ಸುದ್ದಿಗಳು

ಕೃಷಿಕೋದ್ಯಮ | ಕೃಷಿಯಲ್ಲಿ ಬ್ಯುಸಿನೆಸ್‌ ಹೇಗೆ ಮಾಡಬಹುದು ?| ಉಪಯುಕ್ತ ಕಾರ್ಯಕ್ರಮದ ಮೂಲಕ ಕೃಷಿಕರಿಗೆ ಸಂದೇಶ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮುಳಿಯ ಜ್ಯುವೆಲ್ಸ್‌ ನೇತೃತ್ವದಲ್ಲಿ ಕೃಷಿಕೋದ್ಯಮ ಕಾರ್ಯಾಗಾರ ನಡೆಯಿತು. ಕೃಷಿಗೆ ಉದ್ಯಮದ ರೂಪ ನೀಡುವುದು ಹೇಗೆ ಎಂಬುದರ ಬಗ್ಗೆ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಂವಾದ ನಡೆಸಲಾಯಿತು. ಈ ಕಾರ್ಯಕ್ರಮದ ಬಗ್ಗೆ ಸಿಪಿಸಿಆರ್‌ಐ ತಾಂತ್ರಿಕ ಅಧಿಕಾರಿ ಮುರಳಿಕೃಷ್ಣ ಅವರು ಇಲ್ಲಿ ಬರೆದಿದ್ದಾರೆ….

ನಮ್ಮ ಕೃಷಿಯಲ್ಲಿ ಬಿಸಿನೆಸ್ಸಿಗೆ (Agri business) ಅನುಯೋಜ್ಯವಾದ ದೃಷ್ಟಿಕೋನದ ಕೊರತೆ ಇದೆ. ನಮ್ಮ ದೀರ್ಘಾವಧಿ ಬೆಳೆಗಳು ಉದ್ಯಮಶೀಲತೆಗೆ ಅತ್ಯಂತ ಸಮರ್ಪಕವಾಗಿವೆ. ಅದರ ಮಧ್ಯೆ ನಾವು ಅನಾವಶ್ಯಕವಾಗಿ ಮಾರುಕಟ್ಟೆಗೆ ಅವಶ್ಯಕತೆವಲ್ಲದ ತಳಿಗಳ ಬಗ್ಗೆ ಕನ್ಫ್ಯೂಸ್ ಆಗಬಾರದು. ಅದೇ ರೀತಿ ಎಡೆ ಬೆಳೆಗಳ ಬಗ್ಗೆಯೂ ಕನ್ಫ್ಯೂಸ್ ಆಗಬಾರದು.

Advertisement
ಅಡಿಕೆಯ ಬೆಳೆಯೊಂದಿಗೆ ಕೇವಲ ಒಂದೆರಡು ಎಡೆ ಬೆಳೆಗಳಿಗೆ ಮಹತ್ವ ನೀಡಿ ಅದರ ಉತ್ಪನ್ನಗಳ ತಯಾರಿಸಿ ಗ್ರಾಹಕರಿಗೆ ತಲುಪಿಸಬೇಕು. ಉದಾಹರಣೆಗೆ ಹಲಸು, ಬಾಳೆ ಕೊಕ್ಕೋ, ಮರೆಗೆಣಸು, ಜೇನು ಇತ್ಯಾದಿ.. ಅವುಗಳ ವ್ಯಾಲ್ಯೂ ಚೈನ್ ನ ಜೊತೆಗೆ ಅಡಿಕೆಯನ್ನು ಕೂಡ ಮಾರುಕಟ್ಟೆಗೆ ಪುಷ್ ಮಾಡಬೇಕು. ಅಡಿಕೆಯ ತುಣುಕುಗಳನ್ನು ಚಿಪ್ಸ್ ರೂಪದಲ್ಲಿ ಗ್ರಾಹಕರಿಗೆ ನೇರ ಉಪಯೋಗಕ್ಕಾಗಿ ಉತ್ಪನ್ನ ತಯಾರಿಸಿ ನೇರ ಮಾರುಕಟ್ಟೆಗೆ ಪರಿಚಯಿಸಬಹುದು. ಇದನ್ನು ಈಗಾಗಲೇ ನಡೆಯುತ್ತಿರುವ ಆಮೇಜಾನ್ ನಂತಹ ಇ-ಕಾಮರ್ಸ್ ನ ಜೊತೆಗೆ ಅಥವಾ ನಮ್ಮದೇ ಬ್ರಾಂಡಿಂಗಿನ ಮೂಲಕ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ನಲ್ಲಿ ಮಾರಾಟವನ್ನು ಮಾಡಬಹುದು.

