ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಘ್ನನಾಶಕ ಗಣಪ ಉಪವಾಸದಲ್ಲಿ…!? | ಮೌನ ಪ್ರತಿಭಟನೆ ಮಾಡಿದ ಭಕ್ತರು….!! |

September 10, 2021
10:00 PM

ನಾಡಿನ ಪ್ರಸಿದ್ಧ ಹಾಗೂ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ವಿಘ್ನನಾಶಕ ಗಣಪ ಉಪವಾಸದಲ್ಲಿ..!?. ಹೀಗೊಂದು ಪ್ರಶ್ನೆ  ಎದ್ದಿದೆ. ಕಾರಣ, ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯ ಮೂವರು ಸದಸ್ಯರು “ವಿಘ್ನನಾಶಕ ಗಣಪ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಗಣಪ ಉಪವಾಸದಲ್ಲಿ ಇದ್ದಾನೆ” ಎಂದು ಶುಕ್ರವಾರ ಮೌನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ದೇವಸ್ಥಾನದ ಗೋಪುರ ಬಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಮೂಲಗಣಪನ ದರ್ಶನ ಬೇಕು , ಮೂಲಗಣಪತಿಗೆ ಪೂಜೆ ಬೇಕು ಎಂದು ಒತ್ತಾಯಿಸಿದ್ದಾರೆ.

Advertisement
Advertisement

Advertisement

ಕಡಬ ತಾಲೂಕಿನಲ್ಲಿ ಬರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಡಿನ ಪ್ರಸಿದ್ಧ ದೇವಸ್ಥಾನ. ಸಾಕಷ್ಟು ಮಂದಿ ಭಕ್ತರು  ನಾಡಿನ ವಿವಿದೆಡೆಯಿಂದ ಆಗಮಿಸುತ್ತಾರೆ. ನಾಗ ದೇವರಿಗೆ ವಿವಿಧ ರೀತಿಯ ಹರಕೆಯನ್ನೂ ಒಪ್ಪಿಸುತ್ತಾರೆ, ನೆಮ್ಮದಿ ಕಾಣುತ್ತಾರೆ. ಆದರೆ ಕಳೆದ ಕೆಲವು ಸಮಯಗಳಿಂದ ಇಲ್ಲಿ ವಿವಾದಗಳು ಸಾಕಷ್ಟು ಕಂಡುಬರುತ್ತಿದೆ. ಈ ಹಿಂದೆ ಸರ್ಪಸಂಸ್ಕಾರದ ವಿಚಾರವಾಗಿ ವಿವಾದ ಎದ್ದು ಸುದ್ದಿಯಾಗಿತ್ತು, ಆ ಬಳಿಕ ಕೊರೋನಾ ಕಾರಣದಿಂದ ಸೇವೆಗಳೂ ಕಡಿಮೆಯಾದವು, ವಿವಾದವೂ ತಣ್ಣಗಾಯಿತು. ಆ ಬಳಿಕವೂ ಸಣ್ಣ ಸಣ್ಣ ವಿವಾದಗಳು ಕಂಡುಬರುತ್ತಿತ್ತು. ಇದೀಗ ಭಕ್ತರೂ ಗಮನಿಸಬೇಕಾದ ಹಾಗೂ ಗಂಭೀರವಾದ ವಿವಾದವೊಂದು ಎದ್ದಿದೆ. ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ಉಪವಾಸದಲ್ಲಿದ್ದಾರೆ ಎನ್ನುವುದು ಈಗಿನ ವಿವಾದದ ವಿಷಯ. ಈ ವಿವಾದ ಬೆಳೆದು  ದೇವಸ್ಥಾನದ ಮುಂದೆ ಸಾಂಕೇತಿಕವಾಗಿ ಮೂರು ಮಂದಿ ಧರಣಿ ಕುಳಿತುಕೊಳ್ಳುವ ಸ್ಥಿತಿಗೆ ಬಂದಿದೆ. ಅದರಲ್ಲಿ ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಭಾಗವಹಿಸಿದ್ದರು. ಹೀಗಾಗಿ ಈ ಪ್ರಕರಣ ಈಗ ಗಂಭೀರತೆ ಪಡೆದುಕೊಂಡಿದೆ.‌

