Advertisement
MIRROR FOCUS

ಕೋಟ ಶಿವರಾಮ ಕಾರಂತರ ಜನುಮ ದಿನ | ಎಷ್ಟು ಕಲಿತರೂ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ….

Share
ಮನುಷ್ಯ ಎಷ್ಟು ಕಲಿತರೂ ,ಕಲಿಯ ಬೇಕಾದದ್ದು ಬಹಳ ಎಂದು ನಂಬಿದ ಡಾ.ಶಿವರಾಮ ಕಾರಂತರ ಬದುಕೇ ಒಂದು ಪಾಠ ಶಾಲೆಯಾಗಿದೆ

 

ಆಧುನಿಕ ಭಾರತದ ರವೀಂದ್ರನಾಥ್ ಠಾಗೋರ್ ಎಂದೇ ಖ್ಯಾತರಾದ ಕಾರಂತರ ಹುಟ್ಟುಹಬ್ಬ ಇಂದು. 10 ಒಕ್ಟೋಬರ್ 1902  ರಂದು ಸಾಲಿಗ್ರಾಮದಲ್ಲಿ ಜನಿಸಿದರು. ಭಾರತದ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ವಾದ ಕೊಡುಗೆಗಳನ್ನು ಕೊಟ್ಟವರು. 427  ಪುಸ್ತಕಗಳ ಕರ್ತೃ. ಅವುಗಳಲ್ಲಿ 47  ಕಾದಂಬರಿಗಳು. ಮೂಕಜ್ಜಿಯ ಕನಸುಗಳು ಕೃತಿ ಗೆ ಜ್ಞಾನ ಪೀಠ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರವಾಸವನ್ನು ಬಹು ಇಷ್ಟ ಪಡುತ್ತಿದ್ದ ಕಾರಂತರು ರಷ್ಯಾ ಹೊರತು ಪಡಿಸಿ ವಿಶ್ವದೆಲ್ಲೆಡೆ ಪಯಣಿಸಿದ್ದರು. ನಮ್ಮ ಸುಳ್ಯ , ಪುತ್ತೂರು ಪರಿಸರವೆಂದರೆ ವಿಶೇಷ ಪ್ರೀತಿ. ಬೆಟ್ಟದ ಜೀವ ಕಾದಂಬರಿಯನ್ನು ಕಟ್ಟ ಗೋವಿಂದಯ್ಯನವರ ಮನೆಯಲ್ಲೇ ಬರೆದರಂತೆ. ಸಾಹಿತ್ಯ ದ ಎಲ್ಲಾ ಪ್ರಾಕಾರ ಗಳಲ್ಲಿ ತಮ್ಮ ಪ್ರೌಢ್ಯ ಮೆರೆದಿದ್ದಾರೆ.

 

ಆ ದಿನವನ್ನು ನಮ್ಮಲ್ಲಿ ಯಾರೂ ಮರೆಯಲಾರರು. ಅಂದು‌ ನಮ್ಮ ಶಾರದ ನಿಲಯ ಅಯ್ಯನಕಟ್ಟೆ ಮನೆಯಲ್ಲಿ ಹಬ್ಬದ ಸಂಭ್ರಮ. ಮನೆ ಮಂದಿ , ನೆಂಟರಿಷ್ಟರು, ಊರ ಮಹನೀಯರು , ಶಾಲಾ ಶಿಕ್ಷಕರು, ಆತ್ಮೀಯರೆಲ್ಲರೂ ಸೇರಿದ್ದರು. ಹಾಗೆಂದು ಅಲ್ಲಿ ಯಾವುದೇ ಸಭೆಯಾಗಲಿ , ಸಮಾರಂಭವಾಗಲಿ ಇರಲಿಲ್ಲ. ಆದರೆ ಎಲ್ಲರೂ ಸೇರಿದ್ದಾರೆ ಎಂದರೆ ಅದಕ್ಕೊಂದು ಪ್ರಬಲ ಕಾರಣವಿತ್ತು. ಕನ್ನಡ ನಾಡಿನ ಮಹಾ ಮಾನವತಾವಾದಿ, ವಿಶ್ವ ಪ್ರೇಮಿ ಕೋಟ ಶಿವರಾಮ ಕಾರಂತರು ಖಾಸಗಿ ಭೇಟಿಗೆ ಬರುವವರಿದ್ದರು. ಆರ್. ಕೆ . ಭಾಸ್ಕರ್ ಬಾಳಿಲ ಅವರ ನೇತೃತ್ವದಲ್ಲಿ ವಿನ್ಯಾಸ ಬಾಳಿಲ ವೇದಿಕೆಯಲ್ಲಿ” ಕಾರಂತರು ಮಾತನಾಡುತ್ತಾರೆ” ಕಾರ್ಯಕ್ರಮ ವನ್ನು 1983 ರ ಡಿಸೆಂಬರ್ 3 ರಂದು ಬಾಳಿಲ ವಿದ್ಯಾಭೋಧಿನಿ ಶಿಕ್ಷಣ ಸಂಸ್ಥೆ ಯಲ್ಲಿ
ಹಮ್ಮಿಕೊಳ್ಳಲಾಗಿತ್ತು. ಆ ದಿನಗಳಲ್ಲಿ ಮಾವ ಡಾ.ಪಿ .ಎಸ್ ಗಣಪಯ್ಯರು ಖ್ಯಾತ ಲೇಖಕರು ಹಾಗೂ ವಿನ್ಯಾಸ ಬಾಳಿಲದ ಸಂಚಾಲಕರಾಗಿದ್ದರು. ಶಿವರಾಮ ಕಾರಂತರು ನಮ್ಮ ಊರಿಗೆ ಬರುತ್ತಾರೆ ಎಂಬುದೇ ಹೆಮ್ಮೆಯ ವಿಷಯ. ಅವರನ್ನು ಸತ್ಕರಿಸುವ ಅವಕಾಶವನ್ನು ಪ್ರೀತಿಯಿಂದಲೇ ನಿಭಾಯಿಸಲಾಯಿತು. ಅತ್ತೆಯವರಾದ ಪಿ..ಜಿ .ಸಾವಿತ್ರಿಯವರು ಆ ದಿನಗಳ ಸಂಭ್ರಮ ವನ್ನು ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ. ಕಬ್ಬಿನ ಹಾಲೆಂದರೆ ಕಾರಂತರಿಗೆ ಬಹಳ ಇಷ್ಟವೆಂದು ಮಾವ ಅದರ ವ್ಯವಸ್ಥೆಯನ್ನು ಮಾಡಿದ್ದರಂತೆ. ಮಧ್ಯಾಹ್ನ ಕ್ಕೆ ರಾಮಚಂದ್ರ ದೀಕ್ಷಿತರ ಹೋಳಿಗೆ ಊಟ ಅವರಿಗೆ ಬಹಳ ಮೆಚ್ಚುಗೆಯಾಯಿತೆಂದು ನೆನಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗಿನ ಮಾತುಕತೆಯನ್ನು ಮಕ್ಕಳು ಮೆಲುಕು ಹಾಕುತ್ತಾರೆ. ಅವರು ಬರೆದು ಕೊಟ್ಟ ಅಟೋಗ್ರಾಫ್ ಈಗಲೂ ಜೋಪಾನವಾಗಿದೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

3 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

9 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

20 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

1 day ago