ನಮ್ಮದೇ ಒಂದೊಂದು ಕ್ಲಸ್ಟರ್ ರೂಪಿಕರಣ ಮಾಡಿ ಅದರ ಉತ್ಪನ್ನಗಳನ್ನು ಉತ್ತರ ಭಾರತದ ಗ್ರಾಹಕರ ಕ್ಲಸ್ಟರ್ಗೆ ತಲುಪಿಸುವ ಪ್ರಯತ್ನ ಮಾಡಬಹುದು. ಹವಾಮಾನ ವೈಪರಿತ್ಯ ಹಾಗೂ ಕಾರ್ಮಿಕರ ವೆಚ್ಚದಿಂದಲಾಗಿ ಅಡಿಕೆಯ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. 2016 ರಲ್ಲಿ 200 ರೂಪಾಯಿ ಉತ್ಪಾದನೆ ವೆಚ್ಚ ಇದ್ದ ಅಡಿಕೆಗೆ ಈಗ 300-350 ರೂಪಾಯಿ ವೆಚ್ಚಕ್ಕೆ ತಲುಪಿದೆ. ಉದ್ಯಮಶೀಲತೆ ಹಾಗೂ ಮೌಲ್ಯವರ್ಧನೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಆದಾಯಕ್ಕೂ ಸ್ಥಿರ ಮಾರುಕಟ್ಟೆಗೂ ಪೂರಕವಾಗುವಲ್ಲದು.

ಡಾ ವೇಣುಗೋಪಾಲ ಕಳೆಯತ್ತೋಡಿಯವರು ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು. ಶ್ರೀಹರಿ ಭಟ್ ಇವರು ತಂತ್ರಜ್ಞಾನದ ಬಳಕೆಯಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ರೋಪ್ ವೆ ಯಂತಹ ಪರಿಹಾರದ ಮಾರ್ಗವನ್ನು ಸೂಚಿಸಿದರು. ಕಸ್ತೂರಿ ಅಡ್ಯಂತಾಯ 30 ದನದಿಂದ 25,000 ರಿಂದ 30,000 ಆದಾಯ ಪಡೆಯುವ ಬಗ್ಗೆ ತಿಳಿಸಿದರು.

