Advertisement
MIRROR FOCUS

“ಕೃಷ್ಣಂ ವಂದೇ ಜಗದ್ಗುರುಂ” | ಕೃಷ್ಣಾಷ್ಟಮಿಯ  ಸಡಗರ-ಸಂಭ್ರಮ |

Share

ಪ್ರಸನ್ನ ಪಾರಿಜಾತಾಯ ತೋತ್ರವೇತ್ರೈಕೃಪಾಣಯೇ ,
ಜ್ಞಾನಮುದ್ರಾಯ ಕೃಷ್ಣಾಯ ಗೀತಮೃತದುಹೇ ನಮಃ”

Advertisement
Advertisement

ಆಶ್ರಯ ಬಯಸಿದವರಿಗೆ ಪಾರಿಜಾತದಂತಹ ಕಲ್ಪವೃಕ್ಷವಾಗಿರುವ, ಒಂದು ಕೈಯಲ್ಲಿ ಚಾವಟಿಗೆಯನ್ನು ಹಿಡಿದಿರುವ, ಮತ್ತೊಂದು ಕೈಯಲ್ಲಿ ಜ್ಞಾನಮುದ್ರೆಯನ್ನು ತೋರಿಸುತ್ತಿರುವ ಗೀತೆಯೆಂಬ ಅಮೃತವನ್ನು  ಕರೆದಿರುವ ಕೃಷ್ಣನಿಗೆ ನಮಸ್ಕಾರ. ಎಂಬುದು ಶ್ರೀ ಮಧುಸೂದನ ಸರಸ್ವತಿಯವರು ರಚಿಸಿದ  ಮೇಲಿನ ಶ್ಲೋಕದ ತಾತ್ಪರ್ಯ.

Advertisement

ಕೃಷ್ಣನೆಂದರೆ  ಗುಡಿಯೊಳಗಿರುವ ಭಗವಂತನೆಂದು  ಅನಿಸದು. ಅವ ನಮ್ಮೊಳಗೆ ಇರುವವ, ನಮ್ಮವನೆಂದೇ ಅನಿಸುವುದು.   ಮುರಾರಿಯ ಹುಡುಕಿ ಊರೂರು ಅಲೆಯ ಬೇಕಾಗಿಲ್ಲ. ನಾವೆಲ್ಲಿರುವೆವೋ ಅಲ್ಲೇ ಅವನಿರವು ಅಲ್ಲವೇ? ಬಕುತಿಯಲಿ ಮಾಡುವೆಲ್ಲಾ ಕಾರ್ಯಗಳಲ್ಲೂ ಭಗವಂತನೇ ಇರುವಾಗ   ಹುಡುಕಿಕೊಂಡು ಅಲೆಯುವುದರಲ್ಲಿ ಅರ್ಥವಿಲ್ಲವಲ್ಲವೇ?

ಮನದೊಡೆಯಾನಾದ ಕೃಷ್ಣನ  ಹುಟ್ಟು  ಹಬ್ಬವನ್ನು  ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೆಂದು ನಾವು  ಸಂಭ್ರಮದಿಂದ ಆಚರಿಸುತ್ತೇವೆ.  ದೇವಕಿ, ವಾಸುದೇವರ ಪುತ್ರ ಕೃಷ್ಣ ಹುಟ್ಟಿನಿಂದಲೇ ತನ್ನ ಚಮತ್ಕಾರಗಳನ್ನು ತೋರಿಸಿದವ.  ಮುರಾರಿಯೆಂದರೆ  ಮಕ್ಕಳಿಂದ ಹಿರಿಯರವರೆಗೂ  ಆತ್ಮೀಯನೇ ಅಲ್ಲವೇ?   ಗಣೇಶನನ್ನೆಷ್ಟು ಆರಾಧಿಸುತ್ತೇವೆಯೋ ಮುಕುಂದನನ್ನು  ಅಷ್ಟೇ ಪ್ರೀತಿಸುತ್ತೇವೆ.    ರಾಮಾಯಣ ಮಹಾಭಾರತದ ಕಥೆಗಳನ್ನು ಬಾಲ್ಯದಲ್ಲಿ ಕೇಳಿ ಹ್ಯಾಗೆ ಆನಂದಿಸಿದೆವೋ ಹಾಗೇ  ಗಿರಧಾರಿಯ ಕಥಾನಕವನ್ನು ಇಷ್ಟ ಪಟ್ಟು ಕೇಳಿದ್ದು ನಿಜವೇ ತಾನೇ?

