ಸಾಧನೆಗೆ ಒಲಿದ ಕಲಾದೇವತೆ | ಓದುವುದಿಲ್ಲ , ಕೇಳುತ್ತಲೇ 250 ಹಾಡು ಕಂಠಪಾಠ ಮಾಡಿರುವ “ಕಿಶೋರ” |

Share

ಈ ಬಾಲಕ ಓದುವುದಿಲ್ಲ, ಕೇಳುತ್ತಲೇ ಹಾಡು ಕಲಿತು ಕಂಠಪಾಠ ಮಾಡಿ  250 ಹಾಡುಗಳನ್ನು  ಎಲ್ಲಿ, ಯಾವಾಗ ಬೇಕಾದರೂ ಹಾಡಬಲ್ಲರು. ಸಂಗೀತದಲ್ಲಿ  ಈಗ ಉನ್ನತ ಕಲಿಕೆಯಲ್ಲಿದ್ದಾರೆ. ಸ್ವತಂತ್ರವಾಗಿ ಕೀಬೋರ್ಡ್‌ ನುಡಿಸುತ್ತಾರೆ. ಸುಮಾರು 50 ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಸುಶ್ರಾವ್ಯವಾಗಿ ಹಾಡುತ್ತಾರೆ. ಆದರೆ, ಈ ಸಾಧಕನಿಗೆ ಕಣ್ಣು ಕಾಣಿಸದು….!, ಭಗವಂತ ಸಾಧನೆಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಈ ಬಾಲಕ ಗಡಿನಾಡು ಜಿಲ್ಲೆ ಕಾಸರಗೋಡಿನ ಬದಿಯಡ್ಕ ಬಳಿಯ ಪೆರ್ಮುಖದ ಕೃಷ್ಣಕಿಶೋರ್.

