ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತಾದಿಗಳು ರಥಬೀದಿಯಲ್ಲಿ, ರಸ್ತೆಯ ಫುಟ್ ಪಾತ್ ನಲ್ಲಿ ಮಲಗಿದರು. ಇಂತಹದ್ದೊಂದು ವಿಷಾದ ಸಂಗತಿ ಸೋಮವಾರ ರಾತ್ರಿ ನಡೆದಿದೆ. ರಾಜ್ಯದ ನಂಬರ್ ವನ್ ದೇವಸ್ಥಾನದಲ್ಲಿನ ಈ ವ್ಯವಸ್ಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ, ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಈ ಬಗ್ಗೆ ಗಮನಿಸಬೇಕಾಗಿದೆ. ಎರಡು ವಾರದ ಹಿಂದೆಯೂ ಇಂತಹದೇ ಸ್ಥಿತಿ ನಿರ್ಮಾಣವಾಗಿತ್ತು.
ರಾಜ್ಯದ ನಂಬರ್ ವನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಕಳೆದ ಎರಡು ವಾರಗಳಿಂದ ಭಕ್ತಾದಿಗಳು ಅವ್ಯವಸ್ಥೆಯನ್ನು ಅನುಭವಿಸುವಂತಾಗಿದೆ. ಕಳೆದ ವಾರ ಭಕ್ತರ ಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ವಸತಿಗೆ ವ್ಯವಸ್ಥೆ ಇಲ್ಲದೆ ರಸ್ತೆ ಬದಿ, ರಥಬೀದಿಯಲ್ಲಿ ಭಕ್ತಾದಿಗಳು ಮಲಗಿದ್ದು, ಇದೀಗ ಸೋಮವಾರ ರಾತ್ರಿಯೂ ಅಂತಹದೇ ಸ್ಥಿತಿ ಕಂಡುಬಂದಿದೆ. ವಸತಿಗೆ ವ್ಯವಸ್ಥೆ ಇಲ್ಲದೆ ಭಕ್ತಾದಿಗಳು ರಥಬೀದಿಯಲ್ಲಿ ಹಾಗೂ ರಸ್ತೆ ಬದಿ ಮಲಗಿದರು. ಈ ಬಾರಿ ದೇವಸ್ಥಾನದ ವತಿಯಿಂದ ವಸತಿಗೆ ಡೈನಿಂಗ್ ಹಾಲ್ ಹಾಗೂ ಇತರ ಕಡೆ ವ್ಯವಸ್ಥೆ ಮಾಡಿದ್ದರೂ ಭಕ್ತರ ಸಂದಣಿ ಹೆಚ್ಚಾದ್ದರಿಂದ ಅನೇಕ ಭಕ್ತರು ಕೊಠಡಿ ಸಿಗದೆ ಪರದಾಟ ನಡೆಸಿದರು. ಈಗ ಕೊಠಡಿಗಿಂತಲೂ ಶೌಚಾಲಯದ ವ್ಯವಸ್ಥೆಗೆ ಸಂಕಷ್ಟವಾಗಿದೆ. ಸ್ನಾನಕ್ಕೆ ಕುಮಾರಧಾರಾ ನದಿಗೆ ತೆರಳಿದರೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಗೆ ಪರದಾಟವಾಗಿದೆ. ಅಭಿವೃದ್ಧಿಯ ಪಥದಲ್ಲಿ ಕುಕ್ಕೆಯು ಸಾಗುತ್ತಿದ್ದರೂ ಒಮ್ಮೆಲೇ ಭಕ್ತರ ಸಂಖ್ಯೆ ಅಧಿಕವಾದರೂ ತಕ್ಷಣ ವ್ಯವಸ್ಥೆಗೆ ರಾಜ್ಯದ ನಂಬರ್ ವನ್ ದೇವಸ್ಥಾನದ ಆಡಳಿತಕ್ಕೆ , ಅಧಿಕಾರಿಗಳಿಗೆ ಏಕೆ ಸಾಧ್ಯವಿಲ್ಲ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ. ವಸತಿಗೆ ತಕ್ಷಣವೇ ಶಾಮಿಯಾನದ ವ್ಯವಸ್ಥೆ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಷ್ಟವೇ ? ಎಂಬುದೂ ಭಕ್ತರ ಪ್ರಶ್ನೆ.
ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…
ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…
ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…
ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…
ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…