದೆ. ಇದೀಗ ಆನೆ ಆಗಮನದ ಸುದ್ದಿ ತಿಳಿಯಲು ಹೊಸ ಸಾಧನವೊಂದನ್ನು ಅಳವಡಿಸಲು ಮುಂದಾಗಿದೆ.

Advertisement
ಕೊಡಗು ಜಿಲ್ಲೆಯ ವಿವಿಧೆಡೆ ಹೋಗಬೇಕಾದರೆ ಹಸಿರು ಬಣ್ಣದ  ದೀಪದ ಕಂಬಗಳನ್ನು ಕಾಡಂಚಿನ ಹಾದಿಗಳಲ್ಲಿ ಹಾಕಲಾಗಿದೆ.  ಅದ್ರಲ್ಲಿ ಕಾಣೋ ಲೈಟ್ ಅನ್ನ ಗಮನಿಸಿದ್ರೆ ನಿಮ್ಗೊಂದು ಸೂಚನೆಯೂ ಸಿಗುತ್ತೆ.  ಕುಶಾಲನಗರ ತಾಲೂಕಿನ ವಿವಿಧೆಡೆ ಇಲಾಖೆಯ ಬೆಂಬಲದೊಂದಿಗೆ ಎ ರೋಚಾ ಇಂಡಿಯಾ ಸಂರಕ್ಷಣಾ ಸಂಶೋಧನಾ ಸಂಸ್ಥೆಯಿಂದ ಇಂತಹ ಗ್ರೀನ್ ಸಿಗ್ನಲ್ ಪಾಯಿಂಟ್​ಗಳನ್ನ ನಿರ್ಮಿಸಲಾಗಿದೆ. ರಸ್ತೆ ಬದಿ ಸೋಲಾರ್ ಚಾಲಿತ ದೀಪಗಳನ್ನ ಅಳವಡಿಸಲಾಗಿದ್ದು, ಇದನ್ನ ಆನೆಯ ಸಿಗ್ನಲ್ ಬೋರ್ಡ್ ಎಂದೇ ಕರೆಯಲಾಗುತ್ತೆ.

ಸಾರ್ವಜನಿಕರಿಗೆ ಕೊಡುತ್ತೆ ಎಚ್ಚರಿಕೆ: ಇವುಗಳು ಸ್ವಯಂ ಚಾಲಿತವಾಗಿ ಕೆಲಸ ನಿರ್ವಹಿಸುವ ಸಿಗ್ನಲ್ ಕೂಡಾ ಆಗಿದ್ದು, ಕಾಡಾನೆಗಳ ಬಗ್ಗೆ ವಾಹನ ಸವಾರರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡಿ ಎಚ್ಚರಿಸುತ್ತದೆ.

ಆನೆ ಚಲನವಲನ ಕಂಡ್ರೆ ರೆಡ್ ಲೈಟ್! : ಸದ್ಯ ಮೀನುಕೊಲ್ಲಿ ಮತ್ತು ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿರುವ ಐದು ಸಂಘರ್ಷ ವಲಯಗಳಲ್ಲಿ ಆನೆ ಫಲಕಗಳನ್ನು ಹಾಕಲಾಗಿದೆ. ಈ ಸೈನ್ ಬೋರ್ಡ್​ಗಳು ಕಾಡು ಆನೆಗಳ ಚಲನವಲನ ಅಥವಾ ಉಪಸ್ಥಿತಿಯ ಬಗ್ಗೆ ಪ್ರಯಾಣಿಕರನ್ನು ಎಚ್ಚರಿಸುತ್ತವೆ. ಕಾಡಾನೆಗಳ ಚಲನವಲನ ಪತ್ತೆಯಾದಾಗ ಈ ಬೋರ್ಡ್​ನಲ್ಲಿ ರೆಡ್ ಲೈಟ್ ಬೆಳಗುತ್ತವೆ. ಅಷ್ಟೇ ಅಲ್ದೇ, ಪ್ರಯಾಣಿಕರನ್ನು ಅಲರ್ಟ್ ಇರುವಂತೆ ಮಾಡುತ್ತವೆ.

ಅಲರ್ಟ್ ಮೆಸೇಜ್ ಹೋಗುತ್ತೆ! : ಈ ಸಿಗ್ನಲ್ ಬೋರ್ಡ್ ಆನೆಯ ಚಲನೆಯನ್ನು ಪತ್ತೆಹಚ್ಚಿದ ನಂತರ SMS ಅನ್ನು ಸರ್ವರ್ ವ್ಯವಸ್ಥೆಗೆ ರವಾನಿಸುತ್ತವೆ. ಸ್ಥಳೀಯ DRFO ಗಳು ಕಾಡು ಆನೆಗಳ ಚಲನವಲನವನ್ನು ಟ್ರ್ಯಾಕ್ ಮಾಡುತ್ತಾರೆ. ಹೀಗೆ ಒಂದು ಕಡೆ ಪ್ರಯಾಣಿಕರಿಗೆ ಅಲರ್ಟ್ ಮೆಸೇಜ್ ಹೋದರೆ, ಇನ್ನೊಂದೆಡೆ ಅರಣ್ಯ ಇಲಾಖೆಯನ್ನೂ ಎಚ್ಚರಿಸುತ್ತವೆ. ಇನ್ನು ಈ ಸಿಗ್ನಲ್ ಬೋರ್ಡ್ ಸೌರ ಚಾಲಿತ ವ್ಯವಸ್ಥೆಯಾಗಿದ್ದು, ಈ ಫಲಕಗಳು ಮತ್ತು ಸಿಗ್ನಲ್ ಬೋರ್ಡ್​ಗಳನ್ನು ಸೂರ್ಯನ ಬೆಳಕು ಇಲ್ಲದ ಸಂದರ್ಭದಲ್ಲಿಯೂ ಸಂಪರ್ಕಿಸಬಹುದು.

ಒಟ್ಟಾರೆ ಹಲವು ವರ್ಷಗಳ ಆನೆ-ಮಾನವ ಸಂಘರ್ಷದಿಂದ ಕಾಡಾನೆ ನಿಯಂತ್ರಣಕ್ಕೆ ವಿದ್ಯುತ್ ಬೇಲಿ, ರೈಲ್ವೇ ಬ್ಯಾರಿಕೇಡ್ ಅಳವಡಿಕೆ, ಆನೆಗೇಟ್, ಕಾಡಾನೆಗಳಿಗೆ ರೇಡಿಯೋ ಕಾಲರ್ ಹೀಗೆ ಹತ್ತು ಹಲವು ಯೋಜನೆಗಳನ್ನ ಹಾಕಿಕೊಳ್ಳಲಾಗಿತ್ತು. ಇದೀಗ ಅದಕ್ಕೊಂದು ಸೇರ್ಪಡೆ ಅನ್ನೋ ಹಾಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇನ್ನಾದ್ರೂ ಆನೆಗಳ ಹಾಗೂ ಮಾನವನ ನಡುವಿನ ಸಂಘರ್ಷ ಕೊನೆಯಾಗಲಿ ಅನ್ನೋ ಆಶಯ ಎಲ್ಲರದ್ದು. ಕೊಡಗು ಜಿಲ್ಲೆಯಲ್ಲಿ ಯಶಸ್ವಿ ಕಂಡರೆ ನಮ್ಮಲ್ಲೂ ಈ ಸಾಧನವನ್ನು ಅಳವಡಿಸುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಬಹದು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ
February 19, 2026
12:29 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ
February 19, 2026
7:55 AM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ
February 19, 2026
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror