ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಬಳಿಕ ಬುಧವಾರ ಬೆಳಗ್ಗೆ ಕುಮಾರಧಾರಾ ನದಿಯಲ್ಲಿ ಶ್ರೀದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಶ್ರೀ ದೇವರ ಅವಭೃತೋತ್ಸವ ಕುಮಾರಧಾರಾ ನದಿಯಲ್ಲಿ ನಡೆಯಿತು. #ಕುಕ್ಕೆಸುಬ್ರಹ್ಮಣ್ಯ #Kukkesubrahmanha #Kukke pic.twitter.com/mCW82QTc6d
— theruralmirror (@ruralmirror) November 30, 2022
ದೇವಳದಿಂದ ಬಂಡಿ ರಥದಲ್ಲಿ ಶ್ರೀದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು. ತದನಂತರ ಕುಮಾರಧಾರಾ ನದಿ ತಟದವರೆಗೆ ಸಾಗಿಬಂದು ನದಿಯಲ್ಲಿ ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ನೌಕಾವಿಹಾರ ನಡೆಯಿತು. ಬಳಿಕ ಅವಭೃತೋತ್ಸವ ನಡೆಯಿತು. ಶ್ರೀ ಕ್ಷೇತ್ರದ ಆನೆ ಯಶಸ್ವಿಯು ನದಿನೀರಿನಲ್ಲಿ ಜಲಕ್ರೀಡೆಯಾಡಿ ಸಂಭ್ರಮಿಸಿತು. ನೂರಾರು ಭಕ್ತಾದಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.
#KukkeSubrahmanya #ಕುಕ್ಕೆಸುಬ್ರಹ್ಮಣ್ಯ ಅವಭೃತೋತ್ಸವ pic.twitter.com/GKMjp3oPLj
— theruralmirror (@ruralmirror) November 30, 2022
#ಕುಕ್ಕೆಸುಬ್ರಹ್ಮಣ್ಯ #KukkeSubrahmanya ಅವಭೃತೋತ್ಸವ pic.twitter.com/dSfMLrA5hW
— theruralmirror (@ruralmirror) November 30, 2022
#ಕುಕ್ಕೆಸುಬ್ರಹ್ಮಣ್ಯ | ನೌಕಾವಿಹಾರ ಹಾಗೂ ಅವಭೃತೋತ್ಸವ | #Kukkesubrahmanya https://t.co/HS8ldk8FhM
— theruralmirror (@ruralmirror) November 30, 2022