Advertisement
MIRROR FOCUS

ಕೋಟ ಶಿವರಾಮ ಕಾರಂತರ ಜನುಮ ದಿನ | ಎಷ್ಟು ಕಲಿತರೂ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ….

Share
ಮನುಷ್ಯ ಎಷ್ಟು ಕಲಿತರೂ ,ಕಲಿಯ ಬೇಕಾದದ್ದು ಬಹಳ ಎಂದು ನಂಬಿದ ಡಾ.ಶಿವರಾಮ ಕಾರಂತರ ಬದುಕೇ ಒಂದು ಪಾಠ ಶಾಲೆಯಾಗಿದೆ

 

Advertisement
Advertisement

Advertisement

ಆಧುನಿಕ ಭಾರತದ ರವೀಂದ್ರನಾಥ್ ಠಾಗೋರ್ ಎಂದೇ ಖ್ಯಾತರಾದ ಕಾರಂತರ ಹುಟ್ಟುಹಬ್ಬ ಇಂದು. 10 ಒಕ್ಟೋಬರ್ 1902  ರಂದು ಸಾಲಿಗ್ರಾಮದಲ್ಲಿ ಜನಿಸಿದರು. ಭಾರತದ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ವಾದ ಕೊಡುಗೆಗಳನ್ನು ಕೊಟ್ಟವರು. 427  ಪುಸ್ತಕಗಳ ಕರ್ತೃ. ಅವುಗಳಲ್ಲಿ 47  ಕಾದಂಬರಿಗಳು. ಮೂಕಜ್ಜಿಯ ಕನಸುಗಳು ಕೃತಿ ಗೆ ಜ್ಞಾನ ಪೀಠ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರವಾಸವನ್ನು ಬಹು ಇಷ್ಟ ಪಡುತ್ತಿದ್ದ ಕಾರಂತರು ರಷ್ಯಾ ಹೊರತು ಪಡಿಸಿ ವಿಶ್ವದೆಲ್ಲೆಡೆ ಪಯಣಿಸಿದ್ದರು. ನಮ್ಮ ಸುಳ್ಯ , ಪುತ್ತೂರು ಪರಿಸರವೆಂದರೆ ವಿಶೇಷ ಪ್ರೀತಿ. ಬೆಟ್ಟದ ಜೀವ ಕಾದಂಬರಿಯನ್ನು ಕಟ್ಟ ಗೋವಿಂದಯ್ಯನವರ ಮನೆಯಲ್ಲೇ ಬರೆದರಂತೆ. ಸಾಹಿತ್ಯ ದ ಎಲ್ಲಾ ಪ್ರಾಕಾರ ಗಳಲ್ಲಿ ತಮ್ಮ ಪ್ರೌಢ್ಯ ಮೆರೆದಿದ್ದಾರೆ.

 

Advertisement

ಆ ದಿನವನ್ನು ನಮ್ಮಲ್ಲಿ ಯಾರೂ ಮರೆಯಲಾರರು. ಅಂದು‌ ನಮ್ಮ ಶಾರದ ನಿಲಯ ಅಯ್ಯನಕಟ್ಟೆ ಮನೆಯಲ್ಲಿ ಹಬ್ಬದ ಸಂಭ್ರಮ. ಮನೆ ಮಂದಿ , ನೆಂಟರಿಷ್ಟರು, ಊರ ಮಹನೀಯರು , ಶಾಲಾ ಶಿಕ್ಷಕರು, ಆತ್ಮೀಯರೆಲ್ಲರೂ ಸೇರಿದ್ದರು. ಹಾಗೆಂದು ಅಲ್ಲಿ ಯಾವುದೇ ಸಭೆಯಾಗಲಿ , ಸಮಾರಂಭವಾಗಲಿ ಇರಲಿಲ್ಲ. ಆದರೆ ಎಲ್ಲರೂ ಸೇರಿದ್ದಾರೆ ಎಂದರೆ ಅದಕ್ಕೊಂದು ಪ್ರಬಲ ಕಾರಣವಿತ್ತು. ಕನ್ನಡ ನಾಡಿನ ಮಹಾ ಮಾನವತಾವಾದಿ, ವಿಶ್ವ ಪ್ರೇಮಿ ಕೋಟ ಶಿವರಾಮ ಕಾರಂತರು ಖಾಸಗಿ ಭೇಟಿಗೆ ಬರುವವರಿದ್ದರು. ಆರ್. ಕೆ . ಭಾಸ್ಕರ್ ಬಾಳಿಲ ಅವರ ನೇತೃತ್ವದಲ್ಲಿ ವಿನ್ಯಾಸ ಬಾಳಿಲ ವೇದಿಕೆಯಲ್ಲಿ” ಕಾರಂತರು ಮಾತನಾಡುತ್ತಾರೆ” ಕಾರ್ಯಕ್ರಮ ವನ್ನು 1983 ರ ಡಿಸೆಂಬರ್ 3 ರಂದು ಬಾಳಿಲ ವಿದ್ಯಾಭೋಧಿನಿ ಶಿಕ್ಷಣ ಸಂಸ್ಥೆ ಯಲ್ಲಿ
ಹಮ್ಮಿಕೊಳ್ಳಲಾಗಿತ್ತು. ಆ ದಿನಗಳಲ್ಲಿ ಮಾವ ಡಾ.ಪಿ .ಎಸ್ ಗಣಪಯ್ಯರು ಖ್ಯಾತ ಲೇಖಕರು ಹಾಗೂ ವಿನ್ಯಾಸ ಬಾಳಿಲದ ಸಂಚಾಲಕರಾಗಿದ್ದರು. ಶಿವರಾಮ ಕಾರಂತರು ನಮ್ಮ ಊರಿಗೆ ಬರುತ್ತಾರೆ ಎಂಬುದೇ ಹೆಮ್ಮೆಯ ವಿಷಯ. ಅವರನ್ನು ಸತ್ಕರಿಸುವ ಅವಕಾಶವನ್ನು ಪ್ರೀತಿಯಿಂದಲೇ ನಿಭಾಯಿಸಲಾಯಿತು. ಅತ್ತೆಯವರಾದ ಪಿ..ಜಿ .ಸಾವಿತ್ರಿಯವರು ಆ ದಿನಗಳ ಸಂಭ್ರಮ ವನ್ನು ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ. ಕಬ್ಬಿನ ಹಾಲೆಂದರೆ ಕಾರಂತರಿಗೆ ಬಹಳ ಇಷ್ಟವೆಂದು ಮಾವ ಅದರ ವ್ಯವಸ್ಥೆಯನ್ನು ಮಾಡಿದ್ದರಂತೆ. ಮಧ್ಯಾಹ್ನ ಕ್ಕೆ ರಾಮಚಂದ್ರ ದೀಕ್ಷಿತರ ಹೋಳಿಗೆ ಊಟ ಅವರಿಗೆ ಬಹಳ ಮೆಚ್ಚುಗೆಯಾಯಿತೆಂದು ನೆನಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗಿನ ಮಾತುಕತೆಯನ್ನು ಮಕ್ಕಳು ಮೆಲುಕು ಹಾಕುತ್ತಾರೆ. ಅವರು ಬರೆದು ಕೊಟ್ಟ ಅಟೋಗ್ರಾಫ್ ಈಗಲೂ ಜೋಪಾನವಾಗಿದೆ.

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

6 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

1 day ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

2 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

2 days ago