ಅಭಿವೃದ್ಧಿ ನಿರಂತರ. ಯಾವತ್ತೂ ಶಿಥಿಲದಿಂದ ಸುಧಾರಣೆಯ ಕಡೆಗೆ. ಆದರೆ ಗ್ರಾಮೀಣ ಭಾಗ ಕಟ್ಟ-ಕೊಲ್ಲಮೊಗ್ರ ಪ್ರದೇಶ ಜನರಿಗೆ ಹಾಗಲ್ಲ ಶಿಥಿಲದಿಂದ ಶಿಥಿಲಾವಸ್ಥೆ ಕಡೆಗೆ..!. ಬುಧವಾರದ ಮಳೆಗೆ ಇದ್ದ ಸೇತುವೆ ಕೊಚ್ಚಿ ಹೋಗಿ ಈ ಸ್ಥಿತಿ ಬಂದಿದೆ..!. ಘಟನೆ ಇದು.
ಸುಳ್ಯ ತಾಲೂಕಿನ ಕಟ್ಟ-ಕೊಲ್ಲಮೊಗ್ರ ಗ್ರಾಮೀಣ ಭಾಗ. ಕಾಡು ಹಾಗೂ ಶಿಥಿಲ ರಸ್ತೆಯ ಮೂಲಕ ಸಂಪರ್ಕ ಇರುವ ಊರು. ಇಲ್ಲಿ ಕಟ್ಟ – ಕೊಲ್ಲಮೊಗ್ರ ಮಾರ್ಗ ಮಧ್ಯೆ ಮುಳುಗು ಸೇತುವೆ ಇದೆ. ಕಳೆದ ಸುಮಾರು ಆರು ವರ್ಷದಿಂದ ಸ್ವಲ್ಪ ಸ್ವಲ್ಪ ಶಿಥಿಲಾವಸ್ಥೆಯಿಂದ ಕೂಡಿತ್ತು. ಬುಧವಾರ ಸುರಿದ ಮಳೆಗೆ ಇದ್ದ ಸೇತುವೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ.
ಈ ಹಿಂದೆ ದ್ವಿಚಕ್ರ ವಾಹನ ಸವಾರರು ದಾಟುತ್ತಿದ್ದು ಈಗ ದ್ವಿಚಕ್ರವಾಹನಕ್ಕೂ ಸವಾರಿ ಕಷ್ಟವಾಗಿದೆ. ಪಾದಾಚಾರಿಗಳಿಗೆ ಮಾತ್ರಾ ಹೋಗುವ ಸ್ಥಿತಿಗೆ ಬಂದಿದೆ. ಆಡಳಿತವು ಈ ಕಡೆಗೆ ಗಮನಹರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಸೇತುವೆಗಳು ಸಂಪರ್ಕದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಅತೀ ಅಗತ್ಯವಾಗಿ ದುರಸ್ತಿ ಆಗಬೇಕಿದೆ ಎಂಬುದು ಜನರ ಒತ್ತಾಯ.
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…
ಹಾಲಿನ ದರ ಹೆಚ್ಚಳ ಮಾಡುವಂತೆ ರೈತರಿಂದ ಬೇಡಿಕೆ ಹೆಚ್ಚಿದ್ದು, ಪ್ರತಿ ಲೀಟರ್ ಗೆ…
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…