Advertisement
Advertisement
ಸಾಧನೆಗೆ ಬೇಕಾದ್ದು ಛಲ ಹಾಗೂ ಪರಿಶ್ರಮ, ಹಾಗಿದ್ದರೇ ಭಗವಂತ ಒಲಿಯುತ್ತಾನೆ. ಇಲ್ಲೂ ಹಾಗೆಯೇ. ಪೆರ್ಮುಖದ ಕೃಷ್ಣಕಿಶೋರ ಅವರಿಗೆ ಈಗ  24  ವರ್ಷ. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡಿದ್ದರು. ತಿಂಗಳಾಗುವ ಮೊದಲೇ ಜನಿಸಿದ ಕೃಷ್ಣ ಕಿಶೋರಗೆ ದೃಷ್ಟಿ ಕಾಣಿಸದಾಗಿತ್ತು. ಶಾಲೆಗೆ ತೆರಳುವುದು ಕಷ್ಟವಾಗಿತ್ತು. ಆದರೆ 7  ನೇ ತರಗತಿ ವರೆಗೆ ಅಂಧರ ಶಾಲೆಗೆ ತೆರಳಿ ಬ್ರೈಲ್‌ ಲಿಪಿಯಲ್ಲಿ  ಕಲಿತು ಆ ಬಳಿಕ ಸಾಮಾನ್ಯ ಶಾಲೆಗೆ ತೆರಳಿ ಪಾಠವನ್ನು  ಕೇಳಿ, ಬೇರೆಯವರಿಂದ ಕೇಳಿಸಿಕೊಂಡು ಬೇರೆಯವರ ಮೂಲಕ ಪರೀಕ್ಷೆ ಬರೆಯುತ್ತಾ ಪಿಯುಸಿವರೆಗೆ ‌ ಎಡನೀರು ಮಠದ ಕಾಲೇಜಿನಲ್ಲಿ  ವ್ಯಾಸಾಂಗ ಮಾಡಿದ್ದಾರೆ. ಇದರ ಜೊತೆಗೇ ಸಂಗೀತವನ್ನೂ ಅಭ್ಯಾಸ ಮಾಡುತ್ತಾ ಹಾಡುಗಳನ್ನು ಕಂಠಪಾಠ ಮಾಡುತ್ತಾ ಸಂಗೀತ ಕ್ಷೇತ್ರದಲ್ಲಿ  ಸಾಧನೆಗೆ ತೊಡಗಿಸಿದರು.
ಆರಂಭದಲ್ಲಿ  ಕುದುಮಾರು ವೆಂಕಟ್ರಾಮ್‌ ಅವರಿಂದ ಮನೆಯಲ್ಲಿಯೇ ಪ್ರಾರಂಭಿಸಿ ಸಂಗೀತ ಕಲಿತು ಬಳಿಕ ಶಕುಂತಲಾ ಕೃಷ್ಣ ಭಟ್‌ ಅವರಿಂದ ಸಂಗೀತ ಪಾಠ ಕಲಿತು ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿ ಬಳಿಕ ವೆಳ್ಳಿಕ್ಕೋತ್‌ ವಿಷ್ಣು ಭಟ್‌, , ಗೀತಾ ಸಾರಡ್ಕ ಅವರ ಜೊತೆ ಸೀನಿಯರ್‌ ವ್ಯಾಸಾಂಗ ಮಾಡಿ  ನಂತರ ಲಲಿತಾ ಬರಿನಾಥ್‌ ಅವರಿಂದ ಕಲಿತು ಸದ್ಯ ವಿದ್ವಾನ್‌ ಕಾಂಚನ ಈಶ್ವರ ಭಟ್‌  ಅವರ ಜೊತೆ ವಿದ್ವತ್‌ ಪಾಠವನ್ನು  ಕಲಿಯುತ್ತಿರುವ ಕೃಷ್ಣ ಕಿಶೋರ್ ಈಗಾಗಲೇ 250 ಹಾಡುಗಳನ್ನು ಕಂಠಪಾಠ ಮಾಡಿದ್ದಾರೆ.
Advertisement
ಹಾಡುಗಳನ್ನು ಮೊಬೈಲ್‌ ಮೂಲಕ ಕೇಳುತ್ತಲೇ ಕಂಠಪಾಠ ಮಾಡುವ ಕೃಷ್ಣ ಕಿಶೋರ್‌ ಒಂದು ವಾರದಲ್ಲಿ  ಹಾಡನ್ನು ಕಂಠಪಾಠ ಮಾಡುತ್ತಾರೆ. ಒಮ್ಮೆ ಕಂಠಪಾಠ ಮಾಡಿದ ಹಾಡನ್ನು  ನೆನಪಲ್ಲಿ ಅಚ್ಚೊತ್ತಿದ ಬಳಿಕ ಆಗಾಗ ಹೇಳುತ್ತಲೇ ನೆನಪಿಟ್ಟುಕೊಳ್ಳುತ್ತಾರೆ. ಸುಮಾರು 8 ನೇ ವರ್ಷ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಮಾಡುತ್ತಿದ್ದಾಗ ಕೆಲವು ವರ್ಷದ ಬಳಿಕ ಧ್ವನಿಯ ಕಾರಣದಿಂದ ಸಂಗೀತ ಹಾಡಲು ಕಷ್ಟವಾದಾಗ ಕೀಬೋರ್ಡ್‌ ನುಡಿಸಲು ಸ್ವತ: ಆರಂಭಿಸಿದರು. ಹಾಡು ಕೇಳುತ್ತಾ, ಕೀಬೋರ್ಡ್‌ ನುಡಿಸುತ್ತಾ ಅಭ್ಯಾಸ ಮಾಡಿ, ಈಗ ಕೀಬೋರ್ಡ್‌ ಕೂಡಾ ನುಡಿಸುತ್ತಾರೆ.  ಈಗಾಗಲೇ ಸುಮಾರು  50 ಕ್ಕೂ ಅಧಿಕ ಸಂಗೀತ ಕಛೇರಿಯನ್ನೂ ನಡೆಸಿಕೊಟ್ಟಿದ್ದಾರೆ.
ಸದ್ಯ ಹಾಡು ಕಲಿಯುತ್ತಾ ಕಲಾರಾಧನೆಯನ್ನು, ಅಧ್ಯಯನವನ್ನೂ ಮುಂದುವರಿಸಿರುವ ಕೃಷ್ಣ ಕಿಶೋರ್‌ ಅವರು ದಿವಂಗತ ರಾಮ ಭಟ್‌ ಪೆರ್ಮುಖ ಹಾಗೂ ಸತ್ಯಭಾಮಾ ಅವರ ಪುತ್ರ. ಬಡಿಯಡ್ಕದ ಪೆರ್ಮುಖದಲ್ಲಿ ಕೃಷಿ ಹೊಂದಿರುವ ಇವರು  ಸದ್ಯ ತಾಯಿ ಹಾಗೂ ಸಹೋದರಿಯ ಜೊತೆ ಸಂಗೀತಾರಾಧನೆಯನ್ನು  ಮಾಡುತ್ತಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ  ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…

2 hours ago

ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು…

4 hours ago

ಜೂನ್ 22 ರಂದು 6 ಗ್ರಹಗಳ ಮಹಾಗೋಚಾರ | 12 ರಾಶಿಗಳ ಮೇಲೆ ಹೇಗಿರಲಿದೆ ಪ್ರಭಾವ..?

ಜೂನ್ 22, 2025 ರಂದು  6 ಗ್ರಹಗಳ ಮಹಾಗೋಚಾರ, ಸೂರ್ಯ, ಚಂದ್ರ, ಬುಧ,…

4 hours ago

ಹೊಸರುಚಿ | ಹಲಸಿನ ಕಾಯಿ ಐಸ್ ಕ್ರೀಮ್

ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಬೇಕು. ಹಲಸಿನ ಹಣ್ಣಿನ…

5 hours ago

ಸಸ್ಯ ಪರಿಚಯ | ಕರ್ಲೆಂಕಿ

ಅಚ್ಚ ಹಸುರಿನ ಉರುಟುರುಟಾದ ರೂಪಾಯಿ ನಾಣ್ಯದಷ್ಟು ಗಾತ್ರದ ಎಲೆಗಳ ದಂಟುಗಳನ್ನು ಹೊಂದಿರುವ ಗಿಡ…

13 hours ago

ಹವಾಮಾನ ಮಾಹಿತಿ | ಈಗ ಎಲ್ಲೆಲ್ಲಾ ಭರ್ಜರಿ ಮಳೆ..? ಎಲ್ಲಿ ಕುಸಿತ..?

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ಸುರಿದ ಮಳೆ ಈಗ ಸ್ವಲ್ಪ ವಿರಾಮ…

14 hours ago