Advertisement

ಪ್ರತಿಯೊಂದು ಹೆಜ್ಜೆಯಲ್ಲೂ  ಕಷ್ಟಗಳನ್ನೇ  ಉಣ್ಣುತ್ತಾ , ಅವುಗಳನ್ನು ನಿಭಾಯಿಸುತ್ತಾ ಭಕ್ತರ ಕಷ್ಟಗಳಿಗೆ ಸ್ಪಂದಿಸಿ ಯದುಪತಿ ಈತ. ಹೆಜ್ಜೆ ಹೆಜ್ಜೆಗೆ ಎದುರಾಗುತ್ತಿದ್ದ ರಕ್ಕಸರ  ಸಂಹರಿಸಿದ  ಯದುವಂಶಿ . ಕೃಷ್ಣ  ಎಲ್ಲರಿಗೂ ಇಷ್ಟವಾಗುವಂತವ. ಅವನು  ದೇವರಾದರೂ ನಮ್ಮ ನಿಮ್ಮೆಲ್ಲರಂತೆ.  ಸ್ವಯಂ ಶಕ್ತಿವಂತನಾದರೂ ಎಲ್ಲೂ ಅನಗತ್ಯ ಪ್ರದರ್ಶನ ಮಾಡದೆ  ಅಗತ್ಯವಿದ್ದಾಗ ಪ್ರಯೋಗಿಸುವವ. ಯಾರು ಸಂಪೂರ್ಣ ಆತನಿಗೆ ಶರಣಾಗುತ್ತರೋ ಅವರನ್ನು ಸದಾ ಕಾಯುವವ.  ಕಷ್ಟಗಳು ಬಂದಾಗ , ನೆನೆದವರ ಮನದಲ್ಲಿ ನಾ ಬಂದೆ ಎಂದು ಅಲ್ಲಿರುವ ಸಖನೀತ.

ಬದುಕಿನ  ದುಃಖದ ಕ್ಷಣದಲ್ಲಿ ಎಲ್ಲರನ್ನು ನೆನಪಿಸಿ ಕೊಳ್ಳುತ್ತೇವೆ. ಆದರೆ ಖುಷಿಯಲ್ಲಿದ್ದಾಗಲೂ ನೆನಪಾಗುವವರು, ಮನಸ್ಸಿಗೆ  ಹತ್ತಿರದವರು. ಅಚ್ಯುತ ಕಷ್ಟದಲ್ಲೂ, ಖುಷಿಯಲ್ಲೂ  ನೆನಪಾಗುವವ. ಅವನ ಹುಟ್ಟು ಹಬ್ಬವೆಂದರೆ ಸಂಭ್ರಮವಲ್ಲವೆ?  ತಿಂಡಿಗಳೆಂದರೆ  ,ಅದರಲ್ಲೂ ಸಿಹಿಯೆಂದರೆ ಬಲು ಇಷ್ಟ. ಕೃಷ್ಣಾಷ್ಟಮಿಯಂದು  ತರತರಹದ ಉಂಡೆಗಳು , ಚಕ್ಕುಲಿಗಳು, ಉದ್ದಿನ ಕಡುಬು, ಪಾಯಸ , ರಸಾಯನ , ಹಾಲು, ಬೆಣ್ಣೆ , ಮೊಸರು ಹೀಗೆ ಬಗೆಬಗೆಯ ನೈವೇದ್ಯವನ್ನು ಸಮರ್ಪಿಸುವುದು  ಮೆಚ್ಚಿನ ಕೆಲಸ.  ಬಹಳ ನಿರೀಕ್ಷಿಸಿ ಆಚರಿಸುವ ತಿಂಡಿಗಳ ಹಬ್ಬವೇ ಅಷ್ಟಮಿ.

Advertisement

ಎಲ್ಲರಿಗೂ ಅಷ್ಟಮಿ  ಹಬ್ಬದ ಶುಭಾಶಯಗಳು

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

11 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

11 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

11 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

11 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

12 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

12 hours ago