Advertisement
ವೈರಲ್ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಮಲಗಿದ ಭಕ್ತಾದಿಗಳು…! | ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿ ಈ ಅವ್ಯವಸ್ಥೆಯೇ ? | ಮುಜರಾಯಿ ಇಲಾಖೆ ಮೌನ ಏಕೆ ? |

Share

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತಾದಿಗಳು ರಥಬೀದಿಯಲ್ಲಿ, ರಸ್ತೆಯ ಫುಟ್‌ ಪಾತ್‌ ನಲ್ಲಿ ಮಲಗಿದರು. ಇಂತಹದ್ದೊಂದು ವಿಷಾದ ಸಂಗತಿ ಸೋಮವಾರ ರಾತ್ರಿ ನಡೆದಿದೆ. ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿನ ಈ ವ್ಯವಸ್ಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ, ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಈ ಬಗ್ಗೆ ಗಮನಿಸಬೇಕಾಗಿದೆ. ಎರಡು ವಾರದ ಹಿಂದೆಯೂ ಇಂತಹದೇ ಸ್ಥಿತಿ ನಿರ್ಮಾಣವಾಗಿತ್ತು.

ರಾಜ್ಯದ ನಂಬರ್‌ ವನ್‌ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಕಳೆದ ಎರಡು ವಾರಗಳಿಂದ ಭಕ್ತಾದಿಗಳು ಅವ್ಯವಸ್ಥೆಯನ್ನು ಅನುಭವಿಸುವಂತಾಗಿದೆ. ಕಳೆದ ವಾರ ಭಕ್ತರ ಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ವಸತಿಗೆ ವ್ಯವಸ್ಥೆ ಇಲ್ಲದೆ ರಸ್ತೆ ಬದಿ, ರಥಬೀದಿಯಲ್ಲಿ ಭಕ್ತಾದಿಗಳು ಮಲಗಿದ್ದು, ಇದೀಗ ಸೋಮವಾರ ರಾತ್ರಿಯೂ ಅಂತಹದೇ ಸ್ಥಿತಿ ಕಂಡುಬಂದಿದೆ. ವಸತಿಗೆ ವ್ಯವಸ್ಥೆ ಇಲ್ಲದೆ ಭಕ್ತಾದಿಗಳು ರಥಬೀದಿಯಲ್ಲಿ  ಹಾಗೂ ರಸ್ತೆ ಬದಿ ಮಲಗಿದರು. ಈ ಬಾರಿ ದೇವಸ್ಥಾನದ ವತಿಯಿಂದ ವಸತಿಗೆ ಡೈನಿಂಗ್‌ ಹಾಲ್‌ ಹಾಗೂ ಇತರ ಕಡೆ ವ್ಯವಸ್ಥೆ ಮಾಡಿದ್ದರೂ ಭಕ್ತರ ಸಂದಣಿ ಹೆಚ್ಚಾದ್ದರಿಂದ ಅನೇಕ ಭಕ್ತರು ಕೊಠಡಿ ಸಿಗದೆ ಪರದಾಟ ನಡೆಸಿದರು. ಈಗ ಕೊಠಡಿಗಿಂತಲೂ ಶೌಚಾಲಯದ ವ್ಯವಸ್ಥೆಗೆ ಸಂಕಷ್ಟವಾಗಿದೆ. ಸ್ನಾನಕ್ಕೆ ಕುಮಾರಧಾರಾ ನದಿಗೆ ತೆರಳಿದರೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಗೆ ಪರದಾಟವಾಗಿದೆ. ಅಭಿವೃದ್ಧಿಯ ಪಥದಲ್ಲಿ ಕುಕ್ಕೆಯು ಸಾಗುತ್ತಿದ್ದರೂ ಒಮ್ಮೆಲೇ ಭಕ್ತರ ಸಂಖ್ಯೆ ಅಧಿಕವಾದರೂ ತಕ್ಷಣ ವ್ಯವಸ್ಥೆಗೆ ರಾಜ್ಯದ ನಂಬರ್‌ ವನ್‌ ದೇವಸ್ಥಾನದ ಆಡಳಿತಕ್ಕೆ , ಅಧಿಕಾರಿಗಳಿಗೆ ಏಕೆ ಸಾಧ್ಯವಿಲ್ಲ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ. ವಸತಿಗೆ ತಕ್ಷಣವೇ ಶಾಮಿಯಾನದ ವ್ಯವಸ್ಥೆ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಷ್ಟವೇ ? ಎಂಬುದೂ ಭಕ್ತರ ಪ್ರಶ್ನೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್

ಜುಲೈ 9ರಿಂದ 11ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ…

26 minutes ago

E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?

E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…

5 hours ago

ಹವಾಮಾನ ವರದಿ | 06-07-2026 | ಕರ್ನಾಟಕದಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸೂಚನೆ | ಜುಲೈ 10ರಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಸಾಧ್ಯತೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜುಲೈ…

6 hours ago

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

1 day ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

1 day ago