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ದೇವರ ವಿಗ್ರಹವನ್ನು ಭಕ್ತರ ದರ್ಶನಕ್ಕೆ ಇಡಬೇಕು, ಒಳಾಂಗಣದಲ್ಲಿ ಸೂಕ್ತವಾದ ಗುಡಿಯನ್ನು ನಿರ್ಮಿಸಿ ಗುಡಿಯಲ್ಲಿ ಮೂಲ ಮಹಾಗಣಪತಿ ದೇವರನ್ನು ಪ್ರತಿಷ್ಟಾಪನೆ  ಮಾಡಿ ಕ್ರಮಬದ್ಧವಾದ ಪೂಜೆ ಮತ್ತು ನೈವೇದ್ಯ ನಡೆಸಬೇಕು ಎಂದು ಆಗ್ರಹಿಸಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ಶುಕ್ರವಾರ ನಡೆಸಲಾಯಿತು. ಈ ಸಾಂಕೇತಿಕ ಧರಣಿಯಲ್ಲಿ  ಪ್ರಮುಖರಾದ ಶ್ರೀನಾಥ ಟಿಎಸ್, ಕೃಷ್ಣಮೂರ್ತಿ ಭಟ್, ಪ್ರಶಾಂತ್ ಭಟ್ ಮಾಣಿಲ ಭಾಗವಹಿಸಿದ್ದರು.

Advertisement

ಎರಡು ವಾರಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಆಡಳಿತಕ್ಕೆ ಮತ್ತು  ಸರಕಾರಕ್ಕೆ ಮನವಿ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಪ್ರಮುಖರು,    ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ  ದೇವರಿಗೆ ಸರಿಯಾಗಿ ಪೂಜೆ ನಡೆಯಬೇಕು ಹಾಗೂ ಮೂಲ ಗಣಪತಿ ದೇವರಿಗೆ ಪ್ರತ್ಯೇಕ ಗುಡಿ ನಿರ್ಮಾಣವಾಗಬೇಕು, ನೈವೇದ್ಯ ಸರಿಯಾಗಬೇಕು ಎಂದು ಒತ್ತಾಯಿಸಿದ್ದರು. ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಭಗವಂತನ ಸರಿಯಾದ ಅನುಗ್ರಹ ಹಾಗೂ ಫಲ ಸದ್ಯ ಸಿಗುತ್ತಿದ್ದರೂ ಪರಿಪೂರ್ಣವಾದ ಫಲ ಸಿಗಬೇಕಾದರೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿರಬೇಕು ಎಂಬುದು ಹಿತರಕ್ಷಣಾ ವೇದಿಕೆ ಒತ್ತಾಯವಾಗಿತ್ತು. ಆದರೆ ಗಣೇಶ ಚೌತಿಯಂದು ಕೂಡಾ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ನಡೆಸಿದರು. ಸದ್ಯ ಇದು ಸಾಂಕೇತಿಕ ಧರಣಿಯಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಇಲ್ಲ, ಧಾರ್ಮಿಕ ಹಿತಾಸಕ್ತಿ ಮಾತ್ರಾ ಎಂದು ಧರಣಿಯಲ್ಲಿ  ಭಾಗವಹಿಸಿದ ಪ್ರಶಾಂತ್‌ ಭಟ್‌ ಮಾಣಿಲ ಹೇಳಿದ್ದಾರೆ.

Advertisement

ಪ್ರಶಾಂತ್‌ ಭಟ್‌ ಮಾಣಿಲ ಧರಣಿ ಬಗ್ಗೆ ಹೀಗೆ ಹೇಳುತ್ತಾರೆ…..

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror