Advertisement
MIRROR FOCUS

ಅಡಿಕೆಗೆ ಕೊಳೆರೋಗ | ದ ಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆಗಾರರನ್ನು ಕಾಡಿದೆ ಕೊಳೆರೋಗ |

Share

Advertisement
Advertisement
ಅಡಿಕೆಗೆ ಕೊಳೆರೋಗ ಈ ಬಾರಿಯೂ ಕಾಡಿದೆ. ಬೆಳೆಗಾರರು ಈ ಬಾರಿಯೂ ರೋಗ ನಿಯಂತ್ರಣದ ಸಾಹಸದಲ್ಲಿದ್ದಾರೆ. ಮಳೆ-ಬಿಸಿಲಿನ ಆಟದ ನಡುವೆ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಅಡಿಕೆ ಬೆಳೆಗಾರರಿಗೆ ಕೊಳೆರೋಗ ಅಥವಾ ಮಹಾಳಿ ರೋಗ ನಿಯಂತ್ರಣ ಪ್ರತೀ ವರ್ಷದ ಮಳೆಗಾಲ ಬಹುದೊಡ್ಡ ಸವಾಲಿನ ಕೆಲಸ. ಈ ಬಾರಿಯೂ ಅಡಿಕೆಗೆ ಕೊಳೆರೋಗ ಬಾಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಕೊಳೆರೋಗ ನಿಯಂತ್ರಣವೇ ಸವಾಲಿನ ಕೆಲಸ. ಪ್ರತೀ ಬಾರಿ ಮಳೆಗಾಲದ ಮುನ್ನ ಔಷಧಿ ಸಿಂಪಡಣೆ ಅತೀ ಜರೂರಾಗಿ ಆಗಬೇಕಾದ ಕೆಲಸ. ಅದಾಗಿ ಸುಮಾರು 30  ದಿನಗಳ ಬಳಿಕ ಇನ್ನೊಂದು ಸುತ್ತಿನ ಔಷಧಿ ಸಿಂಪಡಣೆ ಅತೀ ಅಗತ್ಯವಾಗಿದೆ. ಈ ಸಮಯದಲ್ಲಿ ಬೆಳೆಗಾರರು ಸೋಲುತ್ತಾರೆ. ಔಷಧಿ ಸಿಂಪಡಣೆಗೆ ನುರಿತ ಕಾರ್ಮಿಕರ ಕೊರತೆ ಒಂದು ಕಾರಣವಾದರೆ ಎಡೆಬಿಡದೆ ಸುರಿಯುವ ಮಳೆಯೂ ಇನ್ನೊಂದು ಕಾರಣ. ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ವಿಜ್ಞಾನಿಗಳು ತಿಳಿಸುತ್ತಾರಾದರೂ ಅದರ ಹೊರತಾಗಿ ವಿವಿಧ ಬಗೆಯ ಔಷಧಿಗಳ ಸಿಂಪಡಣೆಯನ್ನೂ ಬೆಳೆಗಾರರು ಮಾಡಿ ಯಶಸ್ಸು ಕಂಡವರೂ ಇದ್ದಾರೆ.

Advertisement

ಈ ಬಾರಿ ವರ್ಷವಿಡೀ ಮಳೆಯ ಪ್ರಭಾವ ಇತ್ತು. ಮೇ ತಿಂಗಳ ಕೊನೆಯಲ್ಲಿಯೇ ಅಡಿಕೆ ಬೆಳೆಗಾರರಿಗೆ ಔಷಧಿ ಸಿಂಪಡಣೆ ಕೆಲವರಿಗೆ ಸಾಧ್ಯವಾಗಿತ್ತು. ಜೂನ್‌ ತಿಂಗಳಲ್ಲಿ  ಮಳೆಯ ಪ್ರಭಾವ ಸ್ವಲ್ಪ ಕಡಿಮೆ ಇದ್ದರೂ ಆ ಬಳಿಕ ಎಡೆಬಿಡದೆ ಸುರಿದ ಮಳೆಯ ಕಾರಣದಿಂದ ಮಲೆನಾಡು ಭಾಗವಾದ ಅದರಲ್ಲೂ ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಕೆಲವು ಕಡೆಗಳಲ್ಲಿ ಕೊಳೆರೋಗ ಬಾಧಿಸಿದೆ. ಆದರೆ ಭಾರೀ ಪ್ರಮಾಣದಲ್ಲಿ ಕೊಳೆರೋಗ ಎಂದು ಹೇಳುವಷ್ಟು ಈ ಬಾರಿ ಇಲ್ಲದೇ ಇದ್ದರೂ ಕೆಲವು ಬೆಳೆಗಾರರ ತೋಟದಲ್ಲಿ  ವಿಪರೀತವಾಗಿ ಕಂಡುಬಂದಿದೆ. ಇದರ ನಿಯಂತ್ರಣಕ್ಕೆ ಸರ್ಕಸ್‌ ಮಾಡುತ್ತಿದ್ದಾರೆ.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

11 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

1 day ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

2 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

2 days ago