Advertisement
MIRROR FOCUS

ಮತಾಂತರದ ಕರಾಳ ಮುಖ | ಇವರಿಗೆ ಸೌಲಭ್ಯಗಳು ಮಾತ್ರಾ ಇನ್ನೂ ತಲುಪಿಲ್ಲ | ಈಗ ಅಡ್ಡಿಯಾಗಿರುವುದು ಧರ್ಮ….! |

Share

ವಿಡಿಯೋ ಸ್ಟೋರಿ

ಸರಕಾರಗಳು ಇವರ ಅಭಿವೃದ್ಧಿ ಯೋಜನೆಗಳನ್ನು  ಹಾಕಿಕೊಂಡಿದೆ. ಆದರೂ ಸೌಲಭ್ಯಗಳು ಇನ್ನೂ ತಲಪುತ್ತಿಲ್ಲ. ದಾಖಲೆಗಳು ಹೇಳುತ್ತವೆ ಇವರು ಕ್ರೈಸ್ತರೆಂದು…!. ಇವರು ಸುಳ್ಯ ತಾಲೂಕಿನ ಪಂಜ ಪರಿಸರದಲ್ಲಿರುವ  ಕೊರಗ ಸಮುದಾಯದ ಹಲವು ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯದ ಕೊರತೆಯಿಂದ ಬಳಲುತ್ತಿವೆ. ಮಾನವೀಯ ನೆಲೆಯಲ್ಲಿ  ಇವರಿಗೆ ಸೌಲಭ್ಯಗಳು ಈಗ ತಲುಪಬೇಕಿದೆ.

ಸುಳ್ಯ ತಾಲೂಕಿನ ಪಂಜದಲ್ಲಿ  ಕೊರಗ ಸಮುದಾಯದ ಹಲವು ಮನೆಗಳು ಇವೆ. ಸರಕಾರ ಎಲ್ಲಾ ವ್ಯವಸ್ಥೆ ಕಡೆಗೂ ಗಮನಕೊಟ್ಟರೂ ಈಗಲೂ ಮೂಲಭೂತ ಸಮಸ್ಯೆಗಳ ಕೊರತೆಯಿಂದ ಈ ಕುಟುಂಬಗಳು ಅನೇಕ ವರ್ಷಗಳಿಂದ ಬಳಲುತ್ತಿವೆ. ಈಗ ಯಾವುದೇ ಕಚೇರಿಗೆ ಈ ಕೊರಗ ಸಮುದಾಯದ ಕುಟುಂಬಗಳು ಸೌಲಭ್ಯಕ್ಕೆ ಹೋದಾಗ ದಾಖಲೆಗಳಲ್ಲಿ ಮತಾಂತರವಾದ ಬಗ್ಗೆ ಬೆಳಕಿಗೆ ಬರುತ್ತದೆ. ಹೆಸರುಗಳು ಬದಲಾಗಿವೆ, ಧರ್ಮವೂ ಬದಲಾಗಿದೆ. ಹಾಗಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಮತಾಂತರ ಯಾಕಾದರು ಎಂದು ಕೇಳಿದರೂ ಉತ್ತರವಿಲ್ಲ. ಮೂಲಭೂತ ಸೌಲಭ್ಯ ಬೇಕು ಎಂದು ಕೆಲವರು ಮತಾಂತರವಾದರು, ಮನೆಯ ಮುಂದೆ ಶಿಲುಬೆ ಹಾಕಿಕೊಂಡರು. ಒಳ್ಳೆಯದಾಗುತ್ತದೆ ಎಂದು ಅಂದುಕೊಂಡರು. ಈಗ ಮತಾಂತರ ಮಾಡಿಸಿಕೊಂಡವರೂ ಇಲ್ಲ, ಸಾಮಾಜಿಕ ಮುಖಂಡರೂ ಇಲ್ಲ, ರಾಜಕೀಯ ಮುಖಂಡರೂ ಇಲ್ಲ.
ಮತಾಂತರವಾದ ಕುಟುಂಬದ ಸ್ಥಿತಿ

ಸೌಲಭ್ಯಕ್ಕಾಗಿ , ಮನೆ ನಿರ್ಮಾಣಕ್ಕಾಗಿ  ಕಚೇರಿಗಳಿಗೆ ಅಲೆದೂ ಅಲೆದೂ ಈಗ ಕಚೇರಿ ಎಂದಾಗಲೇ ಇವರಲ್ಲಿ ಕೆಲವರಿಗೆ  ಅಲರ್ಜಿ ಆಗಿದೆ. ನಮಗೇನು ಸಿಗಲ್ಲ ಎಂಬ ಭಾವನೆ ಇದೆ. ರಾಜಕೀಯ ಮುಖಂಡರೂ ಚುನಾವಣೆಯ ವೇಳೆಗೆ ಬರುತ್ತಾರೆ ಮತ್ತೆ ಈ ಕಡೆ ಬರಲ್ಲ ಎನ್ನುತ್ತಾರೆ.

ಮತಾಂತರವಾಗದ ಕುಟುಂಬದ ಸ್ಥಿತಿ

ಆದರೆ ರಾಜಕೀಯ ಮುಖಂಡರು ಹೇಳುತ್ತಾರೆ, ಚುನಾವಣೆ ನಂತರ ಮನೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಅವರನ್ನು ಕರೆದುಕೊಂಡು ಹೋದರೂ ಮತ್ತೆ ಬರಲ್ಲ, ಹೀಗಾಗಿ ಸೌಲಭ್ಯ ನೀಡುವುದಾದರೂ ಹೇಗೆ ಎಂದು ಹೇಳುತ್ತಾರೆ. ಮತಾಂತರ ಆಗಿರುವುದು  ಒಂದು ಭಾಗವಾದರೆ, ಇನ್ನೂ ಮತಾಂತರ ಆಗದೇ ಇರುವವರಿಗೂ ಸೌಲಭ್ಯಗಳು ದೊರೆತಿಲ್ಲ, ಈಗಲೂ ದುಸ್ಥಿತಿಯಲ್ಲಿರುವ ಮನೆಯಲ್ಲಿ  ಬದುಕುತ್ತಿದ್ದಾರೆ.

ಸದ್ಯ ಮತಾಂತರ ಆಗಿರಬಹುದು , ಕೆಲವರು ಹೆಸರುಗಳು ಬದಲಾಗಿರಬಹುದು , ಧರ್ಮ ಹಾಗೂ ಹೆಸರಿನ ದಾಖಲೆಗಳಲ್ಲಿ  ಲೋಪ ಇರಬಹುದು, ಅದೇನೇ ಇದ್ದರೂ ಮಾನವೀಯತೆಯಿಂದ ಮೇಲಾದ್ದು ಯಾವುದೂ ಇಲ್ಲ. ಈಗ ಸರಕಾರಗಳು, ಇಲಾಖೆಗಳು, ರಾಜಕೀಯ ಮುಖಂಡರು ಮಾನವೀಯತೆಯ ಆಧಾರದಲ್ಲಿಯೇ  ಇಲ್ಲಿನ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವ ಕೆಲಸ ಆಗಬೇಕಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

6 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

13 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

22 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

22 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

24 hours ago