Advertisement
ವಿಶ್ವೇಶ್ವರ ಭಟ್ ಬಂಗಾರಡ್ಕ ಇವರು ಸರ್ಕಾರ ಯಾವ ರೀತಿ ಸಣ್ಣ ಹಿಡುವಳಿದಾರರ ಹಿತವನ್ನು ಗಮನಿಸುತ್ತದೆ ಎಂಬುದನ್ನು ತಿಳಿಸಿದರು. ಯಾವ ರೀತಿ ವೆಚ್ಚಗಳನ್ನು ನಿಯಂತ್ರಿಸಬಹುದು ಹಾಗೂ ನಷ್ಟದ ಮಾರ್ಗಗಳನ್ನು ತಡೆಯಬಹುದು ಎಂದು ತಿಳಿಸಿದರು. ಸುರೇಶ್ ಗೌಡ ಅವರು ತಮ್ಮ ಬಸಳೆ ಕೃಷಿಯ ಯಶೋಗಾಥೆಯನ್ನು ತಿಳಿಸಿದರು.ಗೋವಿಂದ ಭಟ್ ಮಾಣಿಲ ಇವರು ತಮ್ಮ 22 ಸುರಂಗಗಳ ಮೂಲಕ ಪಡೆಯುವ ನೀರಿನ ನೀರಾವರಿ ಸೌಲಭ್ಯವನ್ನು ತಿಳಿಸಿದರು.
ಅಶೋಕ ಕುಮಾರ್ ಕರಿಕಳ ಇವರು ಗ್ರಾಹಕರ ಆಸಕ್ತಿಗನುಸಾರವಾಗಿ ಉತ್ಪಾದನೆ ಮಾಡುವ ಬಗ್ಗೆ ಹಾಗೂ ಮುಂದಿನ 25 ವರ್ಷಗಳಲ್ಲಿ ಏಷ್ಯಾದ ದೇಶಗಳು ಪ್ರಬಲ ಗ್ರಾಹಕ ದೇಶಗಳಾಗಿ ಮಾರ್ಪಾಡಾಗುವ ಬಗ್ಗೆ ತಿಳಿಸಿದರು. ಡಾ ಹರಿಕೃಷ್ಣ ಪಾಣಾಜೆ ಇವರು ಆಯುರ್ವೇದದಲ್ಲಿ ಗಿಡಮೂಲಿಕೆಗಳ ಅವಶ್ಯಕತೆ ಹಾಗೂ ಬೃಂಗರಾಜ, ನೆಲನೆಲ್ಲಿ, ತುಳಸಿ, ಚಿತ್ರಮೂಲ, ಅಮೃತಬಳ್ಳಿ, ಮುಂತಾದ ಗಿಡಗಳ ಕೃಷಿಯಿಂದ ಉದ್ಯಮಶೀಲತೆ ಸಾಧ್ಯ ಎಂದು ತಿಳಿಸಿದರು.ವೇಣುಗೋಪಾಲ ಮುಂಡೂರು ಇವರು ಸ್ಥಳೀಯ ಅವಶ್ಯಕತೆಗೆ ಅನುಸಾರವಾಗಿ ಉಪಯುಕ್ತ ಗಿಡಗಳ ಉತ್ಪಾದನೆ ಮಾಡುತ್ತಿರುವುದಾಗಿ ತಿಳಿಸಿದರು.ಕೃಷ್ಣಮೋಹನ ಇವರು ಇನ್ಸ್ಟಾ ಬಾಸ್ಕೆಟ್ ಮಾದರಿಯನ್ನು ತಿಳಿಸಿದರು. ಇಲ್ಲಿ ಯಾವ ರೀತಿ ಗ್ರಾಹಕರೇ ಮಾಲಕರಾಗಿರುತ್ತಾರೆ. ಅದೇ ರೀತಿ ಸ್ಥಳೀಯವಾಗಿ ಹೊಸ ಹೊಸ ಮಳಿಗೆಗಳನ್ನು ಮಾಡಲು ನೀಡುವ ಪ್ರೋತ್ಸಾಹವನ್ನು ತಿಳಿಸಿದರು.ಕೇಶವ ಪ್ರಸಾದ ಮುಳಿಯ ಇವರು ಭತ್ತದ ಕೃಷಿಯ ಯಶೋಗಾಥೆ ಹಾಗೂ ಸುಮಾರು 10 ಸಾವಿರ ರೂಪಾಯಿ ನಿವ್ವಳ ಆದಾಯ ಪಡೆದುವುದನ್ನು ತಿಳಿಸಿದರು.
ಮಹೇಶ್ ಪುಚ್ಚಪ್ಪಾಡಿ ಇವರು ಸಾಮಾಜಿಕ ಜಾಲತಾಣಗಳ ಮಹತ್ವ ಹಾಗೂ ಕೃಷಿ ಕರು ಇದರಲ್ಲಿ ಕೈಜೋಡಿಸಬೇಕಾದ ಅವಶ್ಯಕತೆಯನ್ನು ತಿಳಿಸಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ

ಭಾರತದಾದ್ಯಂತ ಮುಂಗಾರು ಸಕ್ರಿಯವಾಗಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಸದ್ಯ ಸಾಮಾನ್ಯ…

7 hours ago

ಬೆಳೆಗೆ ಔಷಧಿ ಸಿಂಪಡಣೆಯ ವೇಳೆ ಬಳಸುವ ಸಿಲಿಕಾನ್ ಸ್ಪ್ರೆಡರ್ ಗುಣಧರ್ಮ ಏನು..?

ಬೆಳೆಗಳಿಗೆ ಔಷಧಿ ಸಿಂಪಡಣೆ ವೇಳೆ ಹೆಚ್ಚಿನ ದಕ್ಷತೆ ಹಾಗೂ ಪರಿಣಾಮಕಾರಿಯಾಗುವ ಉದ್ದೇಶದಿಂದ ವಿವಿಧ…

7 hours ago

ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ

ಆರೋಗ್ಯವು ಜೀವನದ ಪ್ರಮುಖ ಅಂಗವಾಗಿದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನವು…

7 hours ago

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…

17 hours ago

ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ

ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…

17 hours ago

ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…

17 hours ago